ಕರಾಳ ವರ್ಷ 2020: ದೇಶದ ಪ್ರವಾಸೋದ್ಯಮ ಅನುಭವಿಸಿದ ನಷ್ಟ 15 ಲಕ್ಷ ಕೋಟಿ ರೂ.!
ಭಾರತದಾದ್ಯಂತ ಪ್ರವಾಸೋದ್ಯಮ ದೇಶೀಯವಾಗಿ ಹಾಗೂ ವಿದೇಶಿ ಪ್ರವಾಸೋದ್ಯಮದಲ್ಲಿ ಭಾರೀ ನಷ್ಟ ಅನುಭವಿಸುವಂತಾಗಿತ್ತು.
Team Udayavani, Dec 26, 2020, 6:22 PM IST
ಫೆಡರೇಶನ್ ಆಫ್ ಅಸೋಸಿಯೇಶನ್ ಇಂಡಿಯನ್ ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ(ಎಫ್ ಎಐಟಿಎಚ್) ಅಂದಾಜಿನ ಪ್ರಕಾರ ಕೋವಿಡ್ 19 ಸೋಂಕು ಮತ್ತು ಲಾಕ್ ಡೌನ್ ನಿಂದಾಗಿ 2020ರಲ್ಲಿ ಭಾರತದ ಪ್ರವಾಸೋದ್ಯಮಕ್ಕೆ ಅತೀ ಹೆಚ್ಚು ನಷ್ಟವನ್ನು ತಂದೊಡ್ಡಿತ್ತು. ಭಾರತದ ಪ್ರವಾಸೋದ್ಯಮ ಬರೋಬ್ಬರಿ 15 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸಿದೆ.
ಪ್ರವಾಸೋದ್ಯಮದ ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ 2020ನೇ ವರ್ಷದಲ್ಲಿ ನಾಲ್ಕು ಕೋಟಿ ಮಂದಿ ಉದ್ಯೋಗವನ್ನು ಕಳೆದುಕೊಂಡಿರುವುದಾಗಿ ತಿಳಿಸಿದೆ. ಕೋವಿಡ್ 19 ಸೋಂಕಿನಿಂದ ಭಾರತದ ಪ್ರವಾಸೋದ್ಯಮ ಅಂದಾಜು 5 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸಬಹುದು ಎಂದು ಎಫ್ ಎಐಟಿಎಚ್ ಮಾರ್ಚ್ ನಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಿತ್ತು.
ಆದರೆ ದೇಶದಲ್ಲಿ ನಿರಂತರವಾಗಿ ಮುಂದುವರಿದ ಕೋವಿಡ್ 19 ಸೋಂಕಿನ ಹಾವಳಿ ಮತ್ತು ಲಾಕ್ ಡೌನ್ ಹಾಗೂ ಭೀತಿಯಿಂದಾಗಿ ಪ್ರವಾಸಿಗರು ಯಾವ ಪ್ರವಾಸಿ ತಾಣಕ್ಕೂ ಹೆಚ್ಚು ಭೇಟಿ ನೀಡದ ಪರಿಣಾಮ ಭಾರತೀಯ ಪ್ರವಾಸೋದ್ಯಮ ಅಂದಾಜು 15 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸಿರುವುದಾಗಿ ಎಫ್ ಎಐಟಿಎಚ್ ಪರಿಷ್ಕೃತ ಪ್ರಕಟಣೆಯನ್ನು ಬಿಡುಗಡೆಗೊಳಿಸಿತ್ತು.
ವೈರಸ್ ಹರಡುವಿಕೆ ಪ್ರಮಾಣ ಮುಂದುರಿದ ಪರಿಣಾಮ ಭಾರತದಾದ್ಯಂತ ಪ್ರವಾಸೋದ್ಯಮ ದೇಶೀಯವಾಗಿ ಹಾಗೂ ವಿದೇಶಿ ಪ್ರವಾಸೋದ್ಯಮದಲ್ಲಿ ಭಾರೀ ನಷ್ಟ ಅನುಭವಿಸುವಂತಾಗಿತ್ತು. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ 2020ರ ಮಾರ್ಚ್ ನಿಂದ ಮುಂದಿನ 9 ತಿಂಗಳವರೆಗೂ ಚೇತರಿಕೆ ಕಂಡಿಲ್ಲ ಎಂದು ಹೇಳಿದೆ.
