ಸೈಕಲ್ಗೆ ಒತ್ತಿ ಎಂದ ಮತಗಟ್ಟೆ ಅಧಿಕಾರಿಗೆ ಬಿಜೆಪಿ ಕಾರ್ಯಕರ್ತರ ಥಳಿತ
Team Udayavani, Apr 23, 2019, 4:10 PM IST
ಮೊರಾದಾಬಾದ್ : ಉತ್ತರಪ್ರದೇಶದಮೊರಾದಾ ಬಾದ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರಿಗೆ ಬಿಜೆಪಿ ಕಾರ್ಯಕರ್ತರು ಥಳಿಸಿದ ಘಟನೆ ನಡೆದಿದೆ.
ಅಧಿಕಾರಿ ಮೊಹಮದ್ ಜುಬೈರ್ ಅವರು ಮತದಾರರಿಗೆ ಸೈಕಲ್ ಚಿಹ್ನೆಗೆ ಮತ ಹಾಕುವಂತೆ ಹೇಳುತ್ತಿದ್ದರು ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಅಧಿಕಾರಿಗೆ ಥಳಿಸುತ್ತಿರುವ ವಿಡಿಯೋ ಸೇರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.