ನವರಾತ್ರಿ ಇಂದಿನ ಆರಾಧನೆ; ದುಷ್ಟರ ಅಳಿಸಿ ಶಿಷ್ಟರ ರಕ್ಷಿಸೋ ಶುಭಂಕರಿ


Team Udayavani, Oct 2, 2022, 6:05 AM IST

ನವರಾತ್ರಿ ಇಂದಿನ ಆರಾಧನೆ; ದುಷ್ಟರ ಅಳಿಸಿ ಶಿಷ್ಟರ ರಕ್ಷಿಸೋ ಶುಭಂಕರಿ

ಏಕವೇಣಿ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ|
ಲಂಬೋಷ್ಠಿ ಕರ್ಣಿಕಾಕರ್ಣಿ ತೈಲಾಭ್ಯಕ್ತಶರೀರಿಣೀ||
ವಾಮಪಾದೋಲ್ಲಸಲ್ಲೋಹಲತಾಕಂಟಕ ಭೂಷಣಾ|
ವರ್ಧನ್ಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ||
ಜಗನ್ಮಾತೆ ದುರ್ಗೆಯ ಏಳನೇ ಶಕ್ತಿಯೇ ಕಾಲರಾತ್ರಿ ಎಂಬ ಹೆಸರಿನಿಂದ ಅಭಯ ನೀಡುತ್ತ ಬರುತ್ತಿರುವಳು. ನವದುರ್ಗೆಯರಲ್ಲಿ ಭಯ ಹುಟ್ಟಿಸುವಂಥ ರೂಪ ಈ ಕಾಲರಾತ್ರಿ.

ಇದು ತಾಯಿಯ ಕರ್ಗತ್ತಲು ಸಮಯದ ರೂಪವಾಗಿದೆ. ಇವಳ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಕಪ್ಪಾಗಿಯೂ, ಕೇಶರಾಶಿಯು ಹರಡಿಕೊಂಡಂತೆ, ನಾಸಿಕದ ಉಚ್ಛಾಸ-ನಿಚ್ಛಾಸದಿಂದ ಅಗ್ನಿಯ ಜ್ವಾಲೆಗಳು ಹೊರಹೊಮ್ಮುವಂತೆ ಭಯಂಕರವಾದ ರೂಪ ಕಾಳರಾತ್ರಿ ದೇವಿಯದ್ದು . ಕಾಳರಾತ್ರಿ ದೇವಿಗೆ ನಾಲ್ಕು ಕೈಗಳಿದ್ದು ಒಂದರಲ್ಲಿ ಬೆಂಕಿ ಮತ್ತೂಂದರಲ್ಲಿ ಖಡ್ಗವಿದೆ. ಇನ್ನೆರಡು ಕೈಗಳು ರಾಕ್ಷಸರ ಸಂಹಾರಕ್ಕಾಗಿ ಬಳಸಲೆಂದೇ ಇರುವಂತಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ, ಬ್ರಹ್ಮಾಂಡದಂತೆ ಗೋಲವಾಗಿರುವ ಮೂರು ಕಣ್ಣುಗಳು ಹೀಗೆ ವಿಚಿತ್ರ ರೂಪದಲ್ಲಿ ಕಾಣುವ ದೇವಿಯು ಕಾಳರಾತ್ರಿಯಾಗಿ ರೂಪಧಾರಣೆ ಮಾಡಿ ತನ್ನ ಬಂಗಾರದ ಮೈಬಣ್ಣದ ಚರ್ಮವನ್ನು ಕಿತ್ತು ರಾಕ್ಷಸರ ವಿರುದ್ಧ ಹೋರಾಡಲು ತಯಾರಾದಂತಿದೆ.

ಅತ್ಯಂತ ಭಯಂಕರ ರೂಪಧಾರಿಯಾಗಿದ್ದರೂ ಸದಾ ಶುಭ ಫಲವನ್ನು ನೀಡುವವಳು. ಆದ್ದರಿಂದಲೋ ಏನೋ ಅವಳನ್ನು ಶುಭಂಕರೀ ಎಂದೂ ಕರೆಯುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಅವಳು ಎಲ್ಲ ದುಷ್ಟಶಕ್ತಿ, ದುಷ್ಟತೆ, ನಕಾರಾತ್ಮಕ ಶಕ್ತಿ ಹಾಗೂ ಭೀತಿಯನ್ನು ನಿವಾರಿಸುವವಳು. ಕೆಲವು ಸ್ಥಳಗಳಲ್ಲಿ ಆಕೆಯನ್ನ ರುಂಡಮಾಲಿನಿಯಾಗಿ ರಕ್ಕಸನ ಸಂಹಾರ ಮಾಡುವ ರೀತಿಯೂ ಚಿತ್ರಿಸುತ್ತಾರೆ.

