ನೂತನ ಕೃಷಿ ನೀತಿಗಳಿಗೆ ಐಎಂಎಫ್ ಮೆಚ್ಚುಗೆ
ಗ್ರಾಮೀಣ ಭಾಗದ ಅಭಿವೃದ್ಧಿಗೂ ಈ ಕಾಯ್ದೆಗಳು ನೆರವಾಗಲಿವೆ' ಎಂದು ಪ್ರತಿಪಾದಿಸಿದ್ದಾರೆ.
Team Udayavani, Jan 16, 2021, 2:05 PM IST
ವಾಷಿಂಗ್ಟನ್: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳನ್ನು ವಿಶ್ವ ಹಣಕಾಸು ನಿಧಿ ಮುಕ್ತಕಂಠದಿಂದ ಶ್ಲಾ ಸಿದೆ. “ಭಾರತದ ಕೃಷಿರಂಗದ ಅಭಿವೃದ್ಧಿಗೆ ಹೊಸ
ಕಾಯ್ದೆಗಳು ನಿರ್ಣಾಯಕ ಪಾತ್ರ ವಹಿಸಲಿವೆ’ ಎಂದು ತಿಳಿಸಿದೆ.
ಐಎಂಎಫ್ ನ ಸಂಪರ್ಕ ನಿ ರ್ದೇಶಕ ಗೆರ್ರಿ ರೈಸ್ ಅವರು ಸುದ್ದಿಗೋಷ್ಠಿಯಲ್ಲಿ ಹೊಸದಿಲ್ಲಿಯ ರೈತರ ಪ್ರತಿಭಟನೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, “ಮಾರಾಟಗಾರರೊಂದಿಗೆ ನೇರ ಒಪ್ಪಂದ ಮಾಡಿಕೊಳ್ಳಲು ರೈತರಿಗೆ ಇದರಿಂದ ಸಾಧ್ಯವಾಗಲಿದೆ. ಮಧ್ಯವರ್ತಿಗಳ ಹಸ್ತಕ್ಷೇಪ ಗಣನೀಯವಾಗಿ ತಗ್ಗಿ, ಮಾರಾಟದ ಆದಾಯದಲ್ಲಿ ಅಧಿಕ ಪಾಲನ್ನು ರೈತರು ಹೊಂದಲಿದ್ದಾರೆ.
ಅಲ್ಲದೆ, ಗ್ರಾಮೀಣ ಭಾಗದ ಅಭಿವೃದ್ಧಿಗೂ ಈ ಕಾಯ್ದೆಗಳು ನೆರವಾಗಲಿವೆ’ ಎಂದು ಪ್ರತಿಪಾದಿಸಿದ್ದಾರೆ. ವಿವಾದಗಳಿಗೂ ಕಿವಿಗೊಡಿ: “ಕೃಷಿ ನೀತಿಗಳ ಪರಿಣಾಮ
ದಿಂದ ಖಚಿತವಾಗಿ ಉದ್ಯೋಗ ಮಾರುಕಟ್ಟೆಯೂ ಪ್ರಗತಿ ಕಾಣಲಿದೆ. ಆದರೆ ಈ ಸುಧಾರಣೆಗಳ ಪ್ರಯೋಜನವು ಕೃಷಿನೀತಿಗಳ ಅನುಷ್ಠಾನದ ಕಾಲಘಟ್ಟ ಮತ್ತು
ಪರಿಣಾಮಕಾರತ್ವ, ಅದರ ವಿಮರ್ಶೆಗಳನ್ನೂ ಅವಲಂಬಿಸಿದೆ.
ಹೀಗಾಗಿ ಕಾಯ್ದೆ ಕುರಿತು ಎದ್ದಿರುವ ವಿವಾದಗಳ ಬಗ್ಗೆಯೂ ಗಮನ ಕೇಂದ್ರೀಕರಿಸಬೇಕು. ಈ ಹೊಸ ವ್ಯವಸ್ಥೆ ಅನುಷ್ಠಾನ ವೇಳೆ ಅನಗತ್ಯ ತೊಂದರೆ ನೀಡುವವರ ಅಪಾಯವೂ ಎದುರಾಗುವ ಸಾಧ್ಯತೆ ಇದೆ’ ಎಂದೂ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