ಭೂಮಿ ಕುಪ್ಪಳಿಸುತ್ತೆ, ಭೂಕಂಪ ಅಕ್ತೈತಿ ಎಂದ ಬಬಲಾದಿ ಸಿದ್ದು ಮುತ್ಯಾ ಭವಿಷ್ಯ ನಿಜವಾಯ್ತು
Team Udayavani, Sep 5, 2021, 2:33 PM IST
ವಿಜಯಪುರ : ಜಿಲ್ಲೆಯ ಬಬಲಾದಿ ಸದಾಶಿವ ಜಾತ್ರೆಯಲ್ಲಿ ಶ್ರೀಮಠದ ಸಿದ್ದರಾಮ ಮುತ್ಯಾ ನುಡಿದಿದ್ದ ಭೂಮಿ ಕುಪ್ಪಳಿಸುತ್ತೆ ಮಕ್ಕಳ್ರ್ಯಾ ಎಂದು ನುಡಿದಿದ್ದ ಕಾಲಜ್ಞಾನ ಭವಿಷ್ಯ ಇದೀಗ ನಿಜವಾಗಿದೆ.
ವಿಜಯಪುರ ಜಿಲ್ಲೆಯಾದ್ಯಂತ ಶನಿವಾರ ಕಡಿಮೆ ತೀವ್ರತೆಯ ಭೂಕಂಪನವಾಗಿದೆ. ಭೂಕಂಪ ಆಗಲಿದೆ ಎಂದು ಮಾ.18 ರಂದು ಶಿವರಾತ್ರಿ ದಿನ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಕಾಲಜ್ಞಾನ ಆಧರಿಸಿ ಸಿದ್ದರಾಮ ಮುತ್ಯಾ ಸ್ಪಷ್ಟವಾಗಿ ನೀಡಿದ್ದ ಕಾರ್ಣಿಕ ಇದೀಗ ಸತ್ಯವಾಗಿದೆ. ಸಿದ್ದರಾಮ ಮುತ್ಯಾ ನೀಡಿದ್ದ ಕಾಲಜ್ಞಾನದ ಅಂದಿನ ಭವಿಷ್ಯ ವಾಣಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.
ಕಾಲಜ್ಞಾನ ಸಂದೇಶದಲ್ಲಿ :
ಕೊಲ್ಹಾಪುರ ಮಹಾಲಕ್ಷ್ಮಿ ಉಲ್ಲೇಖಿಸಿದಂತೆ ಭೂಕಂಪ ತೀವ್ರತೆಯ ಕೇಂದ್ರವೂ ಕೊಲ್ಹಾಪುರದಲ್ಲೇ ಕೇಂದ್ರೀಕೃತ ವಾಗಿದೆ.
ಅಮೆರಿಕಾದಲ್ಲಿ ನೈಸರ್ಗಿಕ ಕೇಡು ಸಂಭವಿಸಲಿದೆ ಎಂದು ನುಡಿದ ಕಾಲಜ್ಞಾನ ಭವಿಷ್ಯದಂತೆ ವಿಶ್ವದ ದೊಡ್ಡಣ್ಣನ ನೆಲದಲ್ಲಿ ಅತಿವೃಷ್ಟಿ, ಪ್ರವಾಹ ಅಟ್ಟಹಾಸ ಮೆರೆಯುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಪ್ರವಾಹ ಸಂಕಷ್ಟ ಸೃಷ್ಟಿಸಿದೆ.
ಇದನ್ನೂ ಓದಿ :ಕರ್ನಾಟಕ ಸರ್ಕಾರದ ಡಿಜಿಟಲ್ ತಂತ್ರಜ್ಞಾನ ದೇಶಕ್ಕೆ ಮಾದರಿ: ನರೇಂದ್ರ ಸಿಂಗ್ ತೋಮರ್
ವಿಶ್ವದಲ್ಲಿ ಅಸೂಯೆ ರಾಜಕಾರಣ ಎಲ್ಲೆ ಮೀರಲಿದೆ, ಕೆಟ್ಟಫಲ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದರು. ಅದರಂತೆ ಅಫ್ಘಾನಿಸ್ತಾನ ದೇಶದಲ್ಲಿ ಇದೀಗ ತಾಲಿಬಾನ್ ಅಟ್ಟಹಾಸ ನಡೆದಿದೆ.
ಗಣ್ಯ ರಾಜಕೀಯ ವ್ಯಕ್ತಿಯ ಏರಿಳಿತದ ಬಗ್ಗೆಯೂ ಭವಿಷ್ಯ ನುಡಿದ್ದರು. ಕಳೆದ ತಿಂಗಳು ರಾಜ್ಯದಲ್ಲಿ ಅನಿರೀಕ್ಷಿತ ಎಂಬಂತೆ ಯಡಿಯೂರಪ್ಪ ಮುಖಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬೆಲೆ ಏರಿಕೆ ಬಗ್ಗೆ ಸಿದ್ದರಾಮ ಮುತ್ಯಾ ನೀಡಿದ ಕಾಲಜ್ಞಾನ ಭವಿಷ್ಯವಾಣಿ ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಶತಕ ಮೀರಿಸಿದ್ದು, ಗ್ಯಾಸ್ ಸಿಲಿಂಡರ್ ಬೆಲೆಯೂ ಏರಿದೆ. ಆಹಾರ ಧಾನ್ಯಗಳ ದುಬಾರಿ ಹೇಳಿಕೆಯೂ ನಿಜವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…