ನವರಾತ್ರಿ: ಮಾತೃ ಹೃದಯಿ, ಸಂತಾನ ಭಾಗ್ಯ ಸಹಿತ ಸಕಲ ಅಭೀಷ್ಟಗಳ ಕ್ಷಿಪ್ರಪ್ರದಾಯಕಿ


Team Udayavani, Sep 30, 2022, 6:10 AM IST

ನವರಾತ್ರಿ: ಮಾತೃ ಹೃದಯಿ, ಸಂತಾನ ಭಾಗ್ಯ ಸಹಿತ ಸಕಲ ಅಭೀಷ್ಟಗಳ ಕ್ಷಿಪ್ರಪ್ರದಾಯಕಿ

ದೇವತೆ: ಸ್ಕಂದಮಾತಾ

ಬಣ್ಣ : ಹಸುರು

ಶರದೃತು ಆಶ್ವಯುಜ

ಶುದ್ಧ  ಪಂಚಮಿ

ಶರನ್ನವರಾತ್ರಿ ಪರ್ವಕಾಲದಲ್ಲಿ ಐದನೇ ದಿನದಂದು ಜಗನ್ಮಾತೆ ದುರ್ಗಾ ದೇವಿಯು ಸ್ಕಂದಮಾತೆ ಎಂಬ ಅಭಿದಾನದ ಮೂಲಕ ಪೂಜಿಸಲ್ಪಡುತ್ತಾಳೆ.

ಸ್ಕಂದ ಎಂದರೆ ಸಾಕ್ಷಾತ್‌ ಸುಬ್ರಹ್ಮಣ್ಯ ದೇವರು. ಮಾತೆ ಎಂದರೆ ಸುಬ್ರಹ್ಮಣ್ಯ ದೇವರ ಜನ್ಮಕ್ಕೆ ಕಾರಣೀಕರ್ತಳಾದವಳು ಅರ್ಥಾತ್‌ ಪರಶಿವನ ಅರ್ಧಾಂಗಿ ಶ್ರೀ ಪಾರ್ವತಿ ದೇವಿ. ವಿಶಿಷ್ಟ ಯೋಗ್ಯತೆಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾ ದಂತಹ ತೇಜಸ್ಸು. ಶಿವ ಹಾಗೂ ಪಾರ್ವತಿ ದೇವಿಯರಿಂದ ಜನ್ಮ ತಾಳಿದ ಶ್ರೀ ಸುಬ್ರಹ್ಮಣ್ಯ ದೇವರು.

ತಾರಕಾಸುರ ಎನ್ನುವ ಅಸುರ ದೈತ್ಯ ರಾಕ್ಷಸನ ಸಂಹಾರಕ್ಕಾಗಿ ಮೈದಾಳಿದ ದುರ್ಗಾರೂಪವೇ ದೇವಿ ಸ್ಕಂದ ಮಾತೆ. ಸ್ಕಂದ ಅರ್ಥತ್‌ ಶ್ರೀ ಸುಬ್ರಹ್ಮಣ್ಯ ದೇವ ರಿಗೆ ಜನ್ಮವನ್ನಿತ್ತು ಪರೋಕ್ಷವಾಗಿ ತಾರಕನ ಸಂಹಾರಕ್ಕೆ  ಕಾರಣಕರ್ತಳಾಗುತ್ತಾಳೆ.

ಸ್ಕಂದಮಾತೆಯ ಸ್ವರೂಪ ತ್ರಿಲೋಕ ಸೌಂದರ್ಯಯುತವಾದದ್ದು. ಸಿಂಹಾ ರೂಢಳಾಗಿರುವ ಶ್ವೇತವರ್ಣೆ. ಚತುರ್ಬಾಹು, ಚತುಭುìಜಗಳು. ಎರಡು ಹಸ್ತ ಗಳಲ್ಲಿ ರುದ್ರಾಕ್ಷಿಯ ಜಪಮಣಿ ಕಮಂಡಲಗಳಿವೆ. ತನ್ನ ಪಾರ್ಶ್ವ ಹಸ್ತದಲ್ಲಿ ಅರ್ಥಾತ್‌ ಬಲ ಕೈಯಲ್ಲಿ ಸ್ಕಂದನನ್ನು ಹಾಗೂ ವರದ ಹಸ್ತವು ಅಭಯ ಮುದ್ರೆಯಲ್ಲಿದ್ದು, ಅವಳ ಬಲ ಕಾಲಂದುಗೆಯಲ್ಲಿ ಬಲತೊಡೆಯ ಮೇಲೆ ಬಾಲರೂಪಿಯಾದ ಸ್ಕಂದ ಕುಮಾರನು ವಿರಾಜಮಾನನಾಗಿದ್ದಾನೆ.

