ಕೆಲವು ರಾಜ್ಯಗಳಲ್ಲಿ SSLC ಪರೀಕ್ಷೆ ರದ್ದು ಮಾಡುವ ನಿರ್ಧಾರದ ಕುರಿತು ನಿಮ್ಮ ಅಭಿಪ್ರಾಯವೇನು ?
Team Udayavani, Jun 10, 2020, 4:16 PM IST
ಮಣಿಪಾಲ: ತೆಲಂಗಾಣ, ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ದು ಮಾಡಲು ನಿರ್ಧರಿಸಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು? ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ರಾನು ಕಂಬ್ಳೆ; ಒಳ್ಳೆಯ ನಿರ್ಧಾರ. ಮಕ್ಕಳ ಆರೋಗ್ಯ ಮುಖ್ಯ. ಅಂಕಗಳ ಹಿಂದೆ ಹೋಗಬೇಡಿ, ವಿಷಯದ ಪರಿಕಲ್ಪನೆ ಬೇಕು. ಫಲಿತಾಂಶ ಕೇವಲ ಮುಂದಿನ ತರಗತಿಗೆ ಹೋಗುವ ಅನುಮತಿ ಇದ್ದಾಗೆ, ಮಕ್ಕಳು ಪರೀಕ್ಷೆ ಬರೆಯೊಕೆ ಹೋದಾಗ ಕೋವಿಡ್-19 ರೋಗಿಗೆ ತುತ್ತಾದರೆ, ಏನು ಮಾಡತ್ತಿರಾ.? ಪರೀಕ್ಷೆ ರದ್ದು ಪಡಿಸಿ, ಅವರ ರಾಜ್ಯದ ಮಕ್ಕಳ ಆರೋಗ್ಯ ಮುಖ್ಯ ಎಂದು ತೋರಿಸಿಕೊಟ್ಟ ರಾಜ್ಯಗಳಿಗೆ ನನ್ನ ವಂದನೆಗಳು
ಸತೀಶ್ ರಾವ್: ವಿದ್ಯಾರ್ಥಿಗಳ ಹಿತ,ಸ್ವಾಸ್ಥ್ಯ,ಆರೋಗ್ಯ ದೃಷ್ಠಿಯಿಂದ ಹೇಳುವುದಾದರೆ SSLC ಪರೀಕ್ಷೆ ಗಳನ್ನು ಮುಂದುದೂಡುವುದು ಒಳ್ಳೆಯದು’
ಕಿರಣ್ ಕುಮಟಾ: ಎಕ್ಸಾಮ್ ಆಗಲೇಬೇಕು. ಯಾವುದ ಒಂದು ಕ್ರೀಡಾಂಗಣದಲ್ಲಿ ಆಟವಾಡದೇ ವಿನ್ ಅಂತಾ ಹೇಳೋಕೆ ಆಗಲ್ಲ. ಮುಂಜಾಗ್ರತಾ ಕ್ರಮ ವಹಿಸಿ ಪರೀಕ್ಷೆಗಳು ನಡೆಸುವುದು ಒಳಿತು. ಈ ತರ ಎಕ್ಸಾಮ್ ರದ್ದು ಮಾಡಿ ಪಾಸ್ ಮಾಡೋದಾದರೆ ಕೆಲವೊಂದು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಅರ್ಥ ಇಲ್ಲದೇ ಇರೋ ತರ ಆಗುತ್ತದೆ. ಪರೀಕ್ಷೆಗಳು ನಡೆಸಿ ಸುರಕ್ಷತಾ ಕ್ರಮಗಳು ಕಟ್ಟು ನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಿ
ಸುರೇಶ್ ಸಾಲ್ಯಾನ್: ಜಸ್ಟ್ ಪಾಸ್ ಆಗೋ ವಿದ್ಯಾರ್ಥಿಗಳು ಫೇಲ್ ಆದರೆ ಯಾರು ಹೊಣೆ? ಉನ್ನತ ಶಿಕ್ಷಣಕ್ಕಾಗಿ ರ್ಯಾಂಕ್ ವಿದ್ಯಾರ್ಥಿಗಳು ಪ್ರವೇಶ ಪಡೆವ ವೇಳೆ ಪರೀಕ್ಷೆ ಮಾಡಲಿ.
ರಮೇಶ್ ಬಿವಿ: ಪಾಸಾದ ಅಷ್ಟೂ ವಿದ್ಯಾರ್ಥಿಗಳಿಗೆ ಪಿಯುಸಿ ಓದಲು ಕಾಲೇಜಿನಲ್ಲಿ ಜಾಗ ಸಿಗುತ್ತಾ ಅಷ್ಟೊಂದು ಕಾಲೇಜುಗಳು ಇವೆಯಾ. ಇದ್ದರೂ ಯಾವ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಸೀಟ್ ಕೊಡ್ತಾರೆ. ಯೋಚಿಸಿ ನಿರ್ಧಾರ ಮಾಡಬೇಕಿತ್ತು
ಸಂತೋಷ್ ಕುಮಾರ್ ದೇವಿ ಶೆಟ್ಟಿ ಎಂ: ಅಯ್ಯೋ ಎಸ್ಎಸ್ಎಲ್ ಸಿ ಅಷ್ಟೇ ಸಾಕ ಅದೇ ತರಹದ ಪಿಯುಸಿನೂ ಪಾಸ್ ಮಾಡಿ. ನಿಮ್ಮ ಈ ಆಜ್ಞೆ ದಡ್ಡನಿಗೆ ಹಾಲು ತುಪ್ಪ ಕೊಟ್ಟ ಹಾಗೆ ಜಾಣನಿಗೆ ವಿಷ ಉಣಿಸಿದ ಹಾಗೆ ಸೋ ದಯವಿಟ್ಟು ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಿ. ಆಗೆ ಪಾಸ್ ಮಾಡಬೇಡಿ
ರವಿ ಕುಮಾರ್ : ನಿರ್ಧಾರ ಸರಿಯಲ್ಲ. ಮುಂದಿನ ದಿನಗಳಲ್ಲಿ ಯಾವ ಆಧಾರದ ಮೇಲೆ ಮುಂದಿನ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಿರಿ.
ಗಂಗಾಧರ್: ಸಾಮಾಜಿಕ ಅಂತರ ಕಾಯ್ದುಕೊಂಡು ಬಾರ್ ಗಳಲ್ಲಿ ಮದ್ಯ ಖರೀದಿ ಮಾಡಬಹುದು ಸಾಮಾಜಿಕ ಅಂತರ ಕಾಯ್ದುಕೊಂಡು ದೇವಾಲಯಗಳಲ್ಲಿ ಪ್ರಾರ್ಥನೆ ಪೊಜೇ ಸಲ್ಲಿಸ ಬಹುದು! ಬಸ್ಸು ಗಳಲ್ಲಿ ಸಂಚಾರಿಸಬಹುದು. ಆದರೇ ಪರೀಕ್ಷೆ ಬರೆಯಲು ಮಾತ್ರ ಆಗಲ್ಲ ಯಾಕೆ? ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಬಳಸಿಕೊಂಡು ಪರೀಕ್ಷೆ ಮಾಡಬೇಕು ಮಕ್ಕಳ ಮುಂದಿನ ಭವಿಷ್ಯಕ್ಕಾಗಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