ಗ್ರಾಮಾಂತರದಲ್ಲಿ ಭಾರೀ ಮಳೆ: ವಿವಿಧೆಡೆ ಹಾನಿ, ಜನಸಂಚಾರ ಅಸ್ತವ್ಯಸ್ತ
Team Udayavani, Jul 24, 2019, 5:00 AM IST
ಮಹಾನಗರ: ಮಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಎರಡೂ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧೆಡೆ ಅಪಾರ ಹಾನಿಯಾಗಿದ್ದು ಜನ ಸಂಚಾರ ಅಸ್ತವ್ಯಸ್ತವಾಗಿದೆ.
ಸಸಿಹಿತ್ಲು: ಗಾಳಿಗೆ ಮನೆ ಮೇಲ್ಛಾವಣಿ ಕುಸಿತ
ಸಸಿಹಿತ್ಲು: ಇಲ್ಲಿನ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬಳಿಯ ಮನೆಯೊಂದರ ಒಂದು ಭಾಗದ ಮೇಲ್ಛಾವಣಿಯು ಗಾಳಿಗೆ ಕುಸಿದು ಭಾರೀ ನಷ್ಟ ಸಂಭವಿಸಿದೆ. ಯಶೋದಾ ಅವರು ವಾಸವಾಗಿದ್ದ ಈ ಮನೆಯ ಮೇಲ್ಛಾವಣಿಯ ಸಹಿತ ಪಕ್ಕಾಸ್, ರೀಪು, ಹಂಚುಗಳು ಸಹ ಧರಾಶಾಯಿಯಾಗಿದ್ದು, ಆಧಾರವಾಗಿದ್ದ ಗೋಡೆಗೂ ಹಾನಿಯಾಗಿದೆ. ಸುಮಾರು 60 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.ಯಶೋದಾ ಅವರ ಸಹಿತ ಮನೆಯಲ್ಲಿನ ಕುಟುಂಬದ ಸದಸ್ಯರು ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಸ್ಥಳಕ್ಕೆ ಹಳೆಯಂಗಡಿ ಗ್ರಾ.ಪಂ. ಸದಸ್ಯ ಅಶೋಕ್ ಬಂಗೇರ ಭೇಟಿ ನೀಡಿದ್ದು ಪರಿಹಾರಕ್ಕಾಗಿ ಕಂದಾಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಗ್ರಾಮ ಕರಣಿಕರಾದ ಮೋಹನ್ ಅವರು ನಷ್ಟದ ಬಗ್ಗೆ ವರದಿಯನ್ನು ಕಂದಾಯ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಪೊರ್ಕೋಡಿ: ಕೃತಕ ನೆರೆಯಿಂದ ವಾಹನ ಸಂಚಾರಕ್ಕೆ ತೊಂದರೆ
ಬಜಪೆ: ಬಜಪೆ -ಜೋಕಟ್ಟೆ -ಸುರತ್ಕಲ್ ರಸ್ತೆಯ ಪೊರ್ಕೋಡಿಯಲ್ಲಿ ಮಳೆಯ ನೀರು ಹರಿದಾಡಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯ ಮೇಲಿಂದ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಎರಡು ದಿನದಿಂದ ಧಾರಾಕಾರ ಮಳೆ ಬರುತ್ತಿದ್ದು ಈ ಪ್ರದೇಶದ ಗದ್ದೆಗಳಲ್ಲಿ ನೀರು ತುಂಬಿದೆ. ಬಜಪೆಯಿಂದ ಬರುವ ತೋಡುಗಳಲ್ಲಿ ಮಳೆಯ ನೀರು ಕೂಡ ಹರಿಯುತ್ತಿದೆ. ಪೊರ್ಕೋಡಿ ಪ್ರದೇಶದಲ್ಲಿ ರಸ್ತೆಯು ತಗ್ಗು ಪ್ರದೇಶದಲ್ಲಿದ್ದು ಗದ್ದೆಗಳು ನೀರಿನಲ್ಲಿ ತುಂಬಿದಾಗ ತೋಡುಗಳ ಬದಲು ರಸ್ತೆಯಲ್ಲಿಯೇ ಹರಿಯುತ್ತಿವೆ. ಈ ಪ್ರದೇಶದಲ್ಲಿ ಒಂದೇ ಮೋರಿ ಇದ್ದು ಇದರಿಂದ ಮಳೆಯ ನೀರು ಪರ್ಯಾಪ್ತವಾಗುತ್ತಿಲ್ಲ.
ಮಳೆಯ ನೀರು ರಸ್ತೆಯ ಮೇಲಿಂದ ಹರಿದಾಡುವ ಕಾರಣ ಜೋರುಮಳೆ ಬಂದಾಗ ರಸ್ತೆ ಇಡೀ ನೀರು ನಿಂತು ಕೃತಕ ನೆರೆ ಉಂಟಾಗುತ್ತದೆ. ಈ ಸಮಯದಲ್ಲಿ ರಸ್ತೆ ಕಾಣದೇ ವಾಹನಗಳಿಗೆ ಸಂಚಾರಕ್ಕೆ ತೊಂದರೆಯಾಗುತ್ತದೆ. ನೀರು ರಸ್ತೆಯ ಮೇಲಿಂದ ಹರಿದಾಡುವ ಕಾರಣ ರಸ್ತೆ ಬದಿಯ ಮಣ್ಣು ಕೊರೆತವಾಗಿದ್ದು, ರಸ್ತೆ ಕಡಿಯುವ ಭೀತಿ ಇದೆ.
