ಕೇಂದ್ರ ನೌಕರರ ತುಟ್ಟಿ ಭತ್ತೆ ಏರಿಕೆ : 2020 ಜ.1ರಿಂದ ಮೂರು ಅವಧಿಗೆ ಶೇ. 17ರಷ್ಟು ಹೆಚ್ಚಳ
Team Udayavani, Jul 15, 2021, 7:20 AM IST
ಹೊಸದಿಲ್ಲಿ : ತುಟ್ಟಿ ಭತ್ತೆ ಹೆಚ್ಚಳಕ್ಕಾಗಿ ಒಂದೂವರೆ ವರ್ಷದಿಂದ ಕಾಯುತ್ತಿದ್ದ ಕೇಂದ್ರ ಸರಕಾರಿ ನೌಕರರಿಗೆ ಮೋದಿ ಸರಕಾರ ಸಿಹಿ ಸುದ್ದಿ ನೀಡಿದೆ. 2021ರ ಜು. 1ರಿಂದ ಅನ್ವಯವಾಗುವಂತೆ ಶೇ. 11ರಷ್ಟು ತುಟ್ಟಿ ಭತ್ತೆ ಹೆಚ್ಚಿಸಲಾಗಿದ್ದು, ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ. ಮುಂದಿನ ತಿಂಗಳೇ ಹೊಸ ವೇತನವು ಫಲಾನುಭವಿಗಳ ಕೈಸೇರಲಿದೆ.
ಬುಧವಾರ ಪ್ರಧಾನಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂರು ಕಂತಿನ ತುಟ್ಟಿ ಭತ್ತೆಯನ್ನು ಪುನಃ ಸ್ಥಾಪನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. 7ನೇ ವೇತನ ಆಯೋಗದ ಅನ್ವಯ ತುಟ್ಟಿ ಭತ್ತೆ ಹೆಚ್ಚಿಸಲಾಗಿದೆ. ಸದ್ಯ ಶೇ. 17ರಷ್ಟು ಇದ್ದು ಶೇ. 28ರಷ್ಟಕ್ಕೆ ಏರಿಸಲಾಗಿದೆ.
ಒಂದೂವರೆ ವರ್ಷದಿಂದ ಏರಿಕೆಯಾಗಿಲ್ಲ
2020ರ ಜ. 1ರಿಂದಲೇ ಡಿಎ ಏರಿಕೆಯಾಗಿಲ್ಲ. ಜು. 1ರಂದು ವರ್ಷದ ಮೊದಲ ಕಂತು ಸೇರಿ ಶೇ. 4ರಷ್ಟು ಏರಿಕೆಗೆ ಕೇಂದ್ರ ನಿರ್ಧರಿಸಿತ್ತು. ಬಳಿಕ 2020ರ ಜುಲೈಯಲ್ಲಿ ಶೇ. 3 ಮತ್ತು 2021ರ ಜನವರಿಯಲ್ಲಿ ಶೇ. 4ರಷ್ಟು ಏರಿಕೆಗೆ ನಿರ್ಧಾರ ಮಾಡಲಾಗಿತ್ತು. ಕೊರೊನಾದಿಂದಾಗಿ ಜಾರಿ ಮಾಡಿಲ್ಲ. ಈಗ ಜು. 1ರಿಂದ ಅನ್ವಯವಾಗುವಂತೆ ಶೇ. 11ರಷ್ಟು ಏರಿಕೆ ಮಾಡಲಾಗಿದೆ. ಅಂದರೆ ಕಳೆದ ಮೂರು ಕಂತುಗಳಲ್ಲಿ ಏರಿಕೆ ಮಾಡಬೇಕಾದುದನ್ನು ಒಂದೇ ಬಾರಿಗೆ ಏರಿಸಿ ಆದೇಶ ಹೊರಡಿಸಲಾಗಿದೆ. ಆದರೆ ಇದಕ್ಕೆ ಅನ್ವಯವಾಗುವಂತೆ ಅರಿಯರ್ಸ್ ನೀಡುವುದಿಲ್ಲ. ಭತ್ತೆ ಹೆಚ್ಚಳದಿಂದಾಗಿ ನೌಕರರು ಮತ್ತು ಪಿಂಚಣಿದಾರರ ಟೇಕ್ ಹೋಂ ವೇತನ ಹೆಚ್ಚಳವಾಗಲಿದೆ ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಲೆಕ್ಕಾಚಾರ ಹೇಗೆ ?
ಈಗಷ್ಟೇ ಕೇಂದ್ರ ಸರಕಾರಿ ಹುದ್ದೆಗೆ ಸೇರಿರುವ ನೌಕರನೊಬ್ಬನ ಮೂಲ ವೇತನ 18 ಸಾವಿರ ರೂ. ಇದ್ದರೆ ಹೊಸ ತುಟ್ಟಿಭತ್ತೆ ಅನ್ವಯ 2 ಸಾವಿರ ರೂ. ಹೆಚ್ಚಾಗಿ ಸಿಗಲಿದೆ. ಇದರ ಜತೆ ಹಳೆಯ ಶೇ. 17 ಭತ್ತೆ ಸೇರಿಸಿದರೆ ಮೂಲ ವೇತನ 18 ಸಾವಿರ ರೂ. ಇರುವಾತ ಇನ್ನು 5,040 ಡಿಎ ಪಡೆಯಲು ಅರ್ಹನಾಗುತ್ತಾನೆ. ವರ್ಷಕ್ಕೆ 24 ಸಾವಿರ ರೂ. ಹೆಚ್ಚುವರಿ ಭತ್ತೆ ಪಡೆಯುತ್ತಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು