ಸ್ವಾತಂತ್ರ್ಯ ಹೋರಾಟಕ್ಕೂ ಸಿದ್ದರಾಮಯ್ಯರಿಗೂ ಏನು ಸಂಬಂಧ: ಆರಗ ಪ್ರಶ್ನೆ
Team Udayavani, Sep 29, 2021, 10:45 PM IST
ಬೆಂಗಳೂರು: ಸ್ವಾತಂತ್ರ್ಯ ಹೋರಾಟಕ್ಕೂ ಸಿದ್ದರಾಮಯ್ಯರಿಗೂ ಏನು ಸಂಬಂಧ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.
ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸಿದ್ದರಾಮಯ್ಯ ಏನೇನೋ ಮಾತನಾಡುತ್ತಿದ್ದಾರೆ. ಆರೆಸ್ಸೆಸ್ ಸಂಸ್ಥಾಪಕ ಹೆಡಗೆವಾರ್ ಸ್ವಾತಂತ್ರ್ಯ ಹೋರಾಟದಲ್ಲಿದ್ದರು. ಸ್ವಾತಂತ್ರ್ಯವನ್ನು ಯಾಕೆ ಕಳೆದುಕೊಂಡೆವು ಎಂದು ಚಿಂತನೆ ಮಾಡಿದವರು. ಆರೆಸ್ಸೆಸ್ ಬಗ್ಗೆ ಸಿದ್ದರಾಮಯ್ಯ ಮಾತನಾಡಿ ಮತ್ತಷ್ಟು ಕೆಳಗೆ ಹೋಗುತ್ತಿ ದ್ದಾರೆ ಎಂದು ಹೇಳಿದರು.
ಪೈರಸಿ ವ್ಯವಸ್ಥಿತ ಅಪರಾಧ
ಕೋಟಿಗೊಬ್ಬ -3 ಸಿನೆಮಾ ಪೈರಸಿಯಾಗಿರುವ ಬಗ್ಗೆ ನನಗೆ ನಿರ್ಮಾಪಕರು ದೂರು ನೀಡಿದ್ದಾರೆ. ಇದು ವ್ಯವಸ್ಥಿತ ಅಪರಾಧ ಅನಿಸುತ್ತದೆ. ಪೈರಸಿ ಮಾಡುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇನ್ನು ಅತ್ಯಾಚಾರಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಪ್ರಕಟವಾಗಿರುವುದು ಸ್ವಾಗತಾರ್ಹ. ಅವನೊಬ್ಬ ವಿಕೃತ, ಅಮಾನವೀಯ ವ್ಯಕ್ತಿ. ಅವನಿಗರ ಕೊಟ್ಟಿರುವ ಶಿಕ್ಷೆ ಸ್ವಾಗತಾರ್ಹ. ಘೋರ ಕೃತ್ಯಗಳನ್ನು ಎಸಗುತ್ತಿದ್ದ. ಆತನಿಗೆ ಕೋರ್ಟ್ ನೀಡಿದ ಶಿಕ್ಷೆ ಸ್ವಾಗತಾರ್ಹ ಎಂದು ಹೇಳಿದರು.