ತೊಗರಿ ರೈತರ ಕಲ್ಯಾಣಕ್ಕಿಲ್ಲ ಯೋಜನೆ
ಬೆಳೆದ ಬೆಲೆ ಪೂರ್ಣ ಖರೀದಿಸಿಹತ್ತಿ ಬೆಳೆದ ರೈತನೂ ಸಂಕಷ್ಟದಲ್ಲಿ
Team Udayavani, Oct 6, 2019, 10:57 AM IST
ಸಂತೋಷ ಬಿ. ನವಲಗುಂದ
ಯಡ್ರಾಮಿ: ತೊಗರಿಗೆ ಇತ್ತೀಚೆಗೆ ಭೌಗೋಳಿಕ ಮಾನ್ಯತೆ(ಜಿಆರ್ಆಯ್) ದೊರಕಿದ್ದರಿಂದ, ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೆಳೆಗಾರರಿಗೆ ಏನು ಲಾಭವಾಗಬಲ್ಲದು ಎನ್ನುವ ಚರ್ಚೆ ಶುರುವಾಗಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ ಮಳೆ ಕೊರತೆ ಎದ್ದು ಕಂಡರೂ, ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಬಂದ ಅಲ್ಪ ಸ್ವಲ್ಪ ಮಳೆ ರೈತನ ಮುಖದಲ್ಲಿ ಮಂದಹಾಸ ಮೂಡಿಸಿದೆ.
ತಾಲೂಕಿನಾದ್ಯಂತ ಶೇ. 40 ಹತ್ತಿ, ಶೇ. 35 ತೊಗರಿ ಬಿತ್ತನೆಯಾಗಿದೆ. ಸಹಕಾರ ಸಂಘಗಳು ರೈತ ಬೆಳೆದ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸುವುದು ಕೇವಲ 10 ಕ್ವಿಂಟಲ್ ಮಾತ್ರ. ಪ್ರತಿ ಕ್ವಿಂಟಲ್ಗೆ ನೀಡುವ 6100 ರೂ. ನಮ್ಮ ಖಾತೆಗೆ ಜಮೆ ಆಗಲು ಮೂರ್ನಾಲ್ಕು ತಿಂಗಳು ಕಾಯಲೇಬೇಕು. ಇನ್ನು ಉಳಿದ ತೊಗರಿ ಯಾರಿಗೆ, ಎಲ್ಲಿ ಮಾರಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಸರ್ಕಾರ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸಿ ರೈತರ ಕಲ್ಯಾಣ ಬಯಸುವುದಾದರೆ ನಾವು ಬೆಳೆದ ಪೂರ್ಣ ತೊಗರಿ ಖರೀದಿಸಬೇಕು. ಪ್ರತಿ ಕ್ವಿಂಟಲ್ಗೆ 8 ಸಾವಿರ ರೂ. ದರ ನಿಗದಿ ಮಾಡಬೇಕು. ಆಗ ನಿಜವಾದ ಕಾಳಜಿ ಮಾಡಿದಂತೆ ಆಗುತ್ತದೆ ಎನ್ನುತ್ತಾರೆ ರೈತರು.
ಸಂಬಂಧಪಟ್ಟವರು ತೊಗರಿ ಖರೀದಿ ಪ್ರಮಾಣ ಹಾಗೂ ಬೆಂಬಲ ಬೆಲೆ ಪರಿಷ್ಕರಿಸಿ, ರೈತ ಬೆಳೆದ ಸಂಪೂರ್ಣ ತೊಗರಿ ಖರೀದಿಸುವಂತೆ ಆಗಬೇಕು ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್