ಸರಕಾರದ ಮೇಲೆ ಮಂತ್ರಿಗಳ ನೇಮಕ ವಿಚಾರದಲ್ಲಿ ಮಠಾಧಿಪತಿಗಳು ಒತ್ತಡ ಹೇರುವುದು ಎಷ್ಟು ಸರಿ?
Team Udayavani, Jan 16, 2020, 5:09 PM IST
ಮಣಿಪಾಲ: ಜನರಿಂದ ಆಯ್ಕೆಯಾದ ಸರಕಾರದ ಮೇಲೆ ಮಂತ್ರಿಗಳ ನೇಮಕ ವಿಚಾರದಲ್ಲಿ ಮಠಾಧಿಪತಿಗಳು ಒತ್ತಡ ಹೇರುವುದು ಎಷ್ಟರಮಟ್ಟಿಗೆ ಸರಿ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.
ಶ್ರೀಧರ್ ಉಡುಪ: ಅನಾದಿ ಕಾಲದಿಂದಲೂ ಋಷಿ ಮುನಿಗಳು ಹಾಗೂ ಧಾರ್ಮಿಕ ನಾಯಕರು ರಾಜ್ಯದ ಪ್ರಭುಗಳಿಗೆ ಆಡಳಿತಾತ್ಮಕ ವಿಷಯದಲ್ಲಿ ಮಾರ್ಗದರ್ಶನ ನೀಡುತ್ತಲೇ ಇದ್ದಾರೆ. ಆದುದರಿಂದ ಇಂದಿನ ಮಠಾಧೀಶರು ಮಂತ್ರಿಗಳ ನೇಮಕ ವಿಷಯದಲ್ಲಿ ಸಲಹೆ, ಸೂಚನೆಗಳನ್ನು ಸರಕಾರಕ್ಕೆ ತಿಳಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಮಂತ್ರಿಗಳ ನೇಮಕಾತಿಯ ಕುರಿತು ಅವರ ಅಭಿಪ್ರಾಯಗಳನ್ನು ‘ಆದೇಶ’ಗಳಂತೆ ಸರಕಾರಕ್ಕೆ ಸೂಚಿಸುವುದು ತರವಲ್ಲ ಹಾಗೂ ಈ ಕುರಿತಂತೆ ಯಾವುದೇ ರಾಜಕೀಯ ಒತ್ತಡ ತಂತ್ರವನ್ನು ಅನುಸರಿಸುವುದು ಮಠಾಧೀಶರಿಗೆ ಭೂಷಣವಲ್ಲ.
ಯಲ್ಲಪ್ಪ ಬಸರಗಿ: ನಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿದ ವ್ಯಕ್ತಿಯನ್ನು ಬೆನ್ನು ತಟ್ಟ ದ ಮಾಧ್ಯಮಗಳು ಸಮಾಜದಲ್ಲಿ ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ನಾಯಕರ ಪರವಾಗಿ ನಿಲ್ಲುವ ಮಾಧ್ಯಮಗಳು ಸಮಾಜದಲ್ಲಿ ಜಾತ್ಯತೀತ ಮನೋಭಾವ ಹೇಗ್ ಮೂಡುವುದಕ್ಕೆ ಸಾದ್ಯ.
ಶಣ್ಮುಖ ಬೆಳಗೂರ್: ಜಾತಿ ರಾಜಕಾರಣ ಮಾಡಿಕೊಂಡು ಅಧಿಕಾರ ಹಿಡಿದ ಮೇಲೆ ಜಾತಿಯ ಸ್ವಾಮಿಗಳ ಹಿಡಿತ ಇದ್ದೆ ಇರುತ್ತೆ
ಚನ್ನಬಸವ ಮಾಲಿ ಪಾಟೀಲ್ ;ಬಹಳಷ್ಟು ಸಮುದಾಯದ ಮಠಾದಿಶರು ಇದೆ ರಿತಿ ಮಾತನಾಡಿದ್ದಾರೆ ನಾವು ಆವರೆಲ್ಲರ ಮಾತುಗಳನ್ನು ಖಂಡಿಸುತ್ತೇವೆ
ಶಶಿಕುಮಾರ್ ಸಾಗರ್; ಪ್ರಜಾಪ್ರಭುತ್ವದ ವಿರುದ್ಧ. ರಾಜಕೀಯದಲ್ಲಿ ಮಠಧಿಪತಿಗಳು ಹಸ್ತಕ್ಷೇಪ ಮಾಡುವುದು ಸರಿ ಅಲ್ಲ. ಅದರಲ್ಲೂ ಇತ ತನ್ನ ಸಮಾಜದ ಬಗ್ಗೆ ಮಾತ್ರ ಹೇಳಿರೊದ್ದು ತಪ್ಪು ಸರ್ಕಾರ ಜನರಿಂದ ಆಯ್ಕೆ ಆಗಿರುವುದು. ಜನ ತಿರ್ಮನ ಮಾಡುತ್ತಾರೆ. ಮುಖ್ಯಮಂತ್ರಿ ಒಂದು ಜಾತಿ,ಧರ್ಮಕ್ಕೆ ಸೀಮಿತ ಆಗಿಲ್ಲ. ಅದನ್ನು ಈ ಮುಟ್ಟಳ ಸ್ವಾಮಿಗಳು ಅರ್ಥ ಮಾಡಿಕೊಳ್ಳಬೇಕು.
ನರಸಿಂಹ ಮೂರ್ತಿ ಎನ್ಎಂ :ಅತಂತ್ರ ಸರ್ಕಾರಗಳಿಂದ ರಾಜ್ಯದ ಆಡಳಿತ ಸೂತ್ರ ಕುಸಿದು ಬಿದ್ದು, ರಾಜ್ಯದ ಅಭಿವೃದ್ಧಿ ಸಹ ಕುಂಟಿತವಾಗಿದೆ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಈ ಸರ್ಕಾರ ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮಠಾಧೀಶರು, ಜಾತಿ, ಧರ್ಮಗಳ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. “ಸರ್ವಜನ ಹಿತಾಯ. ಸರ್ವಜನ ಸುಖಾಯ.” ತತ್ವವನ್ನು ಮರೆತು “ಸ್ವಜನ ಹಿತಾಯ, ಸ್ವಜನ ಸುಖಾಯ” ಎನ್ನುವ ಕಾಲ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