ಫೋಬಿಯಾ ಆತಂಕ ಬೇಡ


Team Udayavani, Jun 25, 2019, 5:00 AM IST

35

ಎಲ್ಲ ವಯೋಮಾನದವರಿಗೂ ಯಾವುದಾದರೊಂದು ವಿಷಯದ ಬಗ್ಗೆ ಭಯ ಇದ್ದೇ ಇರುತ್ತದೆ. ನನಗೆ ಯಾವುದರ ಬಗ್ಗೆಯೂ ಭಯವಿಲ್ಲ ಎನ್ನುವವರು ಬಹಳ ಕಡಿಮೆ. ಆದರೆ ಈ ಭಯ ವಿಪರೀತವಾದರೆ ಅದನ್ನು ಫೋಬಿಯಾ ಎನ್ನಬಹುದು. ಇದು ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರಿದರೆ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಬಹುಮುಖ್ಯ.

ಫೋಬಿಯಾ ಎಂದರೆ ಭಯ ಎಂದರ್ಥ. ಯಾವುದಾದರೊಂದು ವಸ್ತು ಅಥವಾ ಸನ್ನಿವೇಶದ ಅಸಹಜ, ಅರ್ಥಹೀನ ಅತಿರೇಕದ ಭಯವೆನ್ನುವುದು ಫೋಬಿಯಾದ ವ್ಯಾಖ್ಯಾನ. ಫೋಬಿಯಾವನ್ನು ಒಂದು ರೀತಿಯ ಮಾನಸಿಕ ಅಸಮತೋಲನ ಎಂದು ಕರೆಯಲಾಗುತ್ತದೆ. ಪೋಬಿಯಾದಿಂದ ಮಾನಸಿಕ ನೆಮ್ಮದಿ ಕಳೆದುಕೊಂಡು ಇಲ್ಲದ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಕೆಲವು ಸನ್ನಿವೇಶಗಳು ಪ್ರಾಣಕ್ಕೆ ಸಂಚಕಾರ ತರುವಷ್ಟು ಅಪಾಯಕಾರಿಯಾಗಬಲ್ಲವೆಂದರೆ ಆಶ್ಚರ್ಯವೆನಿಸಬಹುದು.

ವಿವಿಧ ಬಗೆ

ಕೆಲವರಿಗೆ ಕೆಲವು ವಿಷಯಗಳ ಭಯ ಇರುತ್ತದೆ. ಕೆಲವರು ಎತ್ತರದ, ಮುಚ್ಚಿದ ಸ್ಥಳಗಳಲ್ಲಿದ್ದಾಗ ಆತಂಕ ಎದುರಿಸುತ್ತಾರೆ. ಇನ್ನು ಕೆಲವರು ಜನಸಮೂಹದಲ್ಲಿದ್ದಾಗ ಅಥವಾ ಅಪರಿಚಿತರ ಸ್ಪರ್ಶಕ್ಕೆ ಭಯ ಬೀಳುತ್ತಾರೆ. ಇಂಥವರು ಭಾವನಾತ್ಮಕ ಅಡಚಣೆಗಳಿಂದ ನರಳುತ್ತಿದ್ದಾರೆ ಎನ್ನಬಹುದು. ಯಾರಾದರೂ ಜೋರಾಗಿ ಕೂಗಿದರೆ, ಸ್ವಲ್ಪ ಸನಿಹದಲ್ಲೇ ಯಾರಾದರೂ ಹಾದು ಹೋದರೆ ಆಘಾತಕ್ಕೆ ಒಳಗಾದವರಂತೆ ವಿಪರೀತ ಬೆವರುವುದು, ನಾಚುವುದು, ಅಳುವುದು ಮಾಡುತ್ತಾರೆ. ಇಂಥವರ ಮೇಲೆ ಯಾರಾದರೂ ಬಲವಾಗಿ ಭಾವನಾತ್ಮಕ ಒತ್ತಡ ಅಥವಾ ಅಭಿಪ್ರಾಯ ಹೇರಲು ನೋಡಿದರೆ ಅವರ ಪ್ರತಿರೋಧ ಶಕ್ತಿ ದುರ್ಬಲವಾಗಿರುತ್ತದೆ.

ಫೋಬಿಯಾ ಉಂಟಾದಾಗ ಬೆವರುತ್ತಾರೆ, ಅಸ್ವಾಭಾವಿಕ ಉಸಿರಾಟ, ಹೃದಯ ಬಡಿತದ ಜೋರಾಗುತ್ತದೆ, ತುಟಿಗಳು ಒಣಗುತ್ತವೆೆ, ಗೊಂದಲದ ನಡವಳಿಕೆ ಕಾಣಿಸಿಕೊಳ್ಳುತ್ತದೆ. ಫೋಬಿಯಾದ ಪ್ರಮುಖ ಲಕ್ಷಣವಾದ ಇದು ಜಾಸ್ತಿ ಆಗುತ್ತಲೇ ಹೋಗುತ್ತದೆ. ಸೂಕ್ತ ಸಮಯದಲ್ಲಿ ಅವರಿಗೆ ಚಿಕಿತ್ಸೆ ನೀಡದೇ ಇದ್ದರೆ ಇದು ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ಫೋಬಿಯಾ ಎಂದು ಪರಿಗಣಿಸಲು ವ್ಯಕ್ತಿಗೆ ಎತ್ತರದ ಸ್ಥಳಗಳ ಬಗ್ಗೆ ಭಯ ಇರಬೇಕು ಮತ್ತು ಅವರು ಯಾವುದೋ ಒಂದು ವಿಷಯಕ್ಕೆ ನಿಜವಾಗಿಯೂ ಹೆದರುತ್ತಿದ್ದರೆ ಕಾರಣ ಅವರು ಮಗುವಾಗಿರುವಾಗ ಆ ವಿಷಯವಾಗಿ ಭಯಪಟ್ಟಿರುತ್ತಾರೆ ಎನ್ನುತ್ತದೆ ಸಂಶೋಧನೆ.

ಏರೋ ಫೋಬಿಯಾ: ಹಾರಾಟದ ಬಗ್ಗೆ ಭಯ, ಇವರಿಗೆ ವಿಮಾನ ಪ್ರಯಾಣದ ಭಯವೂ ಇರುತ್ತದೆ.

ಡ್ರೈವಿಂಗ್‌ ಫೋಬಿಯಾ: ವಾಹನ ಚಾಲನೆ ಬಗ್ಗೆ ಭಯ, ರಕ್ತ, ಗಾಯ, ಇಂಜೆಕ್ಷನ್‌ ಫೋಬಿಯಾ

ಅಕ್ವಾಫೋಬಿಯಾ: ನೀರಿನ ಭಯ

ಝೂಫೋಬಿಯಾ: ಪ್ರಾಣಿಗಳ ಭಯ

ಎಕ್ರೋಫೋಬಿಯಾ: ಎತ್ತರದ ಭಯ

ಕ್ಲಾಸ್ಟ್ರೋ ಫೋಬಿಯಾ: ಇಕ್ಕಟ್ಟಿನ ಜಾಗದ ಭಯ

ಹೈಪೋಕೊಂಡ್ರಿಯಾ: ರೋಗ ಪೀಡಿತರಾಗುವ ಭಯ

ಎಸ್ಲ್ಕಾಫೋಬಿಯಾ: ಎಸ್ಕಾಲೇಟರ್‌ನಲ್ಲಿ ಹೋಗುವ ಭಯ

ಚಿಕಿತ್ಸೆ
ಯಾವುದೇ ಫೋಬಿಯಾವನ್ನು ಗುಣಪಡಿಸಬಹುದಾಗಿದೆ. ಔಷಧಕ್ಕಿಂತಲೂ ಮುಖ್ಯವಾಗಿ ವ್ಯಕ್ತಿಯ ಕಡೆಗೆ ಹೆಚ್ಚಿನ ಗಮನ ನೀಡುವುದು, ಪ್ರೀತಿಯಿಂದ ಅವರನ್ನು ಗುಣಪಡಿಸಬಹುದಾಗಿದೆ.

