ಗೋಶಾಲೆಯೊಳಗೊಂದು ಕೋವಿಡ್ ಕೇರ್ ಸೆಂಟರ್: ಗುಜರಾತ್ನಲ್ಲಿದೆ ವಿಶೇಷ ಆರೈಕೆ ಕೇಂದ್ರ
ಇಲ್ಲಿ ಸೋಂಕಿತರಿಗೆ ಗೋವಿನ ಹಾಲು, ಗೋಮೂತ್ರದ ಔಷಧ
Team Udayavani, May 9, 2021, 6:40 PM IST
ಅಹಮದಾಬಾದ್: ಈ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಸೋಂಕಿತರಿಗೆ ಹಸುವಿನ ಹಾಲು ಮತ್ತು ಗೋಮೂತ್ರದಿಂದ ತಯಾರಿಸಿದ ಆಯುರ್ವೇದಿಕ್ ಔಷಧವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ, ಇಲ್ಲಿ ಚಿಕಿತ್ಸೆಯೂ ಸಂಪೂರ್ಣ ಉಚಿತ!
ಗುಜರಾತ್ನ ಬನಸ್ಕಾಂತಾ ಜಿಲ್ಲೆಯ ತೆಟೋಡಾ ಎಂಬ ಗ್ರಾಮದಲ್ಲಿ ಗೋಶಾಲೆಯೊಳಗೇ ಕೊರೊನಾ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದರ ಹೆಸರು “ವೇದಲಕ್ಷಣ ಪಂಚಗವ್ಯ ಆಯುರ್ವೇದ ಕೋವಿಡ್ ಐಸೋಲೇಷನ್ ಸೆಂಟರ್’.
ಮೇ 5ರಂದು ಈ ಕೇಂದ್ರ ಆರಂಭವಾಗಿದೆ. ಅಲ್ಪಪ್ರಮಾಣದ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗೋವಿನ ಹಾಲು, ತುಪ್ಪ ಹಾಗೂ ಗೋಮೂತ್ರ ಸೇರಿದಂತೆ 8 ಆಯುರ್ವೇದಿಕ್ ಔಷಧಗಳನ್ನು ಸೇರಿಸಿ ತಯಾರಿಸಲಾದ ಔಷಧವನ್ನು ನೀಡಲಾಗುತ್ತದೆ.
ಅಲೋಪಥಿ ವ್ಯವಸ್ಥೆಯೂ ಇದೆ:
“ನಾವು ಕೊರೊನಾ ಸೋಂಕಿನ ಲಕ್ಷಣಗಳಿರುವ ರೋಗಿಗಳಿಗೆ ಪಂಚಗವ್ಯ ಆಯುರ್ವೇದ ಥೆರಪಿ ಮಾಡುತ್ತಿದ್ದೇವೆ. ದೇಸಿ ತಳಿಯ ಹಸುಗಳ ಗಂಜಲ ಮತ್ತು ಇತರೆ ಗಿಡಮೂಲಿಕೆಗಳನ್ನು ಬಳಸಿ “ಗೋವು ತೀರ್ಥ’ವನ್ನು ತಯಾರಿಸಿ ನೀಡುತ್ತಿದ್ದೇವೆ. ಜತೆಗೆ, ಹಸುವಿನ ಹಾಲಿನಿಂದ ತಯಾರಿಸಿದ ಚವನ್ಪ್ರಶ್ ಅನ್ನೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಬಳಸುತ್ತಿದ್ದೇವೆ.
ಇದನ್ನೂ ಓದಿ :MEILನಿಂದ ಆಸ್ಪತ್ರೆಗಳಿಗೆ ನಿತ್ಯ 500ರಿಂದ 600 ಉಚಿತ ಆಕ್ಸಿಜನ್ ಸಿಲಿಂಡರ್ ರವಾನೆಗೆ ಸಿದ್ಧತೆ
ಸೋಂಕಿತರೇನಾದರೂ ಅಲೋಪಥಿ ಔಷಧ ಬೇಕು ಎಂದು ಹೇಳಿದರೆ ಅದಕ್ಕೂ ವ್ಯವಸ್ಥೆ ಕಲ್ಪಿಸಿದ್ದೇವೆ’ ಎಂದಿದ್ದಾರೆ ಗೋಧಾಮ ಮಹಾತೀರ್ಥ್ ಪಥಮೇದನ ಬನಸ್ಕಾಂತಾ ಘಟಕದ ಟ್ರಸ್ಟಿ ಮೋಹನ್ ಜಾಧವ್.
ಈ ಕೇಂದ್ರದಲ್ಲಿ ಪಥಮೇದ ಗೋಶಾಲೆಯ ಇಬ್ಬರು ಆಯುರ್ವೇದಿಕ್ ವೈದ್ಯರು ಹಾಗೂ ಇಬ್ಬರು ಎಂಬಿಬಿಎಸ್ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ಉಚಿತವಾಗಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!