ಮೌಂಟ್‌ ಎವರೆಸ್ಟ್‌ಗೂ ಕೋವಿಡ್‌ -19?


Team Udayavani, Apr 19, 2020, 6:30 AM IST

ಮೌಂಟ್‌ ಎವರೆಸ್ಟ್‌ಗೂ ಕೋವಿಡ್‌ -19?

ಮಣಿಪಾಲ: ಪರ್ವತಾರೋಹಿಗಳ ಸಾಲಿನೊಂದಿಗೆ ತುಳುಕುತ್ತಿದ್ದ ಜಗತ್ತಿನ ಅತೀ ದೊಡ್ಡ ಹಿಮಾಲಯ ಶಿಖರ ಈಗ ಮೌನ ಮತ್ತು ಏಕಾಂಗಿ.
ಐದು ವರ್ಷಗಳಲ್ಲಿ ಎರಡನೇ ಬಾರಿಗೆ ಎವರೆಸ್ಟ್‌ ತನ್ನ ಹಿಮಭರಿತ ಇಳಿಜಾರು ಪ್ರದೇಶಗಳಲ್ಲಿ ಯಾವುದೇ ಸಾಹಸಿಗನಿಲ್ಲದೇ ಬಿಕೋ ಎನ್ನುತ್ತಿದೆ.
ಕೋವಿಡ್‌-19 ವೈರಸ್‌ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‌ 11ರಂದು ಚೀನ ಟಿಬೆಟಿಯನ್‌ ಕಡೆಯಿಂದ ಹತ್ತುವ ಎಲ್ಲಾ ಯಾತ್ರೆಗಳನ್ನು ಸ್ಥಗಿತಗೊಳಿಸಿದೆ. ಚೀನದ ಈ ಕ್ರಮವನ್ನು ನೆರೆಹೊರೆಯ ನೇಪಾಲವು ಬೆಂಬಲಿಸಿದೆ.

ಪರ್ವತದ ಬದಿಯಲ್ಲಿ ಈಗ ಕ್ಲೈಂಬಿಂಗ್‌ ನಡೆಯುವ ಋತುವಾಗಿದ್ದರೂ ನೇಪಾಲ ಅದನ್ನು ಸ್ಥಗಿತಗೊಳಿಸಿದೆ. ಈ ಮೂಲಕ 5 ವರ್ಷಗಳ ಹಿಂದಿನ ಘಟನೆಯೊಂದನ್ನು ನೆನಪಿಸಿದಂತಾಗಿದೆ. 2015ರಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಆ ವರ್ಷ ಪ್ರದೇಶದಲ್ಲಿ ಭಾರೀ ಭೂಕಂಪಗಳು ಸಂಭವಿಸಿದಾಗ ಮುಂಜಾಗೃತಾ ಕ್ರಮವಾಗಿ ಸಂಚಾರ ನಿರ್ಬಂಧಿಸಲಾಗಿತ್ತು.

ಎವರೆಸ್ಟ್‌ ಮತ್ತು ನೇಪಾಲ
ಕೋವಿಡ್‌ -19 ಪ್ರವಾಸೋದ್ಯಮದ ದೃಷ್ಟಿಯಿಂದ ಜಗತ್ತಿನಾದ್ಯಂತ ಅಗಾಧ ಆರ್ಥಿಕ ಪರಿಣಾಮ ಬೀರಿದೆ. ಸಾಹಸ ಪ್ರವಾಸೋದ್ಯಮವು ನೇಪಾಲದ ಆರ್ಥಿಕತೆಯ ಬೆನ್ನೆಲುಬು ಎಂಬುದು ಅಷ್ಟೇ ಸತ್ಯ. ವಿಶೇಷವಾಗಿ ಈ ಋತುವಿನಲ್ಲಿ ಸುಮಾರು ಒಂದು ಮಿಲಿಯನ್‌ ಜನರ ಜೀವನೋಪಾಯದ ಹಾದಿ ನೆಲೆಯಾಗಿತ್ತು. ಪರ್ವತ ಮಾರ್ಗದರ್ಶಿಗಳು ಮತ್ತು ಶೆರ್‌ಪಾಗಳು, ಅಂಗಡಿಗಳು, ರೆಸ್ಟೋರೆಂಟ್‌ಗಳು, ಸಾರಿಗೆ, ಹೋಟೆಲ್‌ಗ‌ಳು, ಚಹಾ ಅಂಗಡಿಗಳು ಸೇರಿದಂತೆ ಇತರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಕೆಲಸ ಮಾಡುವವರ ಮೇಲೆ ಪರಿಣಾಮ ಬೀರಿದೆ.

