ಮಳೆಗಾಲಕ್ಕೆ ಗಂಜಿ ಊಟವೇ ಬೆಸ್ಟ್‌

- ಮಳೆಗಾಲಕ್ಕೊಂದು ಔಷಧ ಗಂಜಿ ಮೇಳ

Team Udayavani, Aug 6, 2019, 8:40 AM IST

s-14

ಕಾಸರಗೋಡು: ಮಳೆಗಾಲದಲ್ಲಿ ಆರೋಗ್ಯ ಚೆನ್ನಾಗಿರಲು ಕರಾವಳಿಯ ಜನ ವಿವಿಧ ರೀತಿಯ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಇಂತಹ ಪರಂಪರಾಗತ ಆಹಾರ ಕ್ರಮವನ್ನು ನೆನಪಿಸುವ ಉದ್ದೇಶದಿಂದಲೇ ಇಲ್ಲೊಂದು ಕಡೆ ಗಂಜಿ ಮೇಳ ಆಯೋಜಿಸಲಾಗಿದೆ.

ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಈ ಮೇಳ ಗಮನ ಸೆಳೆಯುತ್ತಿದೆ.  ಕುಟುಂಬಶ್ರೀ ಜಿಲ್ಲಾ ಮಿಷನ್‌ ನೇತೃತ್ವದಲ್ಲಿ “ಅಮೃತಂ ಔಷಧ ಗಂಜಿ ಮೇಳ’ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ಸೋಮವಾರ ಆರಂಭಗೊಂಡಿದ್ದು, ಆ.13 ವರೆಗೆ ನಡೆಯಲಿದೆ.

ಗಂಜಿ ಮೇಳದಲ್ಲಿ ಏನಿದೆ?
ಔಷಧ ಸತ್ವಗಳನ್ನೊಳಗೊಂಡ ಔಷಧ ಗಂಜಿ, ಜೀರಿಗೆ ಗಂಜಿ, ತರಿಯಕ್ಕಿ ಗಂಜಿ, ಹಾಲುಗಂಜಿ, ಗೋ  ಗಂಜಿ, ತುಪ್ಪ ಗಂಜಿ ಸಹಿತ 8 ವಿಧದ ಗಂಜಿಗಳು ಇಲ್ಲಿ ಸಾಂಪ್ರಾಯಿಕ ಶೈಲಿಯಲ್ಲಿ ಸಿದ್ಧಗೊಳ್ಳುತ್ತಿವೆ. ಆರೋಗ್ಯ ಸಂರಕ್ಷಣೆ, ಪ್ರತಿರೋಧ ಶಕ್ತಿಹೆಚ್ಚಳ, ಜೀರ್ಣ ಶಕ್ತಿ ಇತ್ಯಾದಿಗಳಿಗೆ ಔಷಧ ಗಂಜಿ ರಾಮಬಾಣ ಎಂದು ಮೇಳದ ಪದಾ ಧಿಕಾರಿಗಳು ತಿಳಿಸಿದ್ದಾರೆ. ಜ್ವರ, ಮಲಬದ್ಧತೆ, ಕ್ಷೀಣ ಪರಿಹಾರಕ್ಕೆ ಜೀರಿಗೆ ಗಂಜಿ ಉತ್ತಮವಾಗಿದೆ. ದೈಹಿಕ ಶಕ್ತಿ ವರ್ಧನೆ ಇತ್ಯಾದಿಗಳಿಗೆ ಹಾಲುಗಂಜಿ ಪೂರಕವಾಗಿದೆ. ಸಿಹಿಮೂತ್ರರೋಗ ನಿಯಂತ್ರಣ, ವಾತರೋಗ ಶಮನ ಇತ್ಯಾದಿಗಳಿಗೆ ಗೋ  ಗಂಜಿ ಒಳ್ಳೆಯ ಔಷಧ. ಸಣಕಲು ದೇಹ ನಿವಾರಣೆ, ಶಕ್ತಿ ವರ್ಧನೆ ಇತ್ಯಾದಿಗಳಿಗೆ ಪೋಷಣೆ ನೀಡಬಲ್ಲ ಗಂಜಿಗಳೂ ಮೇಳದಲ್ಲಿವೆ ಎಂದು ಪದಾ ಧಿಕಾರಿಗಳು ಹೇಳಿದರು.

40 ರೂ.ಗೆ ಗಂಜಿ
40 ರೂ. ಬೆಲೆಯಿರುವ ಗಂಜಿ ಸೇವೆನೆ ಪೂರಕವಾದ ಚಟ್ನಿ, ಸೊಪ್ಪಿನ ಪಲ್ಯಗಳೂ ಜತೆಗಿವೆ. ಉಣ್ಣುವುದಕ್ಕೆ ಹಲಸಿನ ಎಲೆಯಿಂದ ತಯಾರಿಸಿದ ಗ್ರಾಮೀಣ ಶೈಲಿಯ ಸರಳ ಚಮಚ ಗಮನ ಸೆಳೆಯುತ್ತದೆ.

ಗಂಜಿ ಮೇಳದ ಚಪ್ಪರದಲ್ಲೇ ಔಷಧ ಗಂಜಿ ತಯಾರಿಸ ಬಹುದಾದ ಕಿಟ್‌, ಕುಟುಂಬಶ್ರೀ ಘಟಕಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ಇದೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.