ಇನ್ನೊಂದು ಅರ್ಥದಲ್ಲಿ ಹೇಳಬಹುದಾದರೆ ಭೂಲೋಕದಿಂದ ಸತ್ಯಲೋಕ ದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮ ವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿ ಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.

ಪೂಜಾಫ‌ಲ: ಸ್ಕಂದಮಾತಾಳದ್ದು ಕರುಣೆ ತುಂಬಿದ ತಾಯಿಯ ಸುಂದರ ರೂಪ. ದೇವಿಯನ್ನು ಆರಾಧಿಸುವ ಭಕ್ತರು ಮಾತೆಯ ಆಶೀರ್ವಾದ ಮಾತ್ರವಲ್ಲದೇ ಮಗನಾದ ಸ್ಕಂದನ ಆಶೀರ್ವಾದವನ್ನೂ ಪಡೆಯಬಹುದು. ಈ ಅವತಾರವನ್ನು ಪೂಜಿಸುವುದರಿಂದ ಭಕ್ತರು ಎಲ್ಲ ಕಷ್ಟಗಳಿಂದ ಮುಕ್ತರಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಉತ್ತಮ ಪುತ್ರ ಪೌತ್ರ ಸಂತಾನಕ್ಕಾಗಿ ಪ್ರಥಮ ಆದ್ಯತೆಯನ್ನು ಸ್ಕಂದಮಾತೆಯ ಆರಾಧನೆಯು ಸೂಚಿಸುತ್ತದೆ. ಭಕ್ತರ ಭಕ್ತಿಗೆ ಅತೀ ಶೀಘ್ರದಲ್ಲಿ ದೇವಿಯು ಮಾರುಹೋಗಿ ಬೇಡಿದ ಸಕಲ ಕಾಮಿತಾರ್ಥಗಳನ್ನು ಕ್ಷಣಮಾತ್ರದಲ್ಲೇ ಕರುಣಿಸುವ ಹಾಗೂ ಅವರವರ ಇಷ್ಟಾರ್ಥ ಮನೋ ಸಂಕಲ್ಪಗಳನ್ನು ಸಿದ್ಧಿಸುವಂತೆ ಆಶೀರ್ವದಿಸುತ್ತಾಳೆ.

ಶುದ್ಧ ಮನಸ್ಸಿನಿಂದ, ಭಕ್ತಿಪೂರ್ವಕವಾಗಿ ಯಾರು ಈಕೆಯ ಆರಾಧನೆ ಮಾಡು ತ್ತಾರೋ ಅವರಿಗೆ ಶ್ರೀದೇವಿಯು ಉನ್ನತ ಪದವಿ, ಹೆಸರು, ಕೀರ್ತಿ, ಖ್ಯಾತಿ, ಸಮಗ್ರ ಅಭಿವೃದ್ಧಿಯನ್ನು  ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾ ಜನ್ಮ ಕುಂಡಲಿಯಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗಬಹುದಾದ ಸಮಸ್ತ ಸಂಕಷ್ಟಗಳನ್ನು ಸ್ಕಂದಮಾತೆಯು ನಿವಾರಿಸುತ್ತಾಳೆ.

 

ಹರೀಶ್‌ ಐತಾಳ

ಅರ್ಚಕರು, ಮಂಗಳಾದೇವಿ ದೇವಸ್ಥಾನ, ಮಂಗಳೂರು

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಉಚ್ಚಿಲ: ವೈಭವದ ಶೋಭಾಯಾತ್ರೆ; ಶಾರದೆ, ನವದುರ್ಗೆಯರಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ

ಉಚ್ಚಿಲ: ವೈಭವದ ಶೋಭಾಯಾತ್ರೆ; ಶಾರದೆ, ನವದುರ್ಗೆಯರಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

ಮೈಸೂರಿನಲ್ಲಿ ವೈಭವದ ಜಂಬೂ ಸವಾರಿ: ಅರ್ಜುನನಿಗೆ ಜೈಕಾರ; ಹಲವು ತಂಡಗಳ ಕಲಾಪ್ರದರ್ಶನ

ಮೈಸೂರಿನಲ್ಲಿ ವೈಭವದ ಜಂಬೂ ಸವಾರಿ: ಅರ್ಜುನನಿಗೆ ಜೈಕಾರ; ಹಲವು ತಂಡಗಳ ಕಲಾಪ್ರದರ್ಶನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.