ಜು. 9: ನಾಗರಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ
Team Udayavani, Jul 5, 2018, 6:00 AM IST
ಕಯ್ಯಾರು: ಪರಂಬಳ- ಜೋಡುಕಲ್ಲು ರಸ್ತೆಯ ದುರವಸ್ಥೆಯನ್ನು ಪ್ರತಿಭಟಿಸಲು ನಾಗರಿಕ ಹೋರಾಟ ಸಮಿತಿ ಜು. 9ರಂದು ಬೆಳಗ್ಗೆ 9.30ಕ್ಕೆ ಕಯ್ಯಾರು ಜಂಕ್ಷನ್ನಲ್ಲಿ ಮೆರವಣಿಗೆ ಮತ್ತು ರಸ್ತೆ ತಡೆ ನಡೆಸಲಿದೆ.
ಹಂತ ಹಂತವಾಗಿ ಹೋರಾಟ ತೀವ್ರ ಗೊಳಿಸಲು ಕ್ರಿಯಾ ಸಮಿತಿ ನಿರ್ಧರಿಸಿದ್ದು, ಪ್ರಥಮ ಹಂತದಲ್ಲಿ 9ರಂದು ಪ್ರತಿಭಟನೆ ನಡೆಸಲಿದೆ.ವ್ಯಾಪಾರಿಗಳು,ಆಟೋ-ಟ್ಯಾಕ್ಷಿ ಹಾಗೂ ಇತರ ವಾಹನ ಮಾಲಕರು,ಕಾರ್ಮಿಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.ರಸ್ತೆ ಅವ್ಯವಸ್ಥೆ ಬಗ್ಗೆ ಸಚಿವರು,ಸಂಸದ,ಶಾಸಕರು,ಅಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ.
ರಸ್ತೆಗೆ ಹಾಳಾಗಿ ನಾಲ್ಕು ವರ್ಷ
ನಾಲ್ಕು ವರ್ಷಗಳಿಂದ ರಸ್ತೆ ಅವ್ಯವಸ್ಥೆಗೆ ತಲುಪಿದ್ದರೂ ದುರಸ್ತಿಗೆ ಮುಂದಾಗಿಲ್ಲ.ಇದರಿಂದ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹೊಂಡ-ಗುಂಡಿಗಳಿಂದ ತುಂಬಿರುವ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗುತ್ತಿದೆ. ಶಾಲೆ, ಮಸೀದಿ, ದೇವಸ್ಥಾನ, ಚರ್ಚ್,ಅಂಗನವಾಡಿ,ಗ್ರಾಮ ಕಚೇರಿ ಹಾಗೂ ಇತರ ಸಂಸ್ಥೆಗಳು, ದಿನಂಪ್ರತಿ ಸಾವಿರಾರು ಮಂದಿ ತೆರಳುವ ಈ ರಸ್ತೆ ಕುರಿತು ನಿರ್ಲಕ್ಷ್ಯದ ವಿರುದ್ಧ ನಾಗರಿಕರಿಂದ ಆಕ್ರೋಶ ಕೇಳಿ ಬರುತ್ತಿದ್ದು, ತೀವ್ರ ಹೋರಾಟಕ್ಕೆ ನಾಗರಿಕರು ಮುಂದಾಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