ಕಾಳಿ ಹಾಗೂ ಕಾಲರಾತ್ರಿಯಲ್ಲಿ ವ್ಯತ್ಯಾಸವಿದೆ. ಒಂದು ಪುರಾಣದ ಪ್ರಕಾರ ಆಕೆ ರಾತ್ರಿ ಹಗಲುಗಳಲ್ಲಿ ರಾತ್ರಿಯನ್ನ ನಿಭಾಯಿಸುವವಳು. ಸಹಸ್ರಾರು ಚಕ್ರಗಳನ್ನು ಧರಿಸಿದ್ದರಿಂದ ಆ ದಿನ ಉಪಾಸನೆ ಮಾಡಿದ ಭಕ್ತರಿಗೆ ಬ್ರಹ್ಮಾಂಡದ ಎಲ್ಲ ಸಿದ್ಧಿಗಳ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ನಂಬಿಕೆ. ಅವಳ ಸಾಕ್ಷಾತ್ಕಾರದಿಂದ ಸಿಗುವ ಅಭಯ ಅವನ ಸಮಸ್ತ ಪಾಪಗಳನ್ನು ಪರಿಹಾರ ಮಾಡಿ ಅಕ್ಷಯ ಪುಣ್ಯ ಲೋಕಗಳ ಪ್ರಾಪ್ತಿಯಾಗುತ್ತದೆ. ಜಗನ್ಮಾತೆಯು ದುಷ್ಟರ ಅಳಿಸಿ ಶಿಷ್ಟರ ರಕ್ಷಿಸೋ ಶುಭಂಕರಿ. ಭೂತ, ಪ್ರೇತ, ಗ್ರಹ ಬಾಧೆಗಳು ಕೂಡ ದೂರವಾಗಿ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕುವಂತೆ ಮಾಡುವ ಮಹಾಶಕ್ತಿ ಕಾಳರಾತ್ರಿ. ಅಗ್ನಿಭಯ, ಜಲಭಯ, ಶತ್ರುಭಯ, ರಾತ್ರಿ ಭಯಗಳಿಂದ ಮುಕ್ತನಾಗಿ ಸಂತಸದ ಬದುಕು ನಡೆಸುವಲ್ಲಿ ಆಕೆಯ ಅಭಯ ಹಸ್ತವೇ ಪುಣ್ಯ ಪ್ರಧಾನ. ದೇವಿಯ ಉಪಾಸಕರಾದ ನಾವು ಏಕನಿಷ್ಠ ಮನೋಭಾವದಿಂದ ಉಪಾಸನೆ ಮಾಡುತ್ತಾ ಯಮ,ನಿಯಮ, ಸಂಯಮಗಳನ್ನೂ ಪಾಲಿಸುತ್ತಾ ಧ್ಯಾನ ಪೂಜೆ ಮಾಡುತ್ತಾ ತನು-ಮನ ಶುಭ್ರವಾಗಿಟ್ಟಲ್ಲಿ ಯಾವ ಭಯವೂ ಇಲ್ಲದೆ ನಿಶ್ಚಿಂತೆಯಿಂದಿರಬಹುದು.

ದಿನಾಂಕ
02.10.2022 ರವಿವಾರ
ಶರದೃತು ಅಶ್ವಯುಜ ಶುಕ್ಲಪಕ್ಷ ಸಪ್ತಮಿ
ದೇವತೆ;ಕಾಲರಾತ್ರಿ
ಬಣ್ಣ: ಕಿತ್ತಳೆ

 

-ಎಂ. ಎಸ್‌. ಕೋಟ್ಯಾನ್‌,
ಧಾರ್ಮಿಕ ಚಿಂತಕರು, ಮಂಗಳೂರು

 

 

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

ನವರಾತ್ರಿ ಇಂದಿನ ಆರಾಧನೆ; ಕೋಟಿ ಸೂರ್ಯನಷ್ಟೇ ಪ್ರಕಾಶಮಾನಳು ಸಿದ್ಧಿ ಧಾತ್ರಿ

ನವರಾತ್ರಿ ಇಂದಿನ ಆರಾಧನೆ; ಕೋಟಿ ಸೂರ್ಯನಷ್ಟೇ ಪ್ರಕಾಶಮಾನಳು ಸಿದ್ಧಿ ಧಾತ್ರಿ

ನವರಾತ್ರಿ ಇಂದಿನ ಆರಾಧನೆ; ಘೋರ ತಪಸ್ಸಿನಿಂದ ಪರಶಿವನನ್ನು ಪಡೆದ ಮಹಾಗೌರಿ

ನವರಾತ್ರಿ ಇಂದಿನ ಆರಾಧನೆ; ಘೋರ ತಪಸ್ಸಿನಿಂದ ಪರಶಿವನನ್ನು ಪಡೆದ ಮಹಾಗೌರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.