ಸಂಗಮ ಸ್ಥಳ: ನದಿ ನೀರಿನ ಕಸ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು
Team Udayavani, Apr 18, 2019, 5:55 AM IST
ಉಪ್ಪಿನಂಗಡಿ: ಸಂಗಮ ಕ್ಷೇತ್ರದಲ್ಲಿ ಭಕ್ತರ ಹಳೆಯ ವಸ್ತ್ರಗಳು ಹಾಗೂ ಪ್ಲಾಸ್ಟಿಕ್ ತಾಜ್ಯಗಳು ತುಂಬಿದ್ದ ನೇತ್ರಾವತಿ ನದಿಯನ್ನು ಇಂದ್ರಪ್ರಸ್ಥ ವಿದ್ಯಾಲಯದ ನಾಲ್ವರು ಸ್ಕೌಟ್ ವಿದ್ಯಾರ್ಥಿಗಳು ರವಿವಾರ ಸಂಜೆ ಸ್ವಯಂಪ್ರೇರಿತರಾಗಿ ಸ್ವಚ್ಛಗೊಳಿಸಿದರು.
ಗತಿಸಿದ ಬಂಧುಗಳ ಅಸ್ಥಿಗಳನ್ನು ನದಿಯಲ್ಲಿ ವಿಸರ್ಜಿಸುವ ಭಕ್ತರು, ಬಳಿಕ ತೀರ್ಥಸ್ನಾನ ಮಾಡಿ, ತಾವು ಉಟ್ಟಿರುವ ಬಟ್ಟೆಗಳನ್ನು ಅಲ್ಲೇ ಎಸೆದು ಸಂಗಮ ಸ್ಥಳದಲ್ಲಿ ತ್ಯಾಜ್ಯ ರಾಶಿ ಬೀಳುವಂತೆ ಮಾಡಿದ್ದಾರೆ. ಅಸ್ಥಿಗಳನ್ನು ತಂದ ಪ್ಲಾಸ್ಟಿಕ್ ಕರಡಿಗೆ, ಉಟ್ಟಿರುವ ಹಳೆಯ ವಸ್ತ್ರ ಇತ್ಯಾದಿಗಳನ್ನು ಅಲ್ಲೇ ಬಿಸುಡುತ್ತಿರುವ ಕಾರಣ ಬೇಸಗೆಯಲ್ಲಿ ನದಿಯಲ್ಲಿ ನೀರಿನ ಹರಿವೂ ಇಲ್ಲದೆ ತ್ಯಾಜ್ಯಗಳ ರಾಶಿಯೇ ಕಾಣುತ್ತಿತ್ತು. ಪರಿಸರದ ಅಸ್ವತ್ಛತೆ ಹಾಗೂ ದುರ್ನಾತಕ್ಕೂ ಕಾರಣವಾಗಿತ್ತು.
ಈ ಕುರಿತು ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಗಮನಿಸಿದ ಇಂದ್ರಪ್ರಸ್ಥ ವಿದ್ಯಾಲಯದ ಸ್ಕೌಟ್ ವಿದ್ಯಾರ್ಥಿಗಳು, ತಮ್ಮ ಪುಟ್ಟ ಕೈಗಳಿಂದಲೇ ನದಿಯನ್ನು ಸ್ವತ್ಛಗೊಳಿಸಿದರು. ಅವರು ಸಂಗ್ರಹಿಸಿದ ತ್ಯಾಜ್ಯಗಳ ರಾಶಿ ಸಾಕಷ್ಟು ದೊಡ್ಡದಾಗಿತ್ತು.
ಪಾವಿತ್ರ್ಯ ಕಾಪಾಡಿ ವಿದ್ಯಾರ್ಥಿಗಳ ಮನವಿ
ಭಕ್ತರು ಕ್ಷೇತ್ರದ ಪಾವಿತ್ರ್ಯ ಕಾಪಾಡಬೇಕು. ನದಿಯಲ್ಲಿ ಬಟ್ಟೆ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ಹಾಳು ಮಾಡಬಾರದು ಎಂದು ಸ್ಕೌಟ್ ವಿದ್ಯಾರ್ಥಿ ಅನಿಕೇತ್ ಕುಮಾರ್ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