ಶರನ್ನವರಾತ್ರಿಯ ಸಾಧನಾ ವೈಶಿಷ್ಟ್ಯಗಳು


Team Udayavani, Sep 28, 2022, 6:10 AM IST

ಶರನ್ನವರಾತ್ರಿಯ ಸಾಧನಾ ವೈಶಿಷ್ಟ್ಯಗಳು

ಆಶ್ವಿ‌ನ ಶುಕ್ಲಪಕ್ಷ ಪ್ರತಿಪದದಿಂದ ಮೊದಲ್ಗೊಂಡು ದಶಮಿ ಯವರೆಗಿನ ದಶತಿಥಿಗಳಲ್ಲಿ ವಿಶ್ವಾದ್ಯಂತ ಶಕಾöರಾಧನೆಯು ವೈವಿಧ್ಯಪೂರ್ಣವಾಗಿ ನೆರವೇರುತ್ತದೆ. ಶರದೃತುವಿನ ಈ ಪರ್ವಕಾಲವು ಪ್ರಕೃತಿಯ ಆರಾಧನೆಯೆಂದು ಉಲ್ಲೇಖಿತವಾಗಿದ್ದರೂ ಇದರ ತಾಂತ್ರಿಕ ಮತ್ತು ವೈದಿಕ ಹಿನ್ನೆಲೆಯನ್ನು ಗಮನಿಸಿದರೆ ಆಧ್ಯಾತ್ಮಿಕವಾದ ಮೌಲ್ಯದ ಮಹತ್ವವು ರೋಚಕವೆನಿಸುತ್ತದೆ.

ಆದಿ ಶಂಕರಾಚಾರ್ಯರು ತಮ್ಮ ಆನಂದಲಹರಿಯಲ್ಲಿ”ಶಿವ ಶಕ್ತ್ಯಾಯುಕ್ತೋ ಭವತಿ ಪ್ರಭವಿತಂ|
ನಚೀದೇವೀಂ ದೇವೋನ ಬಲುಶಕ್ತಃ ಸ್ಕಂದಿತುಮಷಿ||’ ಎಂದಿದ್ದಾರೆ.

ಅಂದರೆ ಸರ್ವ ಸಮರ್ಥನಾದ ಪರಶಿವನೂ ದೇವೀಶಕ್ತಿ ರಹಿತನಾದರೆ ಏನನ್ನೂ ಮಾಡಲಾರ ಎಂಬ ಭಾವ. ಪುರುಷ ಪ್ರಧಾನ ಸಮಾಜದಲ್ಲಿ ಮಾತೃರಾಧನೆಯು ಎಷ್ಟು ಮಹತ್ತರವಾಗಿತ್ತು ಎನ್ನುವುದನ್ನು ಭಗವತ್ಪಾದದ ಉಲ್ಲೇಖವು ಸ್ಪಷ್ಟಪಡಿಸುತ್ತದೆ. ಈ ರೀತಿಯ ಸ್ತ್ರೀ ಶಕ್ತಿ ಆರಾಧನೆಯ ಪರಿಪಕ್ವ ಕಾಲವೇ ಶರನ್ನವರಾತ್ರಿಯ ಪವಿತ್ರ ನವದಿನಗಳು ಅಂದರೆ ಒಟ್ಟು ಇನ್ನೂರ ಹದಿನಾರು ತಾಸುಗಳು. 2 + 1 + 6 = 9. ಯಾವ ರೀತಿ ಸಮೀಕರಣ ನಡೆಸಿದರೂ ಸಂಖ್ಯೆಯು ಒಂಬತ್ತರ ಮಹತ್ವವನ್ನು ಪಡೆದೇ ಪಡೆಯುತ್ತದೆ. ಬಹುಶಃ ನವಗ್ರಹ, ನವಮಾಸ, ನವಶಕ್ತಿ, ನವಕ ಪ್ರಧಾನ, ನವಧ್ಯಾರ, ನವಧಾನ್ಯ. ಹೀಗೆ ಒಂಬತ್ತರ ಮಹಿಮೆ ಸಾಕಾರಗೊಳ್ಳುತ್ತಲೇ ಹೋಗುತ್ತದೆ.

