“ ಮಾಲು ಬೇಕು ಪ್ಲೀಸ್” ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು
Team Udayavani, Sep 22, 2020, 8:24 AM IST
ಮುಂಬೈ: ಸೆಲೆಬ್ರೆಟಿಗಳ ಡ್ರಗ್ ನಂಟು ಅಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಡ್ರಗ್ ಜಾಲದಲ್ಲಿ ಒಂದೊಂದೇ ಚಿತ್ರನಟ- ನಟಿಯರ ಹೆಸರು ಹೊರಬರುತ್ತಿದೆ. ಇದೀಗ ಬಾಲಿವುಡ್ ನ ಪ್ರಸಿದ್ದ ನಟಿ ದೀಪಿಕಾ ಪಡುಕೋಣೆ ಹೆಸರು ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ.
ಇದೀಗ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ಗೆ ಎನ್ ಸಿಬಿ ನೋಟಿಸ್ ನೀಡಲಾಗಿದೆ. ದೀಪಿಕಾಗೆ ಮಾದಕ ವಸ್ತುಗಳನ್ನು ಮ್ಯಾನೇಜರ್ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.
ಇದೀಗ ದೀಪಿಕಾ ಪಡುಕೋಣೆ ಮತ್ತು ಕರೀಶ್ಮಾ ಪ್ರಕಾಶ್ ನಡುವಿನ ವ್ಯಾಟ್ಸಪ್ ಸಂಭಾಷಣೆಯೊಂದು ಈಗ ಬಯಲಾಗಿದೆ. ಜೀ ನ್ಯೂಸ್ ಈ ಬಗ್ಗೆ ವರದಿ ಮಾಡಿದ್ದು, ಈ ಸಂಭಾಷಣೆ 2017ರ ಅಕ್ಟೋಬರ್ 28ಕ್ಕೆ ನಡೆದಿದೆ ಎನ್ನಲಾಗಿದೆ. ಈ ಸಂಭಾಷಣೆ ಈ ಕೆಳಗಿನಂತಿದೆ.
ಇದನ್ನೂ ಓದಿ: “ಭಯವಾಗುತ್ತಿದೆ, ನನ್ನನ್ನು ಕೊಲ್ಲುತ್ತಾರೆ’
(ಡಿ ಎಂದರೆ ದೀಪಿಕಾ ಮತ್ತು ಕೆ ಎಂದರೆ ಕರೀಶ್ಮಾ)
ಡಿ: ಕೆ.. ಮಾಲ್ ಇದೆಯಾ?
ಕೆ: ಇದೆ. ಆದರೆ ನಾನು ಬಾಂದ್ರಾದ ಮನೆಯಲ್ಲಿದ್ದೇನೆ.. ಆದರೆ ನಿಮಗೆ ಬೇಕಾದರೆ ಅಮಿತ್ ಬಳಿ ಕೇಳುತ್ತೇನೆ.
ಡಿ: ಹೌದು.. ಪ್ಲೀಸ್….
ಕೆ: ಅಮಿತ್ ಬಳಿಯಿದೆ. ಅವನು ತರುತ್ತಾನೆ.
ಡಿ: ಹ್ಯಾಶ್ ಆ? ವೀಡ್ ಬೇಡ
ಕೆ: ಕೊಕೊ ಬಳಿ ಯವಾಗ ಬರುತ್ತೀರಾ?
ಡಿ: 11.30/12
ಡಿ: ಅಲ್ಲಿ ಯಾವ ಸಮಯದವರೆಗೆ ಇರುತ್ತದೆ?
ಕೆ: ಅವಳು 11: 30 ಕ್ಕೆ ಹೇಳಿದಳು, ಏಕೆಂದರೆ ಅವಳು 12 ಕ್ಕೆ ಬೇರೆ ಸ್ಥಳದಲ್ಲಿರಬೇಕು.
ಮುಂಬೈನ ಕಮಲಾ ಮಿಲ್ಗ್ ಬಳಿಯಿರುವ ಕೊಕೊ ಹೋಟೆಲ್ ಬರಲು ಈ ಸಂಭಾಷಣೆಯಲ್ಲಿ ತಿಳಿಸಲಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ರಿಯಾ ಚಕ್ರಚರ್ತಿ, ಶೋವಿಕ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಅದಲ್ಲದೆ ನಟಿಯರಾದ ಸಾರಾ ಅಲಿ ಖಾನ್, ಶ್ರದ್ದಾ ಕಪೂರ್ ಹೆಸರು ಕೂಡಾ ಕೇಳಿಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