ಮಲ್ಪೆ: ಅಪರೂಪದ ಹಾರುವ ಹಾವು ಪ್ರತ್ಯಕ್ಷ…!

ಪಶ್ಚಿಮ ಘಟ್ಟದ ಅಪರೂಪದ ಜೀವಿ ಇದು

Team Udayavani, Mar 30, 2019, 6:30 AM IST

snake

ಮಲ್ಪೆ: ಸಾಮಾನ್ಯವಾಗಿ ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಅಪರೂಪದ ಹಾರುವ ಹಾವು ಗೋಲ್ಡನ್‌ ಟ್ರೀ ಸ್ನೇಕ್‌ ಇತ್ತೀಚೆಗೆ ಮಲ್ಪೆಯ ಹೊಟೇಲ್‌ ಒಂದರಲ್ಲಿ ಪತ್ತೆಯಾಗಿದ್ದು ಬಹಳಷ್ಟು ಜನರ ಕುತೂಹಲಕ್ಕೂ ಕಾರಣವಾಗಿದೆ.

ಮರದಿಂದ ಮರಕ್ಕೆ ಹಾರುವ ಹಾವು ಇದಾಗಿದ್ದು, ಇದರ ವೈಜ್ಞಾನಿಕ ಹೆಸರು ಕೈಸೋಪೆಲಿಯ ಆರೆ°àಟ, ಕನ್ನಡದಲ್ಲಿ ಹಾರುವ ಹಾವು, ತುಳುವಿನಲ್ಲಿ ಪಲ್ಲೀಪುತ್ರ ಎಂದು ಕರೆಯುತ್ತಾರೆ.

ಮಲ್ಪೆಯ ಹೊಟೇಲ್‌ ಒಂದರಲ್ಲಿ ಕಾಣಸಿಕ್ಕ ಹಾವು ತರಕಾರಿ ಖರೀದಿಸಿದ ಬುಟ್ಟಿಯಿಂದ ಬಂದಿದೆ ಎನ್ನಲಾಗಿದೆ.

ಹೊಟೇಲಿನವರು ಮಲ್ಪೆ ಕೊಳದ ಉರಗ ಪ್ರೇಮಿ ಬಾಬು ಸಾಲ್ಯಾನ್‌ ಅವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಬಾಬು ಸಾಲ್ಯಾನ್‌ ಅವರು ಹಾವನ್ನು ಹಿಡಿದು ಉರಗತಜ್ಞ ಗುರುರಾಜ್‌ ಸನಿಲ್‌ ಅವರಿಗೆ ಒಪ್ಪಿಸಿದ್ದಾರೆ. ಗುರುರಾಜ್‌ ಸನಿಲ್‌ ಅವರು ಹಾವನ್ನು ಸುರಕ್ಷಿತವಾಗಿ ಪಶ್ಚಿಮಘಟ್ಟದ ಅರಣ್ಯಕ್ಕೆ ಬಿಟ್ಟಿದ್ದಾರೆ.

ವೃಕ್ಷವಾಸಿ ಜೀವಿ
ಹೆಚ್ಚಾಗಿ ಮರದಲ್ಲಿ ವಾಸಿಸುವ ಹಗಲು ವಾಸಿ ಹಾವು ಇದಾಗಿದ್ದು, ಇದು ಪಕ್ಷಿಗಳಂತೆ ಹಾರುವುದಿಲ್ಲ, ಮರದಿಂದ ಮರಕ್ಕೆ ಕೆಳಮುಖವಾಗಿ ನೆಗೆಯುತ್ತದೆ. ಬೇಟೆಗೆ, ಶತ್ರುಗಳ ರಕ್ಷಣೆ ಪಡೆಯಲು ತನ್ನ ಶರೀರವನ್ನು ಬಾಣದಂತೆ ಹದಗೊಳಿಸಿ ಜಿಗಿಯುವ ಕಲೆಗಾರಿಕೆ ಪ್ರಕೃತಿಯ ವಿಸ್ಮಯ ಎನ್ನುತ್ತಾರೆ ಗುರುರಾಜ್‌ ಸನಿಲ್‌. ಈ ಹಾವು ಗರಿಷ್ಠ ಒಂದೂವರೆ ಮೀ.ನಷ್ಟು ಉದ್ದ ಬೆಳೆಯುತ್ತದೆ. ಇದರಲ್ಲಿ ಹೆಣ್ಣು ಹಾವು ದೊಡ್ಡದಾಗಿರು ತ್ತದೆ. ಇದರ ಮೈಮೇಲೆ ಕೆಂಪು, ಹಳದಿ, ಕಪ್ಪು, ತಿಳಿ ಹಸಿರು ಬಣ್ಣಗಳ ಪಟ್ಟಿ ಇದೆ.