1 ಖನ್ನತೆಗೆ ನೀಡುವ ಔಷಧಗಳನ್ನು ವೈದ್ಯರು ನೀಡ ಬಹುದು. ಅದನ್ನು ವೈದ್ಯರು ಹೇಳಿದ ಸಮಯ ದವರೆಗೆ ಸರಿಯಾಗಿ ಬಳಸಬೇಕು. ವೈದ್ಯರ ಮಾರ್ಗದರ್ಶ ತೆಗೆದುಕೊಳ್ಳುವುದು ಸೂಕ್ತ.

2 ಯೋಗ, ಧ್ಯಾನ, ಪ್ರಾಣಾಯಾಮ, ಸಂಗೀತ, ಕ್ರೀಡೆ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.

3 ಭಯ ಪಡುವ ವಿಚಾರದ ಕುರಿತಂತೆ ಅದನ್ನು ಸರಿಯಾಗಿ ನಿಭಾಯಿಸುವ ಕೌಶಲವನ್ನು ತಿಳಿಸಲು ಕೌನ್ಸೆಲಿಂಗ್‌ ಪಡೆಯುವುದು ಅವಶ್ಯ.

4 ವ್ಯಕ್ತಿಯ ಜತೆ ನಾವಿದ್ದೇವೆ ಎಂದು ಹೇಳುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು

5 ವಾತಾವರಣದಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ವ್ಯಕ್ತಿ ನೆಮ್ಮದಿಯಿಂದ ಇರುವಂತೆ ಮಾಡುವುದು.ಅಂದರೆ ಅವರನ್ನು ಪ್ರಶಾಂತವಾದ ಜಾಗಕ್ಕೆ ಕರೆದುಕೊಂಡು ಮನಸ್ಸು ಬದಲಾಯಿಸುವುದು.

ಸೂಕ್ತ ಚಿಕಿತ್ಸೆಯಿಂದ ಗುಣಮುಖ

ವಿವಿಧ ಬಗೆಯ ಫೋಬಿಯಾಗಳನ್ನು ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸ ಬಹುದು. ಅದಕ್ಕಾಗಿ ಫೋಬಿಯಾಕ್ಕೊಳಗಾದವರು ಹಾಗೂ ಅವರ ಮನೆಯವರ ಸಹಕಾರ ಅಗತ್ಯ. – ಡಾ| ಸುಚೇತ ಮಾನಸಿಕ ತಜ್ಞರು

ಲಕ್ಷಣಗಳು

ಫೋಬಿಯಾಕ್ಕೆ ಒಳಗಾದವರು ಅವರು ಹೆದರುವ ವಿಷಯ, ಜಾಗ, ವ್ಯಕ್ತಿಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ಅಪರಿಚಿತ ದಾರಿ, ಸ್ಥಳಗಳಲ್ಲಿ ಭಯ ಅಥವಾ ಪರಿಚಿತ ಸ್ಥಳಗಳ ಬಗ್ಗೆ ಒಂದು ರೀತಿ ನಿರ್ಲಕ್ಷ್ಯ ವಹಿಸುತ್ತಾರೆ. ಅಲ್ಲದೆ, ಒಂದು ನಿರ್ದಿಷ್ಟ ವಿಷಯದ ಬಗ್ಗೆ ಇವರಲ್ಲಿ ಅವಿವೇಕದ ಭಯ ಕಾಡುತ್ತದೆ. ಸಾಧ್ಯವಾಗುವವರೆಗೆ ಬೇರೆ ವ್ಯಕ್ತಿಗಳಿಂದ ಈ ವಿಷಯಗಳನ್ನು ಮುಚ್ಚಿಡುವುದು, ಕಣ್ಣು ತಪ್ಪಿಸುವುದು ಉತ್ತಮ ಎಂದು ಅವರು ಭಾವಿಸುತ್ತಾರೆ.

••••ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

6-

Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.