ಮನೆಯಲ್ಲೇ ಯೋಗಾಸನ ಮಾಡಿ: ಚಳಿಗಾಲ ಆರೋಗ್ಯ ಕಾಪಾಡಿ

ಬೆನ್ನಿನ ಭಾಗದ ನೋವು ಶಮನವಾಗುವುದು. ಕಿಡ್ನಿಗೂ ಇದು ಒಳ್ಳೆಯದು

Team Udayavani, Dec 21, 2020, 11:00 AM IST

ಮನೆಯಲ್ಲೇ ಯೋಗಾಸನ ಮಾಡಿ: ಚಳಿಗಾಲ ಆರೋಗ್ಯ ಕಾಪಾಡಿ

ಚಳಿಗಾಲದಲ್ಲಿ ಬೆಳಗ್ಗೆ ಏಳುವುದೇ ಬೇಡ ಎನ್ನಿಸುತ್ತದೆ. ಹೀಗಿರುವಾಗ ವಾಕಿಂಗ್‌, ಜಾಗಿಂಗ್‌ ಹೋಗೋಕೆ ಮನಸ್ಸಾದರೂ ಹೇಗೆ ಬರುತ್ತದೆ. ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಯಾಕೆಂದರೆ ಚಳಿಗಾಲದಲ್ಲಿ ಹೆಚ್ಚಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ, ಮಾತ್ರವಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಹಲವು ಸೋಂಕುಗಳಿಗೆ ಬಲಿಯಾಗಬೇಕಾಗುತ್ತದೆ. ಹೀಗಾಗಿ ಆರೋಗ್ಯ ಕಾಪಾಡಲು ಮನೆಯಲ್ಲೇ ಕೆಲವೊಂದು ಯೋಗಾಸನಗಳನ್ನು ಮಾಡಬಹುದು.

ಸೇತು ಬಂಧಾಸನ


ಬೆನ್ನ ಮೇಲೆ ಮಲಗಿ ನಡುವೆ ಅಂತರವಿರುವಂತೆ ಕಾಲು ಮುಂದೆ ಚಾಚಿ. ನಿಧಾನವಾಗಿ ದೇಹದ ಮೇಲಿನ ಭಾಗವನ್ನು ಮೇಲಕ್ಕೆತ್ತಿ. ಬೆನ್ನ ಕೆಳಗೆ ಕೈ ಇಟ್ಟು ಉಸಿರು ಎಳೆದು ನಿಧಾನವಾಗಿ ಬಿಡುತ್ತ ಬನ್ನಿ. ಶ್ವಾಸಕೋಶವನ್ನು ಆರೋಗ್ಯವಾಗಿಡುವ ಸೇತುಬಂಧಾಸನ ಮಧುಮೇಹ, ಥೈರಾಯ್ಡ, ನಿದ್ರಾಹೀನತೆ, ಸಂಧಿವಾತ, ಅಸ್ತಮಾ ನಿವಾರಣೆಗೆ ಅತ್ಯುತ್ತಮ. ಬೆನ್ನು, ಭುಜ, ಸ್ನಾಯುಗಳಿಗೂ ಒಳ್ಳೆಯದು. ಮನಸ್ಸಿಗೆ ಶಾಂತಿ, ಚರ್ಮ, ಕೂದಲಿನ ಆರೋಗ್ಯಕ್ಕೂ ಅತ್ಯುತ್ತಮ.

