Health: ಹೃದಯದ ಮೇಲೆ ಕೀಟೊ ಪರಿಣಾಮವೇನು ?


Team Udayavani, Feb 18, 2024, 11:00 AM IST

4-keto

ಹೃದಯದ ಆರೋಗ್ಯದ ಮೇಲೆ ಕಿಟೊಜೆನಿಕ್‌ (ಕಿಟೊ) ಪಥ್ಯಾಹಾರದ ಪರಿಣಾಮಗಳ ಬಗೆಗಿನ ಚರ್ಚೆ ಮತ್ತು ಸಂಶೋಧನೆಗಳು ಇನ್ನೂ ನಡೆಯುತ್ತಿವೆ. ಕೆಲವು ಸಂಶೋಧನೆಗಳು ಕಿಟೊ ಪಥ್ಯಾಹಾರವು ಹೃದಯ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳುತ್ತವೆಯಾದರೆ ಹೃದ್ರೋಗಗಳ ಕೆಲವು ಅಪಾಯ ಕಾರಣಗಳ ಮೇಲೆ ಕೀಟೊ ಪಥ್ಯಾಹಾರ ಬೀರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಇನ್ನು ಕೆಲವು ಅಧ್ಯಯನಗಳು ಬೊಟ್ಟು ಮಾಡುತ್ತವೆ. ಹೀಗಾಗಿ ಪಥ್ಯಾಹಾರ ಆಯ್ಕೆ ಮಾಡಿಕೊಳ್ಳುವುದಕ್ಕೆ ಮುನ್ನ ವಾದ-ವಿವಾದದ ಎರಡೂ ಆಯಾಮಗಳನ್ನು ಅರ್ಥ ಮಾಡಿಕೊಂಡು ವೈಯಕ್ತಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಒಳಿತು. ಹೃದಯ ಆರೋಗ್ಯದ ಮೇಲೆ ಕಿಟೊ ಪಥ್ಯಾಹಾರ ಹೇಗೆ ಪರಿಣಾಮ ಬೀರಬಹುದು ಎಂಬ ವಿವರ ಇಲ್ಲಿದೆ. ­

ತೂಕ ಇಳಿಕೆ: ಕೀಟೊ ಪಥ್ಯಾಹಾರದಿಂದ ದೇಹತೂಕದಲ್ಲಿ ಗಮನಾರ್ಹ ಇಳಿಕೆಯಾಗುತ್ತದೆ. ಇದರಿಂದ ರಕ್ತದೊತ್ತಡ ಇಳಿಕೆ, ಕೊಲೆಸ್ಟರಾಲ್‌ ಮಟ್ಟ ನಿಯಂತ್ರಣ, ರಕ್ತದಲ್ಲಿ ಸಕ್ಕರೆಯಂಶದ ಮೇಲೆ ನಿಯಂತ್ರಣದಂತಹ ಹೃದಯ ಆರೋಗ್ಯಕ್ಕೆ ಪೂರಕವಾದ ಅನುಕೂಲಗಳು ಆಗಬಹುದು. ­

ಟ್ರೈಗ್ಲಿಸರೈಡ್‌ ಇಳಿಕೆ: ಕಿಟೊ ಪಥ್ಯಾಹಾರದಿಂದ ಟ್ರೈಗ್ಲಿಸರೈಡ್‌ ಮಟ್ಟ ಇಳಿಕೆಯಾಗಬಹುದು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಟ್ರೈಗ್ಲಿಸರೈಡ್‌ ಮಟ್ಟ ತಗ್ಗಿದರೆ ಹೃದಯದ ಆರೋಗ್ಯಕ್ಕೆ ಪೂರಕ. ಟ್ರೈಗ್ಲಿಸರೈಡ್‌ ಮಟ್ಟ ಹೆಚ್ಚಿದ್ದರೆ ಹೃದ್ರೋಗ ಉಂಟಾಗುವ ಅಪಾಯ ಅಧಿಕ. ­

