ಸರ್ಜಿಕಲ್ ದಾಳಿಗೆ ಐದು ವರ್ಷ
Team Udayavani, Sep 30, 2021, 6:10 AM IST
ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆಯ ಮೇಲೆ 2016 ಸೆ.18ರಂದು ಪಾಕ್ನ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ದಾಳಿ ನಡೆಸಿದ್ದರು. ಆಗ, 19 ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತೀಕಾರವಾಗಿ 2016ರ ಸೆ.29ರಂದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿತ್ತು. ಆ ವೀರೋಚಿತ ಕಾರ್ಯಾಚರಣೆಗೆ ಬುಧವಾರ 5 ವರ್ಷಗಳು ಪೂರ್ತಿಯಾಗಿವೆ.
ಹೇಗಾಗಿತ್ತು ಕಾರ್ಯಾಚರಣೆ?
-ಭದ್ರತೆ ಮತ್ತು ಗೌಪ್ಯ ಕಾರಣಗಳಿಗಾಗಿ ಕಾರ್ಯಾಚರಣೆಯ ದಿನಾಂಕ ಬದಲಾವಣೆ ಮಾಡಲಾಗಿತ್ತು. ಈ ಬಗ್ಗೆ ಪ್ರಧಾನಿ ಮೋದಿಯವರೇ ಮಾಹಿತಿ ನೀಡಿದ್ದರು. ದಾಳಿಯಿಂದ ಫಲ ಸಿಗುತ್ತದೋ, ಇಲ್ಲವೋ ಎನ್ನುವುದು ಪ್ರಶ್ನೆಯಲ್ಲ. ಸೂರ್ಯೋದಯದ ಮೊದಲು ಸುರಕ್ಷಿತರಾಗಿ ಎಂದು ಯೋಧರಿಗೆ ಸೂಚಿಸಿದ್ದರು.
-ಕೇಂದ್ರ ಸರಕಾರ ಮತ್ತು ಸೇನೆ ಕಾರ್ಯಾಚರಣೆ ನಡೆಸಿದ್ದ ಯೋಧರ ತಂಡಕ್ಕೆ ಉಗ್ರರನ್ನು ಶಿಕ್ಷಿಸುವ ಕ್ರಮ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿತ್ತು.
ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟಕ್ಕೂ ಸಿದ್ದರಾಮಯ್ಯರಿಗೂ ಏನು ಸಂಬಂಧ: ಆರಗ ಪ್ರಶ್ನೆ
ಕಾರ್ಯಾಚರಣೆಯಿಂದ
ಏನಾಯಿತು?
ಪಿಒಕೆಯಲ್ಲಿ ನಮ್ಮ ದೇಶದ ಯೋಧರು 35-40 ಉಗ್ರರನ್ನು ಕೊಂದು ಹಾಕಿದ್ದರು.
ಯೋಜನೆ, ಸಿದ್ಧತೆ ಹೇಗಿತ್ತು?
-2016ರ ಸೆ.27ರಂದು ಎಲ್ಒಸಿ ಸಮೀಪ ಇರುವ ಗ್ರಾಮಗಳ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲಾಗಿತ್ತು.
-ಸೆ.24ರಂದೇ ಸರ್ಜಿಕಲ್ ದಾಳಿ ನಡೆಸಲು ಯೋಧರ ಆಯ್ಕೆ ನಡೆಸಿ, ತಂಡ ಸಿದ್ಧಗೊಳಿಸಲಾರಂಭಿಸಿತ್ತು. ನೈಟ್ ವಿಷನ್ ಡಿವೈಸ್, ಎ.ಕೆ.47 ರೈಫಲ್, ಟವೋರ್ 21 ಗನ್ಗಳಿಂದ ಪ್ರತೀಕಾರಕ್ಕೆ ಸಿದ್ಧವಾಗಿತ್ತು.
-ಇದರ ಜತೆಗೆ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ಗಳು, ಭಾರೀ ಪ್ರಮಾಣದ ಸ್ಫೋಟಕಗಳಿದ್ದವು.
-ಅದರಲ್ಲಿ ಭಾರೀ ಯಶಸ್ಸು ಉಂಟಾಗಿತ್ತು. ಹೀಗಾಗಿ, ಪ್ರತೀ ವರ್ಷದ ಸೆ.29ನ್ನು “ಸರ್ಜಿಕಲ್ ದಾಳಿಯ ದಿನ’ ಎಂದು ಆಚರಿಸಲಾಗುತ್ತದೆ.
-2018ರಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಸಮ್ಮಾನ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