Election 2023: ದ.ಕ: ವಿವಿಧ ಚೆಕ್ಪೋಸ್ಟ್ಗಳ ಪರಿಶೀಲನೆ
Team Udayavani, Apr 7, 2023, 6:23 AM IST
ಬಂಟ್ವಾಳ: ರಾಜ್ಯ ವಿಧಾನಸಭಾ ಚುನಾ ವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಹಾಗೂ ಜಿ.ಪಂ. ಸಿಇಒ ಡಾ| ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ನೇತೃತ್ವದ ತಂಡ ಗುರುವಾರ ಕೇರಳದ ಗಡಿ ಪ್ರದೇಶ ಸೇರಿದಂತೆ ಬಂಟ್ವಾಳ ತಾಲೂಕಿನ ವಿವಿಧ ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಚೆಕ್ಪೋಸ್ಟ್ಗಳಲ್ಲಿ ವಾಹನ ತಪಾಸಣೆಯನ್ನು ಇನ್ನಷ್ಟು ಬಿಗುಗೊಳಿಸಲು ಸಿಬಂದಿಗೆ ನಿರ್ದೇಶನ ನೀಡಲಾಯಿತು. ಜತೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.
ಮಂಗಳೂರು ವಿಧಾನಸಭಾ ಕ್ಷೇತ್ರದ ಫರಂಗಿ ಪೇಟೆ (ಸ್ಥಳೀಯ), ಮುಡಿಪು (ಅಂತಾರಾಜ್ಯ), ತಲಪಾಡಿ (ಅಂತಾರಾಜ್ಯ) ಪುತ್ತೂರು ಕ್ಷೇತ್ರದ ಉಕ್ಕುಡ (ಸ್ಥಳೀಯ), ಸಾರಡ್ಕ (ಅಂತಾರಾಜ್ಯ), ಬಂಟ್ವಾಳ ಕ್ಷೇತ್ರದ ಕನ್ಯಾನ (ಅಂತಾರಾಜ್ಯ), ಅನೇಕಲ್ (ಅಂತಾರಾಜ್ಯ) ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿದರು.
ಈ ಬಗ್ಗೆ ಬಿ.ಸಿ. ರೋಡಿನಲ್ಲಿ ಪತ್ರಕರ್ತರ ಜತೆ ಎಸ್ಪಿ ವಿಕ್ರಮ್ ಅಮಟೆ ಮಾತನಾಡಿ, ಚೆಕ್ಪೋಸ್ಟ್ಗಳಲ್ಲಿ ಯಾವುದೇ ರೀತಿಯ ಅಕ್ರಮ ಸಾಗಣೆ ನಡೆಯದಂತೆ ನಿಗಾವಹಿಸಲು ಸೂಚಿಸಲಾಗಿದೆ.
ಮೊದಲ ಹಂತದಲ್ಲಿ ಆಗಮಿಸಿರುವ ಸಿಆರ್ಪಿಎಫ್ನ ಪಥ ಸಂಚಲನ ಆರಂಭಗೊಂಡಿದ್ದು, ಪ್ರತೀ ಕ್ಷೇತ್ರದ ಆಯ ಕಟ್ಟಿನ ಜಾಗ ಗಳಲ್ಲಿ ಮುಂದಿನ ಒಂದು ವಾರಗಳ ಕಾಲ ಪಥಸಂಚಲನ ಕೈಗೊಳ್ಳುವರು. ಬಳಿಕ ಅವರನ್ನು ಚೆಕ್ಪೋಸ್ಟ್, ಫ್ಲೆಯಿಂಗ್ ಸ್ಕ್ವಾಡ್ಗಳಿಗೆ ನಿಯೋಜಿಸಲಾಗುವುದು. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಸದ್ಯಕ್ಕೆ ಸಿಆರ್ಪಿಎಫ್ ನ 4 ತಂಡಗಳು ಆಗಮಿಸಿದ್ದು, ಮುಂದೆ ಒಟ್ಟು 15 ತಂಡಗಳು ಆಗಮಿಸಲಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಇಲಾಖೆ ಸನ್ನದ್ಧವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
Desi Swara: ಮಸ್ಕತ್- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