“ಉತ್ತಮಎಚ್‌ಡಿಎಲ್‌ ಕೊಲೆಸ್ಟರಾಲ್‌ ಹೆಚ್ಚಳ: ಕಿಟೊ ಪಥ್ಯಾಹಾರದಿಂದ “ಉತ್ತಮ’ ಕೊಲೆಸ್ಟರಾಲ್‌ ಎಂದು ಕರೆಯಲ್ಪಡುವ ಹೈ ಡೆನ್ಸಿಟಿ ಲಿಪೊಪ್ರೊಟೀನ್‌ (ಎಚ್‌ಡಿಎಲ್‌) ಕೊಲೆಸ್ಟರಾಲ್‌ ಮಟ್ಟ ಹೆಚ್ಚುತ್ತದೆ. ಎಚ್‌ಡಿಎಲ್‌ ಮಟ್ಟ ಹೆಚ್ಚಿರುವುದಕ್ಕೂ ಹೃದ್ರೋಗ ಅಪಾಯ ಕಡಿಮೆಯಾಗುವುದಕ್ಕೂ ಸಂಬಂಧವಿದೆ.

ಸ್ಯಾಚುರೇಟೆಡ್‌ ಕೊಬ್ಬು ಸೇವನೆ ಹೆಚ್ಚಳ: ಕಿಟೊ ಪಥ್ಯಾಹಾರದ ಒಂದು ಕಳವಳಕಾರಿ ಅಂಶ ಎಂದರೆ ಸ್ಯಾಚುರೇಟೆಡ್‌ ಕೊಬ್ಬುಗಳ ಸೇವನೆ ಹೆಚ್ಚುವುದು. ಇದರಿಂದ “ಕೆಟ್ಟ’ ಕೊಲೆಸ್ಟರಾಲ್‌ ಎಂದು ಕರೆಯಲ್ಪಡುವ ಲೋ ಡೆನ್ಸಿಟಿ ಲಿಪೊಪ್ರೊಟೀನ್‌ (ಎಲ್‌ ಡಿಎಲ್‌) ಕೊಲೆಸ್ಟರಾಲ್‌ ಮಟ್ಟ ಹೆಚ್ಚುತ್ತದೆ. ಎಲ್‌ಡಿಎಲ್‌ ಮಟ್ಟ ಹೆಚ್ಚಿರುವುದು ಹೃದ್ರೋಗ ಅಪಾಯಕ್ಕೆ ಕಾರಣವಾಗುವ ಅಂಶಗಳಲ್ಲಿ ಒಂದು.

ಪೌಷ್ಟಿಕಾಂಶ ಅಸಮತೋಲನ: ಕಿಟೊ ಪಥ್ಯಾಹಾರವು ಹಣ್ಣುಹಂಪಲು, ತರಕಾರಿಗಳು ಮತ್ತು ಇಡೀ ಧಾನ್ಯಗಳಂತಹ ಕಾಬೊìಹೈಡ್ರೇಟ್‌ ಸಮೃದ್ಧ ಆಹಾರವಸ್ತುಗಳ ಸೇವನೆಯ ಮೇಲೆ ನಿಯಂತ್ರಣ ವಿಧಿಸುತ್ತದೆ. ಈ ಆಹಾರವಸ್ತುಗಳು ಹೃದಯ ಆರೋಗ್ಯಕ್ಕೆ ಪೂರಕವಾದ ಖನಿಜ, ವಿಟಮಿನ್‌ಗಳು ಮತ್ತು ನಾರಿನಂಶದ ಪ್ರಮುಖ ಮೂಲಗಳಾಗಿವೆ. ಪೌಷ್ಟಿಕಾಂಶಗಳ ಅಸಮತೋಲನದಿಂದ ದೀರ್ಘ‌ಕಾಲೀನವಾಗಿ ಋಣಾತ್ಮಕ ಪರಿಣಾಮಗಳು ಉಂಟಾಗಬಹುದು. ­

ಎಂಡೊಥೇಲಿಯಲ್‌ ಕಾರ್ಯಚಟುವಟಿಕೆಯ ಮೇಲೆ ಸಂಭಾವ್ಯ ಪರಿಣಾಮ: ಕಿಟೊ ಪಥ್ಯಾಹಾರದಿಂದ ರಕ್ತನಾಳಗಳ ಆರೋಗ್ಯಕ್ಕೆ ಸಂಬಂಧಿಸಿದ ಎಂಡೊಥೇಲಿಯಲ್‌ ಕಾರ್ಯಚಟುವಟಿಕೆಗಳಿಗೆ ಅಡಚಣೆ ಉಂಟುಮಾಡಬಹುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಎಂಡೊಥೇಲಿಯಲ್‌ ಕಾರ್ಯಚಟುವಟಿಕೆಗಳಿಗೆ ಕುಂದು ಉಂಟಾಗುವುದು ಹೃದ್ರೋಗ ಬೆಳವಣಿಗೆ ಹೊಂದಲು ಪೂರಕ ಸನ್ನಿವೇಶವನ್ನು ನಿರ್ಮಿಸುತ್ತದೆ.

