ಚುನಾವಣೆಗೆ ಹಣ ಕೇಳಿದ ಆಡಿಯೋ ವೈರಲ್
Team Udayavani, Apr 8, 2019, 6:10 AM IST
ಮಂಡ್ಯ: ಮಾಜಿ ಸಂಸದ ಜಿ.ಮಾದೇಗೌಡರು ಚುನಾವಣೆಯಲ್ಲಿ ಪ್ರಚಾರ ನಡೆಸುವ ಹುಡುಗರಿಗೆ ಹಣ ಹಂಚಬೇಕು, ಹಣ ಕೊಡಿ ಎಂದು ಕೇಳಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.
ಮಾದೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ಇದಾಗಿದ್ದು, ಅದರಲ್ಲಿ ಪ್ರಚಾರ ನಡೆಸುತ್ತಿರುವ
ಹುಡುಗರಿಗೆ ಹಣ ಕೊಡಬೇಕು. ನನಗೆ ಓಡಾಡಲು ಆಗೋಲ್ಲ. ನನ್ನ ಮಗನಿಗೆ ಓಡಾಡೋಕೆ ಹೇಳಿದ್ದೇನೆ. ಅವರೆಲ್ಲಾ ದುಡ್ಡು ಕೇಳ್ತಿದಾರೆ ಎಂದು ಸಚಿವರಿಗೆ ಮಾದೇಗೌಡರು ಹೇಳಿರುವ ಮಾತುಗಳಿವೆ.
ಪುಟ್ಟರಾಜು ಅವರ ಮೊಬೈಲ್ಗೆ ಕರೆ ಮಾಡಿಸಿದ ಮಾದೇಗೌಡರು, 1.50ಸೆಕೆಂಡ್ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾದೇಗೌಡರು, “ಹೌದು,
ಆಡಿಯೋದಲ್ಲಿರುವ ಧ್ವನಿ ನನ್ನದೇ.ಏನಿವಾಗ..?ಹಣ ಕೊಡದೆ ಇಂದಿನದಿನಗಳಲ್ಲಿ ಯಾರು ಚುನಾವಣೆ ಮಾಡುತ್ತಾರೆ ಹೇಳಿ. ಪ್ರಚಾರ ಕ್ಕೆ ಬಂದವರಿಗೆ ಹಣ ಕೊಡಿ ಅಂತ ಕೇಳಿದ್ದೀನಿ ತಿಂಡಿ, ಊಟ ಕೊಡಿಸಬೇಕು ಅಲ್ವಾ. ಅದ್ಕೆ ಸಚಿವ ಪುಟ್ಟರಾಜು ಅವರನ್ನು ಕೇಳಿದೆ.ಅದರಲ್ಲಿ ತಪ್ಪೇನಿದೆ? ನನಗೇನೋ ಹಣ ಕೇಳಿದ್ದು ದೊಡ್ಡ ತಪ್ಪು ಅಂದ್ಹಂಗೆ ಕಾಣಿಸುತ್ತಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.ಜೊತೆಗೆ, ಮೋದಿಯಿಂದ ಹಿಡಿದು ದುಡ್ಡು ಖರ್ಚುಮಾಡದೆ ಇರೋರು ಯಾರಾದರೂ ಇದ್ದಾರಾ? ಇದ್ದರೆ ನನಗೆ ತೋರಿಸಿ ಎಂದು
ಸವಾಲೆಸೆದಿದ್ದಾರೆ.
ನನಗೆ ಮಾಹಿತಿಯಿಲ್ಲ: ಈ ಕುರಿತು ಮಾತನಾಡಿದ ಪಕ್ಷೇತರ ಅಭ್ಯರ್ಥಿ ಸುಮಲತಾ
ಅಂಬರೀಶ್, “ಆಡಿಯೋ ವೈರಲ್ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಾಹಿ ತಿಯೇ ಇಲ್ಲದೆ ಆ ವಿಷ ಯ ವಾಗಿ ಪ್ರತಿ ಕ್ರಿಯೆ ನೀಡುವು ದು ಸೂಕ್ತವಲ್ಲ’ ಎಂದು ತಿಳಿಸಿದ್ದಾರೆ.
ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಚಿವ ಡಿ.ಸಿ.ತಮ್ಮಣ್ಣಅವರ ಬಳಿ ಹೋಗಲ್ಲ. ಹೀಗಾಗಿ, ಚುನಾವಣಾ ಪ್ರ ಚಾರಕ್ಕೆ ತೆರಳಲು ಯಾವ ರೀತಿವ್ಯವಸ್ಥೆ ಬೇಕೋ ಆ ವ್ಯವಸ್ಥೆಯನ್ನು ಮಾಡಿ ಎಂದು ಮಾದೇಗೌಡರು ಹೇಳಿದ್ದರು. ಒಬ್ಬ ಅಭ್ಯರ್ಥಿ ಸುಮಾರು 70 ಲಕ್ಷ ರೂ. ಖರ್ಚು ಮಾಡಬಹುದಾದ್ದರಿಂದ ಆ ಹಣದಲ್ಲಿಕಾರ್ಯಕರ್ತರಿಗೆ ಓಡಾಡಲು ಸ್ವಲ್ಪ ಹಣ ನೀಡಿ ಎಂದು ದೂರವಾಣಿ ಕರೆ ಮಾಡಿದ್ದರು. ಅದನ್ನೇ ವಿರೋಧಿಗಳುದೊಡ್ಡದಾಗಿ ಬಿಂಬಿಸುತ್ತಿದ್ದಾರೆ.
– ಸಿ.ಎಸ್.ಪುಟ್ಟರಾಜು, ಸಚಿವ.