ಬಿಜೆಪಿಯವರದ್ದು ನಾಲ್ಕು ಎಂಜಿನ್ ಸರ್ಕಾರ
Team Udayavani, Jan 12, 2023, 11:30 PM IST
ಬೆಂಗಳೂರು: ಬಿಜೆಪಿ ಅವರದ್ದು ಬರೀ ಡಬಲ್ ಇಂಜಿನ್ ಸರ್ಕಾರ ಅಲ್ಲ, ಮಹದಾಯಿ ವಿಚಾರದಲ್ಲಿ ನಾಲ್ಕು ಇಂಜಿನ್ನ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವಿಚಾರದ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿ, ಅವರು ಎಂಟು ಕಿ.ಮೀ. ರೋಡ್ ಶೋ ಆದರೂ ಮಾಡಲಿ, ಹತ್ತಾದರೂ ಮಾಡಲಿ, ನಾವು ಕೂಡ 500 ಕಿಮೀ ನಡೆದಿದ್ದೇವೆ, ಮೇಕೆದಾಟುಗಾಗಿ 150 ಕಿಮೀ ಪಾದಯಾತ್ರೆ ಮಾಡಿದ್ದೇವೆ. ಅವರೊಂದು ಉದ್ದೇಶಕ್ಕೆ ನಡೆದಿದ್ದಾರೆ. ನಾವೊಂದು ಉದ್ದೇಶಕ್ಕೆ ನಡೆದಿದ್ದೇವೆ. ಆದರೆ ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಉತ್ತರ ಕೊಡಲಿ ಎಂದು ಹೇಳಿದರು.
ಸುಮಲತಾ ಬಗ್ಗೆ ಮಾತನಾಡೋಲ್ಲ: ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಜತೆ ರಾಜಕೀಯ ಹೊಂದಾಣಿಕೆ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ನನ್ನ ದೂರುತ್ತಿದ್ದಾರೆ ಎಂಬ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಾಪ ಆ ಹೆಣ್ಣಮಗಳ ಬಗ್ಗೆ ಮಾತಾಡಿಲ್ಲ ಕಣಿÅ. ಯಾಕೆ ಆ ಹೆಣ್ಣಮಗಳ ಬಗ್ಗೆ ಮಾತಾಡೋಣ, ಮೈ ಸಿಸ್ಟರ್ ಪಾರ್ಲಿಮೆಂಟ್ ಮೇಂಬರ್. ನಾನು ಒಂದು ದಿನವೂ ಅವರ ಬಗ್ಗೆ ಮಾತಾಡಿಯೇ ಇಲ್ಲ ಎಂದರು.
ಚಿತ್ರ ನಟ ಸುದೀಪ್ ಅವರನ್ನ ಕಾಂಗ್ರೆಸ್ಗೆ ಆಹ್ವಾನಿಸುವ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ನಾಯಕತ್ವದಲ್ಲಿ ಯಾರಿಗೆಲ್ಲ ನಂಬಿಕೆಯಿದೆ, ಅವರನ್ನೆಲ್ಲ ಆಹ್ವಾನಿಸುತ್ತೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್