­ದೀರ್ಘ‌ಕಾಲೀನ ಅಧ್ಯಯನ ಕಡಿಮೆ: ಕಿಟೊ ಪಥ್ಯಾಹಾರವು ಹೃದಯ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತಾಗಿ ಇದುವರೆಗೆ ನಡೆದಿರುವ ಅಧ್ಯಯನಗಳು ತುಲನಾತ್ಮಕವಾಗಿ ಕಿರು ಅವಧಿಯವು. ದೀರ್ಘ‌ಕಾಲದಿಂದ ಕಿಟೊ ಪಥ್ಯಾಹಾರವನ್ನು ಅನುಸರಿಸಿದರೆ ಹೃದಯದ ಒಟ್ಟಾರೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗಬಲ್ಲವು ಎಂಬುದನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ದೀರ್ಘ‌ಕಾಲೀನ ಅಧ್ಯಯನದ ಅಗತ್ಯವಿದೆ.

ಹೃದಯದ ಆರೋಗ್ಯದ ಮೇಲೆ ಕಿಟೊಜೆನಿಕ್‌ ಪಥ್ಯಾಹಾರದ ಪರಿಣಾಮಗಳು ಸಂಕೀರ್ಣವಾಗಿವೆ ಮತ್ತು ಅವುಗಳನ್ನು ಇನ್ನೂ ಸಮಗ್ರವಾಗಿ ಅರಿತುಕೊಳ್ಳಲು ಆಗಿಲ್ಲ. ತೂಕ ಇಳಿಕೆ, ಹೃದ್ರೋಗಕ್ಕೆ ಕಾರಣವಾಗಬಲ್ಲ ಕೆಲವು ಅಂಶಗಳು ದೂರವಾಗುವಂತಹ ಸಂಭಾವ್ಯ ಪ್ರಯೋಜನಗಳು ಇವೆಯಾದರೂ ಹೈ ಸ್ಯಾಚುರೇಟೆಡ್‌ ಕೊಬ್ಬಿನಂಶ ಹಾಗೂ ಪೌಷ್ಟಿಕಾಂಶ ಸಮತೋಲನ ಮತ್ತು ರಕ್ತನಾಳಗಳ ಕಾರ್ಯಚಟುವಟಿಕೆಗಳ ಮೇಲೆ ಸಂಭಾವ್ಯ ಪ್ರತಿಕೂಲ ಪರಿಣಾಮಗಳು ಈ ಪಥ್ಯಾಹಾರದ ಋಣಾತ್ಮಕ ಅಂಶಗಳಾಗಿವೆ.

-ಡಾ| ಟಾಮ್‌ ದೇವಸ್ಯ,

ಪ್ರೊಫೆಸರ್‌ ಮತ್ತು ಯುನಿಟ್‌ ಹೆಡ್‌

ಕಾರ್ಡಿಯಾಲಜಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ , ಮಂಗಳೂರು)

ಟಾಪ್ ನ್ಯೂಸ್

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-health

Monsoon Diseases:ಮಳೆಗಾಲದಲ್ಲಿ ಸಾಮಾನ್ಯ; ಮಾನ್ಸೂನ್‌ ರೋಗಗಳು,ತಡೆಗಟ್ಟುವಿಕೆಗಾಗಿ ಸಲಹೆಗಳು

2-health

Scleroderma: ಸ್ಕ್ಲೆರೋಡರ್ಮಾ ಜತೆಗೆ ಜೀವಿಸುವುದು

6-health

Hemorrhoids: ಮಲದಲ್ಲಿ ರಕ್ತಸ್ರಾವವಾದಾಗಲೆಲ್ಲ ಮೂಲವ್ಯಾಧಿ ಕಾರಣವಲ್ಲ

4-health

Rhinoplasty: ರಿನೊಪ್ಲಾಸ್ಟಿ

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.