ಕ್ರೀಡಾ ಸಚಿವಾಲಯದಿಂದ 200 ಕೋಟಿ ರೂ. ನೆರವು ಕೇಳಿದ ಐಒಎ
Team Udayavani, May 18, 2020, 6:45 AM IST
ಹೊಸದಿಲ್ಲಿ: ಕೋವಿಡ್-19ನಿಂದಾದ ನಷ್ಟವನ್ನು ತುಂಬಿಸಿಕೊಡಲು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಕೇಂದ್ರ ಕ್ರೀಡಾ ಸಚಿವಾಲಯದ ಬಳಿ ರವಿವಾರ 200 ಕೋಟಿ ರೂ. ಮೊತ್ತದ ಏಕ ಕಂತಿನ ಹಣಕಾಸಿನ ನೆರವನ್ನು ಕೇಳಿದೆ. ಇನ್ನು ಒಂದು ವರ್ಷ ಕಾಲ ಯಾವುದೇ ಪ್ರಾಯೋಜಕರು ಕೈಹಿಡಿಯುವ ಸಾಧ್ಯತೆ ಇಲ್ಲದ ಕಾರಣ ಈ ನೆರವನ್ನು ಐಒಎ ಅಪೇಕ್ಷಿಸಿದೆ.
ಈ ಕುರಿತು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಅವರು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದು, ಕೇಂದ್ರದಿಂದ ಹಣಕಾಸಿನ ನೆರವು ಲಭಿಸದೆ ಹೋದರೆ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ಕಷ್ಟವಾಗುತ್ತದೆ ಎಂದಿದ್ದಾರೆ.
ಮೊತ್ತದ ವಿಂಗಡಣೆ
ಐಒಎಗೆ 10 ಕೋಟಿ ರೂ., ಒಲಿಂಪಿಕ್ ನ್ಪೋರ್ಟ್ಸ್ನ ಪ್ರತಿಯೊಂದು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್ಎಸ್ಎಫ್) ತಲಾ 5 ಕೋಟಿ ರೂ., ಒಲಿಂಪಿಕ್ಸ್ ನ್ಪೋರ್ಟ್ಸ್ ವ್ಯಾಪ್ತಿಯಲ್ಲಿಲ್ಲದ ಎನ್ಎಸ್ಎಫ್ಗಳಿಗೆ ತಲಾ 2.5 ಕೋಟಿ ರೂ., ಪ್ರತಿಯೊಂದು ರಾಜ್ಯ ಒಲಿಂಪಿಕ್ ಅಸೋಸಿಯೇಶನ್ಗಳಿಗೆ ತಲಾ ಒಂದು ಕೋಟಿ ರೂ. ನೆರವು ನೀಡಬೇಕೆಂದು ನರೀಂದರ್ ಬಾತ್ರಾ ಸೂಚಿಸಿದ್ದಾರೆ.
“ಲಾಕ್ಡೌನ್ನಿಂದಾಗಿ ಇಡೀ ಜಗತ್ತಿನಲ್ಲಿ ಕ್ರೀಡಾ ಚಟುವಟಿಕೆ ನಿಂತು ಹೋಗಿದೆ. ಇದು ಪುನರಾರಂಭಗೊಂಡು ಮುಂದಿನ ಒಂದು ವರ್ಷ ಕಾಲ ಕ್ರೀಡೆಗಳಿಗೆ ಪ್ರಾಯೋಜಕರು ಲಭಿಸುತ್ತಾರೆಂಬ ನಂಬಿಕೆ ಇಲ್ಲ. ಇದರಿಂದ ಕ್ರೀಡಾ ಸಿದ್ಧತೆಗೆ, ತರಬೇತಿಗೆ ಭಾರೀ ಹಿನ್ನಡೆಯಾಗಲಿದೆ. ಹೀಗಾಗಿ ಕೇಂದ್ರ ಕ್ರೀಡಾ ಸಚಿವಾಲಯ ನೆರವಿಗೆ ನಿಲ್ಲುವುದೊಂದೇ ಮಾರ್ಗವಾಗಿದೆ’ ಎಂದು ನರೀಂದರ್ ಬಾತ್ರಾ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ಸದ್ಯ ಇದಕ್ಕೆ ಕ್ರೀಡಾ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಪ್ರಧಾನಿ ನಿಧಿಗೆ ಭಾರೀ ಮೊತ್ತ
ಆದರೆ ಇದೇ ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ ಮತ್ತು ಎನ್ಎಸ್ಎಫ್ ಒಟ್ಟುಗೂಡಿ ಪ್ರಧಾನಿ ಪರಿಹಾರ ನಿಧಿಗೆ 9.5 ಕೋಟಿ ರೂ. ನೀಡಿರುವುದು ಉಲ್ಲೇಖನೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು