ಮಾಡೋಡಿ ಸೇತುವೆ ಶೀಘ್ರ ದುರಸ್ತಿಗೆ ಸೂಚನೆ : ಬಿ.ವೈ. ರಾಘವೇಂದ್ರ
Team Udayavani, Aug 15, 2019, 8:51 PM IST
ಬೈಂದೂರು: ರಾಜ್ಯದಲ್ಲಿ ಸುರಿದ ಭೀಕರ ಮಳೆಗೆ ಕೊಚ್ಚಿಹೋದ ಮಡೋಡಿ ಸೇತುವೆಯ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳಿಗೆ ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಬೈಂದೂರು ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಡೋಡಿ ಸೇತುವೆ ಕುಸಿತಗೊಂಡು ಹೆದ್ದಾರಿ ಸಂಚಾರ ಸ್ಟಾಗಿಗೊಂಡಿತ್ತು.
ಹೊಸನಗರ ತಾಲ್ಲೂಕಿನ ಸಂಪೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡೋಡಿ ಸೇತುವೆಯನ್ನು ವೀಕ್ಷಣೆ ಮಾಡಿದ ಬಿ.ವೈ.ರಾಘವೇಂದ್ರ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿಯ ಎಂಜಿನಿಯರನ್ನು ಸ್ಥಳಕ್ಕೆ ಕರೆಸಿ ಹೆದ್ದಾರಿ ಸಂಚಾರ ಆರಂಭಿಸಲು ಅತಿ ಶೀಘ್ರದಲ್ಲಿ ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪನವರು, ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್ ದತ್ತಾತ್ರಿ , ಹೊಸನಗರ ತಾಲೂಕು ಬಿಜೆಪಿ ಅಧ್ಯಕ್ಷರಾದ ಎ.ವಿ. ಮಲ್ಲಿಕಾರ್ಜುನ್, ಸಾಗರ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಪ್ರಸನ್ನ ,ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಸ್ವಾಮಿರಾವ್ , ಮುಖಂಡರುಗಳಾದ ಕೆವಿ ಕೃಷ್ಣಮೂರ್ತಿ , ದೇವಾನಂದ ,ಬಿ ಯುವರಾಜ್ ಹಾಜರಿದ್ದರು.