ಅದ್ಯಪಾಡಿ: ಮಳೆಗೆ ಗುಡ್ಡ ಕುಸಿತ
ಬಜಪೆ: ಸೋಮವಾರ ರಾತ್ರಿ ಸುರಿದ ಮಳೆಗೆ ಕಂದಾವರ ಗ್ರಾ.ಪಂ. ವ್ಯಾಪ್ತಿಯ ಅದ್ಯಪಾಡಿ ಚರ್ಚ್ ಬಳಿಯ ಗುಡ್ಡದ ಮಣ್ಣು ಕುಸಿತ ಕಂಡಿದೆ. ಕುಸಿದ ಮಣ್ಣು ಕೆಂಜಾರು-ಅದ್ಯಪಾಡಿ ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಉಳ್ಳಾಲ: ಕೃತಕ ನೆರೆ
ಉಳ್ಳಾಲ: ಉಳ್ಳಾಲ, ಕೋಟೆಕಾರು ದೇರಳಕಟ್ಟೆ, ಕೊಣಾಜೆ, ಮುಡಿಪುವಿನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮದಕದಲ್ಲಿ ಗುಡ್ಡ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ. ಕೊಣಾಜೆ ಸಮೀಪದ ದಡಸ್ ಆದಿಶಕ್ತಿ ದೇವಸ್ಥಾನದ ನಾಗನಕಟ್ಟೆಯ ಬಳಿ ಕಾಂಪೌಂಡ್ ಕುಸಿದು ಬಿದ್ದು ಹಾನಿಯಾಗಿದೆ ಉಳಿದಂತೆ ಸಣ್ಣಪುಟ್ಟ ಹಾನಿಯಾಗಿದ್ದು, ಕೊಲ್ಯ ಕನೀರು ತೋಟದಲ್ಲಿ ಕೃತಕ ನೆರೆಯಾಗಿದೆ. ಮಣ್ಣು ಇನ್ನೂ ಕುಸಿತವಾಗುವ ಸಂಭವವಿದೆ. ಜೇಸಿಬಿ ಮೂಲಕ ಮಣ್ಣುನ್ನು ರಸ್ತೆಯಿಂದ ತೆಗೆಯಲಾಗಿದ್ದರೂ ಮಣ್ಣು , ಬಂಡೆ ಗಳು ಉರುಳಿ ಪುನಃ ರಸ್ತೆಗೆ ಬರಲು ಸಾಧ್ಯ ವಿದೆ. ಗುಡ್ಡದ ಕೆಳಗೆ ಮನೆಗಳಿದ್ದು ಇನ್ನೂ ಮಳೆ ಬಂದಲ್ಲಿ ಮಣ್ಣು, ಬಂಡೆಗಳು ಉರುಳುವ ಸಂಭವವಿದ್ದು ಮನೆಗಳಿಗೆ ಅಪಾಯವಾಗುವ ಸಾಧ್ಯತೆ ಇದೆ.
ಅತ್ತೂರುಬೈಲು ಪ್ರದೇಶ ಜಲಾವೃತ
ಕಿನ್ನಿಗೋಳಿ: ಸೋಮವಾರ ಸುರಿದ ಭಾರೀ ಮಳೆಗೆ ನಂದಿನಿ ನದಿ ತುಂಬಿ ಹರಿಯುತ್ತಿದೆ. ಅತ್ತೂರುಬೈಲು ಜಲಾವೃತವಾಗಿತು. ಅತ್ತೂರುಬೈಲು ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನಿಂದ ಮುಳುಗಿದೆ. ಕಟೀಲು ಮಿತ್ತಬೈಲ್ ಪ್ರದೇಶದಲ್ಲಿಯೂ ಜಲಾವೃತ್ತವಾಗಿದೆ,
7 ಮನೆಗಳು ಜಲಾವೃತ
ಕೆಮ್ರಾಲ್ ಗ್ರಾ. ಪಂ. ವ್ಯಾಪ್ತಿಯ ಪಂಜಬೈಲ ಗುತ್ತು ಪ್ರದೇಶದಲ್ಲಿ 7 ಮನೆಗಳು ಜಲಾವೃತ ವಾಗಿವೆ. ಅಲ್ಲಿನ ಸತೀಶ್ ಶೆಟ್ಟಿ ಬೈಲಗತ್ತು ತನ ಸ್ವಂತ ದೋಣಿಯಲ್ಲಿ ಅಲ್ಲಿನ ಜನರು ಸಂಚಾರಕ್ಕೆ ಬಳಸಿ ಕೊಂಡಿದ್ದಾರೆ. ಸೋಮವಾರ ರಾತ್ರಿಯಿಂದಲೇ ನೆರೆ ನೀರು ಜಾಸ್ತಿಯಾಗಿದೆ ಎಂದು ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಉಲ್ಯ: 13 ಮನೆಗಳು ಜಲಾವೃತ
ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಉಲ್ಯ ಪ್ರದೇಶ ದಲ್ಲಿ 13 ಮನೆಗಳು ಜಲಾವೃತಗೊಂಡಿದ್ದು ಅಲ್ಲಿನ ಮನೆಗಳಿಗೆ ಸಂಪರ್ಕ ಕಲಿಸುವ ರಸ್ತೆಯೂ ಮುಳು ಗಿದೆ. ಇದರಿಂದ ಜನರೂ ಸಂಕ ಷ್ಟಕ್ಕೆ ಒಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?