ಉದ್ಯೋಗದಾತ
ಕಳೆದ ವರ್ಷ ಪರ್ವತದ ಮೇಲೆ ಸಂಭವಿಸಿದ ಟ್ರಾಫಿಕ್‌ ಜಾಮ್‌ 11 ಪರ್ವತಾರೋಹಿಗಳ ಸಾವಿಗೆ ಕಾರಣವಾಗಿತ್ತು. ಪರ್ವತಾರೋಹಣವು ರೋಮಾಂಚಕ ಮತ್ತು ಸವಾಲಿನ ಕ್ರೀಡೆ ಎಂಬುದು ಎಷ್ಟು ನಿಜವೋ ಅಷ್ಟೇ ಮಹತ್ವದ ವ್ಯಾಪಾರ ನೇಪಾಲ ರಾಷ್ಟ್ರಕ್ಕೆ ಆಗುತ್ತದೆ. ಎವರೆಸ್ಟ್‌ ಕ್ಲೈಂಬಿಂಗ್‌ ಉದ್ಯಮವು ಸಾವಿರಾರು ಕೈಗಳಿಗೆ ಉದ್ಯೋಗವನ್ನು ನೀಡಿದೆ. 2019ರಲ್ಲಿ ನೇಪಾಲವು ಪ್ರವಾಸೋದ್ಯಮದಿಂದ 240 ಬಿಲಿಯನ್‌ ನೇಪಾಳಿ ರೂ.ಗಳನ್ನು ಸಂಪಾದಿಸಿತ್ತು. 2018 ಮತ್ತು 2019 ಕ್ಲೈಂಬಿಂಗ್‌ ಸೀಸನ್‌ ನಲ್ಲಿ ಎವರೆಸ್ಟ್‌ ದಾಖಲೆ ನಿರ್ಮಿಸಿದೆ. 2019ರಲ್ಲಿ ಅತೀ ಹೆಚ್ಚಿನ ಪ್ರಮಾಣದ ಪರ್ವತಾರೋಹಿಗಳು ಈ ಶಿಖರವನ್ನು ಏರಿದ್ದರು.

ಈ ಬಾರಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸರಕಾರ ಕೈಗೊಂಡ ನಿರ್ಧಾರವನ್ನು ಉದ್ಯಮವು ಒಪ್ಪಿಕೊಂಡಿದೆ. ಅತ್ಯಂತ ಕಡಿಮೆ ಜನಸಂಖ್ಯೆ ಇರುವ ನೇಪಾಲದಲ್ಲಿ ವೈದ್ಯಕೀಯ ಸವಲತ್ತುಗಳೂ ಕಡಿಮೆ ಇವೆ. ಇಂಥ ಸಂದರ್ಭದಲ್ಲಿ ಸರಕಾರ ಸರಿಯಾದ ಕ್ರಮಕೈಗೊಂಡಿದೆ. ನಿಯಮ

ಪರಿಷ್ಕರಣೆ
ಕಳೆದ ವರ್ಷದ ಋತುವಿನ ನಡೆದ ದುರಂತದ ಅನಂತರ ನೇಪಾಲ ಸರಕಾರ ತನ್ನ ಕ್ಲೈಂಬಿಂಗ್‌ ನೀತಿಯನ್ನು ಪರಿಷ್ಕರಿಸಿತ್ತು. ಪರ್ವತಾರೋಹಿಗಳು ಎತ್ತರದ ಪರ್ವತಾರೋಹಣದ ಅನುಭವವನ್ನು ಹೊಂದಿದ್ದಾರೆ ಎಂಬುದನ್ನು ಸಾಬೀತು ಪಡಿಸಬೇಕಿದೆ. ಇದಕ್ಕಾಗಿ ಸಾಕಷ್ಟು ಪರಿಣತಿಯನ್ನು ಪಡೆದಿರು ವುದರ ಜತೆಗೆ ಆರೋಗ್ಯದ ಪುರಾವೆಗಳನ್ನು (ಹೆಲ್ತ್‌ ಸರ್ಟಿ ಫಿಕೆಟ್‌) ಒದಗಿಸಬೇಕು. ಸರಕಾರದಿಂದ ಅನುಮೋದಿತ ಗೊಂಡ ಪ್ರವಾಸೋದ್ಯಮ ಕಂಪನಿಗಳು ಯಾತ್ರೆಗಳನ್ನು ಆಯೋಜಿಸುವುದಾದರೆ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು. ಮಾತ್ರವಲ್ಲದೇ ನೇಪಾಲದ ನಾಗರಿಕರು ಮಾತ್ರ ಆ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕು ಎಂದಿದೆ.ಇಷ್ಟೆಲ್ಲಾ ಭದ್ರತಾ ಕ್ರಮಗಳೊಂದಿಗೆ ನೇಪಾಲ ಪ್ರವಾಸೋದ್ಯ ಮಕ್ಕೆ ಯೋಜನೆ ಹಾಕಿಕೊಂಡಿತ್ತು. ಆದರೆ ಸದ್ಯದ ಮಟ್ಟಿಗೆ ಶಿಖರ ಏರುವುದು ದೂರದ ಮಾತು.

ಟಾಪ್ ನ್ಯೂಸ್

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.