ಬಾಯಾರು : ಪ್ರಕೃತಿ ಸಂರಕ್ಷಣೆ ವಿಚಾರ ಸಂಕಿರಣ
Team Udayavani, Jun 25, 2019, 5:19 AM IST
ಬಾಯಾರು: ಬಾಯಾರ್ ಸರ್ವಿಸ್ ಕೋ-ಓಪರೇಟಿವ್ ಬೇಂಕ್ ವತಿಯಿಂದ ಸರಕಾರದ “ಹಸಿರು ಸಹಕಾರ’ ಕಾರ್ಯಕ್ರಮದ ಅಂಗವಾಗಿ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಪ್ರಕೃತಿ ಸಂರಕ್ಷಣೆ ಕುರಿತಾದ ವಿಚಾರ ಸಂಕಿರಣ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಾಯಾರ್ ಸರ್ವಿಸ್ ಕೋ-ಆಪರೇಟಿವ್ ಬೇಂಕ್ನ ಅಧ್ಯಕ್ಷರಾದ ಸುಬ¡ಣ್ಣ ಭಟ್ ಉಳುವಾನ ಅವರು ನಡೆಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಗ್ರಾಮ ವಿಕಾಸ ಪ್ರಮುಖ್ ಸದಾಶಿವ ಕಡಂಬಾರು ಅವರು ಪ್ರಕೃತಿ ಸಂರಕ್ಷಣೆಯ ಅಗತ್ಯದ ಹಾಗೂ ಗಿಡಗಳನ್ನು ನೆಡಬೇಕಾದ ಆವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು.
ಬ್ಯಾಂಕ್ನ ನಿರ್ದೇಶಕರಾದ ವಿNàಶ್ವರ ಭಟ್, ಸುಬ್ರಮಣ್ಯ ಭಟ್ ಕೂವತ್ತೋಡಿ, ಅಶ್ವಿನಿ, ಪ್ರಕಾಶಿನಿ ಹಾಗೂ ವಾರ್ಡ್ ಸದಸ್ಯರಾದ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಪ್ರಕಾಶಿನಿ ಸ್ವಾಗತಿಸಿದರು. ಬ್ಯಾಂಕ್ನ ಕಾರ್ಯದರ್ಶಿ ಪ್ರಕಾಶ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಒಂದೊಂದು ಗೇರು ಸಸಿ ವಿತರಿಸಲಾಯಿತು.