ಶರನ್ನವರಾತ್ರಿಯ ಪವಿತ್ರ ಕಾಲದಲ್ಲಿ ನಾವು ಶಕ್ತಿ ಸ್ವರೂಪಿಯನ್ನು ಹೊಸ ರೀತಿ ಪ್ರಸನ್ನೀಕರಿಸಬಹುದು? ಶ್ರೀ ಮಹಾಕಾಳಿ, ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತಿ, ತ್ರಿಶಕ್ತಿಗಳ ವೈವಿಧ್ಯಮಯ ಸ್ವರೂಪಗಳ – ನಾಮಗಳ ವೈಶಿಷ್ಟéಪೂರ್ಣ ಆರಾಧನೆ ಹೇಗೆ ನಡೆಸಬಹುದು ಎನ್ನುವುದನ್ನು ಹಲವು ಪುರಾಣಗಳು ಸಾರುತ್ತವೆ. ಆದರೆ ಭಗವತಿ ದುರ್ಗೆಗೆ ಅತ್ಯಂತ ಪ್ರಿಯವಾದ ಅತೀ ಸರಳವಾದ ವಿಧಾನವೆಂದರೆ ಆಚಾರ-ಸ್ತುತಿ-ನುತಿ – ಸ್ತೋತ್ರ ಪಾರಾಯಣ. ಅಷ್ಟಾಂಗ ಯೋಗತಣ್ತೀದಲ್ಲಿಉಲ್ಲೇಖಿತವಾದ ಯಮನಿಯಮಗಳಿಗೆ ಶಕಾöರಾಧನೆಯಲ್ಲಿ ಅತೀ ಮಹತ್ವವಿದೆ.
ಜಗನ್ಮಾತೆಯ ಆರಾಧನೆಗೆ ಉತ್ಸುಕತೆ ಇರುವವರು ಮೊತ್ತಮೊದಲು ಆಚಾರವಂತರಾಗಲು ಪ್ರಯತ್ನಿಸಬೇಕು. ಅಹಿಂಸೆ, ಇಂದ್ರಿಯನಿಗ್ರಹ, ಅಕ್ರೋದ, ಸತ್ಯವಾಚನ, ತ್ರಿಕರಣ ಶುದ್ಧಿಗಳಿಗೆ ಮಹತ್ವ ನೀಡಿ, ಷಡ್ವರ್ಗಗಳನ್ನು ನಿಗ್ರಹಿಸಲು ಯತ್ನಿಸಬೇಕು. ದೇವಿಯ ಪ್ರಸಾದವೆಂದೇ ಆಹಾರಗಳನ್ನು ಪರಿಗಣಿಸಿ ಸೇವಿಸಬೇಕು. ಸಾಧ್ಯವಾದಷ್ಟು ಮೌನವ್ರತರಾಗಿದ್ದುಕೊಂಡು ಸ್ತುತಿ, ಸ್ತೋತ್ರ, ಪಾರಾಯಣಗಳಿಗೆ ತನು-ಮನಗಳನ್ನು ಸಮರ್ಪಿಸಬೇಕು. ಪಾಮರರಿಂದ ಮನುಷ್ಯರು ಕೂಡ ಭಕಾöರಾಧನೆಯನ್ನು ಆಚಾರವಂತರಾಗಿ ಸರಳರೀತಿಯಿಂದ ನೆರವೇರಿಸಬಹುದು. ಯಾವುದೇ ಆರಾಧನೆಯನ್ನು ನಾವು ಎಷ್ಟು ಮಾಡುತ್ತೇವೆ ಎನ್ನುವುದಕ್ಕಿಂತಲೂ ಹೇಗೆ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ.