ಮಲೆನಾಡಿನಿಂದ ಕರಾವಳಿಗೆ ಹೇಗೆ ಬಂತು ?
ತನ್ನ ಹಲವು ವರ್ಷಗಳ ಹಾವಿನ ಒಡನಾಟದಲ್ಲಿ ಇದೇ ಮೊದಲ ಬಾರಿಗೆ ಈ ಮಲ್ಪೆ ಪರಿಸರದಲ್ಲಿ ಇದನ್ನು ಕಾಣುತ್ತಿದ್ದೇವೆ ಮರದಲ್ಲಿ ಹೆಚ್ಚು ವಾಸ ವಿರುವ ಈ ಹಾವು ಕರಾವಳಿ ತೀರ ಪ್ರದೇಶಗಳಲ್ಲಿ ಕಂಡುಬರುವುದು ವಿರಳ.

ಮಲೆನಾಡು ಪ್ರದೇಶಗಳಿಂದ ತರಕಾರಿ ವಾಹನ ಬರುತ್ತಿರುವಾಗ ಮರದಿಂದ ಮರಕ್ಕೆ ಹಾರುವ ವೇಳೆ ಆಯ ತಪ್ಪಿ ವಾಹನಕ್ಕೆ ಸೇರಿರುವ ಸಾಧ್ಯತೆ ಇದೆ. ಹೀಗೆ ತರಕಾರಿಯೊಳಗೆ ಸೇರಿ ಅಂಗಡಿಯ ಮೂಲಕ ಹೊಟೇಲಿಗೆ ಬಂದಿರಬಹುದು ಎನ್ನುತ್ತಾರೆ ಗುರುರಾಜ್‌ ಸನಿಲ್‌.

ಇದು ವಿಷದ ಹಾವಲ್ಲ
ಹಾವಿನ ಬಣ್ಣನೋಡಿ ಇದು ವಿಷದ ಹಾವು ಎಂದು ಭಾವಿಸಬಾರದು, ಇದು ವಿಷ ರಹಿತ ಹಾವು. ಕೆಲವರು ತಪ್ಪಾಗಿ ಅರ್ಥೈಸಿ ಗೊಂದಲಗೊಂಡು ವಿಷಕಾರಿ ಕಡಂಬಳ ಎಂದು ಕೊಲ್ಲುವ ಸಾಧ್ಯತೆ ಇದೆ. ಹಲ್ಲಿ, ಹಕ್ಕಿಗಳ ಮೊಟ್ಟೆ, ಸಣ್ಣಪುಟ್ಟ ಸಸ್ತನಿ, ಓತಿಕ್ಯಾತ, ಹಕ್ಕಿಗಳುಇದರ ಆಹಾರವಾಗಿದೆ. ಈ ಹಾವು ಮಾರ್ಚ್‌, ಏಪ್ರಿಲ್‌ ತಿಂಗಳ ಸಮಯದಲ್ಲಿ ಮಿಲನಗೊಂಡು ಜೂನ್‌-ಜುಲೈ ತಿಂಗಳ ವೇಳೆ ಮರದ ಪೊಟರೆಗಳಲ್ಲಿ 6ರಿಂದ 12 ಮೊಟ್ಟೆಯನ್ನಿಟ್ಟು ಮರಿ ಮಾಡುತ್ತದೆ.

-ಗುರುರಾಜ್‌ ಸನಿಲ್‌ ಉರಗ ತಜ್ಞ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.