ಭಾರತದ ಪ್ರವಾಸೋದ್ಯಮದಿಂದ ಸಂಭವಿಸಿರುವ ನೇರ ಮತ್ತು ಪರೋಕ್ಷ ಆರ್ಥಿಕ ನಷ್ಟ ದೇಶದ ಜಿಡಿಪಿಯ ಶೇ.10ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಇಡೀ ವರ್ಷದ ಆರ್ಥಿಕ ನಷ್ಟವನ್ನು ಪರಿಗಣಿಸಿದರೆ ಅದು ಸುಮಾರು 20 ಲಕ್ಷ ಕೋಟಿಗೆ ಏರಬಹುದು ಎಂದು ಎಫ್ ಎಐಟಿಎಚ್ ವಿವರಿಸಿದೆ.
ಇದು ಪ್ರವಾಸೋದ್ಯಮದ ಎಲ್ಲಾ ಆಯಾಮವನ್ನು ಒಳಗೊಂಡಿದ್ದು, ಇದರಲ್ಲಿ ವಿಮಾನಯಾನ, ಟ್ರಾವೆಲ್ ಏಜೆಂಟ್ಸ್, ಹೋಟೆಲುಗಳು, ಟೂರ್ ಆಪರೇಟರ್ಸ್, ಗೈಡ್ ಗಳು, ಟೂರಿಸಂ ರೆಸ್ಟೋರೆಂಟ್ ಗಳು, ಟೂರಿಸ್ಟ್ ಟ್ರಾನ್ಸ್ ಪೋರ್ಟ್ ಟೇಶನ್ ಸೇರಿದ್ದು, ಎಲ್ಲಾ ಕ್ಷೇತ್ರಗಳ ಒಟ್ಟು ನಷ್ಟ 20 ಲಕ್ಷ ಕೋಟಿಗೆ ಏರಬಹುದು ಎಂದು ಹೇಳಿದೆ.
ಟ್ರಾವಲ್ ಏಜೆಂಟ್ ರಿಂದ ಬರಬೇಕಾಗಿದ್ದ ರಿಫಂಡ್ ಗಳ ಬಾಕಿ, ಹೋಟೆಲ್ , ರೆಸ್ಟೋರೆಂಟ್ ಗಳಲ್ಲಿ ಕಾಯ್ದಿರಿಸಿದ್ದ ರೂಮ್ ಗಳ ಬಾಕಿ ಪಾವತಿ, ಮದುವೆ ಹಾಲ್ ಗಳು, ಪಾರ್ಕಿಂಗ್ ನಿಲ್ದಾಣ, ಪ್ರವಾಸೋದ್ಯಮದ ಸೀಸನ್ ಗಳು ದೊಡ್ಡ ಹೊಡೆತ ನೀಡಿದ ಪರಿಣಾಮ ಭಾರೀ ನಷ್ಟವನ್ನು ಅನುಭವಿಸುವಂತೆ ಮಾಡಿರುವುದಾಗಿ ತಿಳಿಸಿದೆ.
ಶತಮಾನಗಳಲ್ಲಿಯೇ ಅನುಭವಿಸದಿರುವಷ್ಟು ನಷ್ಟವನ್ನು ಪ್ರವಾಸೋದ್ಯಮ ಕ್ಷೇತ್ರ 2020ರಲ್ಲಿ ಕೋವಿಡ್ 19 ಸೋಂಕಿನಿಂದ ಅನುಭವಿಸುವಂತಾಗಿದೆ. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆ ಕಾಣಲು ಬಹಳ ಸಮಯ ತೆಗೆದುಕೊಳ್ಳಬಹುದು ಎಂದು ವಿಶ್ಲೇಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