ದೇವಿಯು ಪ್ರಿಯಳಾಗುವ ಸರಳ ಸ್ತುತಿಗಳು
ದುರ್ಗೆಯು ಸ್ತೋತ್ರಪ್ರಿಯೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಶರನ್ನವರಾತ್ರಿಯ ಪವಿತ್ರ ಪರ್ವಕಾಲದಲ್ಲಿ ಸರಳವಾದ ಕೆಲವು ಸ್ತೋತ್ರಗಳನ್ನು ಪಠಿಸುವುದರಿಂದ ಮಾತೆಯ ಅನುಗ್ರಹವನ್ನು ಪಡೆಯಲು ಅವಕಾಶವಿದೆ.
“ದೇಹಿ ಸೌಭಾಗ್ಯಂ ಆರೋಗ್ಯಂ ದೇಹಿದೇವಿ ಪರಂಸುಖಂ|
ರೂಪಂ ದೇಹಿ ಜಯಂ ದೇಹಿ ಯಶೋದೇಹಿ ದ್ವಿಷೋಜಹಿ||’
ಅದೇ ರೀತಿ,”ವಿದ್ಯಾವಂತಂ ಯಶಸ್ವಂತಂ ಲಕ್ಷ್ಮೀವಂತಂ ಜನಂಕುರು
ರೂಪಂ ದೇಹಿ ಜಯಂ ದೇಹಿ ಯಶೋದೇಹಿ ದ್ವಿಷೋಜಹಿ||’
ಈ ಸ್ತೋತ್ರವನ್ನು ಸರ್ವರೂ ದಿನನಿತ್ಯ ಪಠಿಸಬಹುದು.
“ಯಾ ದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ|
ನಮಸ್ತಸ್ಸೆ„ ನಮಸ್ತಸ್ಸೆ„ ನಮಸ್ತಸ್ಸೆ„ ನಮೋ ನಮಃ|’
ಇದು ಸದಾಕಾಲ ಪಠಿಸಬಹುದಾದ ಸರಳವಾದ ಮಾತೃಸ್ತುತಿ. ಎಲ್ಲಕ್ಕಿಂತಲೂ ಸುಲಭವಾದ ಸ್ತುತಿ ಎಂದರೆ ಶಂಕರ ಭಗವತ್ಪಾದರೆಂದಂತೆ ಆತ್ಮಸಮರ್ಪಣೆ ಮತ್ತು ಮನೋರಾಧನೆ. ಇದರಿಂದ ತಾಯಿ ನಮ್ಮ ಮನದಲ್ಲೇ ನೆಲೆ ನಿಲ್ಲುತ್ತಾಳೆ.

– ಮೋಹನದಾಸ ಸುರತ್ಕಲ್‌

ಟಾಪ್ ನ್ಯೂಸ್

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

ನವರಾತ್ರಿ ಇಂದಿನ ಆರಾಧನೆ; ಕೋಟಿ ಸೂರ್ಯನಷ್ಟೇ ಪ್ರಕಾಶಮಾನಳು ಸಿದ್ಧಿ ಧಾತ್ರಿ

ನವರಾತ್ರಿ ಇಂದಿನ ಆರಾಧನೆ; ಕೋಟಿ ಸೂರ್ಯನಷ್ಟೇ ಪ್ರಕಾಶಮಾನಳು ಸಿದ್ಧಿ ಧಾತ್ರಿ

ನವರಾತ್ರಿ ಇಂದಿನ ಆರಾಧನೆ; ಘೋರ ತಪಸ್ಸಿನಿಂದ ಪರಶಿವನನ್ನು ಪಡೆದ ಮಹಾಗೌರಿ

ನವರಾತ್ರಿ ಇಂದಿನ ಆರಾಧನೆ; ಘೋರ ತಪಸ್ಸಿನಿಂದ ಪರಶಿವನನ್ನು ಪಡೆದ ಮಹಾಗೌರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.