ವೃಕ್ಷಾಸನ
ನೇರ ನಿಂತು ಮುಂದಿರುವ ವಸ್ತುವಿನ ಮೇಲೆ ನೇರ ದೃಷ್ಟಿಯನ್ನಿಡಬೇಕು. ನಿಧಾನವಾಗಿ ಉಸಿರಾಡುತ್ತ ಎಡ ಕಾಲನ್ನು ಮೇಲೆತ್ತಿ ಬಲ ತೊಡೆಯ ಮೇಲಿಡಿ. ಕೈಗಳನ್ನು ನಿಧಾನವಾಗಿ ತಲೆಯಿಂದ ಮೇಲೆತ್ತಿ ಕೈ ಮುಗಿಯುವ ರೀತಿಯಲ್ಲಿ ಜೋಡಿಸಿ. ಉಸಿರು ತೆಗೆದುಕೊಂಡು ಕೆಲವು ಸೆಕೆಂಡ್‌ ಹಾಗೇ ಇದ್ದು ಸಾಮಾನ್ಯ ಭಂಗಿಗೆ ಬನ್ನಿ. ಈ ಆಸನವು ಏಕಾಗ್ರತೆ ಹೆಚ್ಚಿಸಲು, ದೇಹ, ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು, ಕಾಲುಗಳಿಗೆ ಬಲ ತುಂಬಲು ಸಹಕಾರಿ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಚಕ್ರಾಸನ
ಕೈ ಮತ್ತು ಮೊಣ ಕಾಲನ್ನು ನೆಲದ ಮೇಲೆ ಇಡಿ. ಮೊಣಕಾಲುಗಳು ಸೊಂಟಕ್ಕೆ ಸಮಾನಾಂತರವಾಗಿರಬೇಕು. ಮೊಣಕೈ ಭುಜದ ನೇರಕ್ಕಿರಲಿ. ಉಸಿರಾಡುತ್ತ ತಲೆ, ಎದೆಯನ್ನು ಬಾಣದಂತೆ ಮೇಲೆತ್ತಿ. ಈ ಭಂಗಿಯಿಂದ ಬೆನ್ನು ಹುರಿ ಆರೋಗ್ಯವಾಗಿರುತ್ತದೆ. ಕುತ್ತಿಗೆ, ಬೆನ್ನಿನ ಭಾಗದ ನೋವು ಶಮನವಾಗುವುದು. ಕಿಡ್ನಿಗೂ ಇದು ಒಳ್ಳೆಯದು. ಒತ್ತಡ ನಿವಾರಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ.

ಉಷ್ಟ್ರಾಸನ


ಮೊಣಕಾಲಿನಲ್ಲಿ ನಿಂತು ಸೊಂಟದ ಮೇಲೆ ಕೈಗಳನ್ನಿಡಿ. ಬೆರಳುಗಳು ಕೆಳಮುಖವಾಗಿ ಬೆನ್ನಿಗೆ ಬೆಂಬಲವಾಗಿರಲಿ. ನಿಧಾನವಾಗಿ ಉಸಿರಾಡುತ್ತ ಮೊಣಕೈಯಿಂದ ಮೇಲಿನ ಭಾಗವನ್ನು ಹಿಂದೆ ತೆಗೆದುಕೊಂಡು ಹೋಗಿ ಹಿಂಗಾಲು ಹಿಡಿಯಿರಿ. ಕುತ್ತಿಗೆಯು ಹಿಂದಕ್ಕೆ ಬಾಗಲಿ. ಅಸ್ತಮಾ, ಥೈರಾಯ್ಡ, ಗರ್ಭಕೋಶ ಸಮಸ್ಯೆ ಉಳ್ಳವರಿಗೆ ಅತ್ಯುತ್ತಮ ಆಸನ. ಇದು ಹೊಟ್ಟೆಯ ಕೊಬ್ಬು ಕಡಿಮೆ ಮಾಡಿ ಒತ್ತಡ, ಆತಂಕ, ಖನ್ನತೆಯನ್ನು ದೂರ ಮಾಡುತ್ತದೆ.

ಅಧೋಮುಖ ಶ್ವಾನಾಸನ
ನೆಲದಲ್ಲಿ ಅಂಗೈ ಮತ್ತು ಮೊಣಕಾಲು ಬಲದಿಂದ ನಿಂತು ದೇಹವನ್ನು ಮೇಲೆತ್ತಿ. ಕಣ್ಣುಗಳು ನಾಭಿಯನ್ನು ನೋಡುತ್ತಿರಬೇಕು. ದೇಹಕ್ಕೆ ಸಂಪೂರ್ಣ ಶಕ್ತಿ ತುಂಬುವ ಈ ಆಸನ ಭುಜ, ಕೈ ನೋವು ಶಮನ ಮಾಡುವುದು. ತಲೆನೋವು, ನಿದ್ರಾಹೀನತೆ, ನಿಶ್ಯಕ್ತಿಯನ್ನು ಹೋಗಲಾಡಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.