ತಾಲಿಬಾನ್ ಉಗ್ರ ಅನಾಸ್ ಹಕ್ಕಾನಿಗೆ ಘಜ್ನಿ ಆದರ್ಶವಂತೆ!
Team Udayavani, Oct 6, 2021, 11:00 PM IST
ಕಾಬೂಲ್: ಸೋಮನಾಥದಲ್ಲಿ ಶಿವಲಿಂಗ ನಾಶ ಮಾಡಿದ ದಾಳಿಕೋರ ಮೊಹಮ್ಮದ್ ಘಜ್ನಿ ತಾಲಿಬಾನ್ ಉಗ್ರ ಅನಾಸ್ ಹಕ್ಕಾನಿಗೆ ಆದರ್ಶವಂತೆ. ಹೀಗೆಂದು ಆತನೇ ನಾಚಿಕೆ ಇಲ್ಲದೆ ಹೇಳಿಕೊಂಡಿದ್ದಾನೆ. ತಾಲಿಬಾನ್ ಮುಖಂಡನಾಗಿರುವ ಆತ ಮೊಹಮ್ಮದ್ ಘಜ್ನಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದ ಫೋಟೋಗಳನ್ನು ಟ್ವೀಟ್ ಮಾಡಿಕೊಂಡಿದ್ದಾನೆ.
ಜತೆಗೆ “ಭಾರತದ ಸೋಮನಾಥದಲ್ಲಿ ಹತ್ತನೇ ಶತಮಾನದಲ್ಲಿ ಶಿವ ಲಿಂಗವನ್ನು ನಾಶ ಮಾಡಿದ ಘಜ್ನಿ ನಮಗೆ ಸ್ಫೂರ್ತಿಯಾಗಬೇಕು’ ಎಂದು ಬರೆದುಕೊಂಡಿದ್ದಾನೆ.
ಜತೆಗೆ “ವೀರ ಯೋಧ ಸುಲ್ತಾನ್ ಮೊಹಮ್ಮದ್ ಘಜ್ನಿಯ ಸ್ಮಾರಕಕ್ಕೆ ಭೇಟಿ ನೀಡಿದೆ. ಸೋಮನಾಥದಲ್ಲಿ ಶಿವಲಿಂಗ ನಾಶ ಮಾಡಿದ ಹೆಗ್ಗಳಿಕೆ ಆತನದ್ದು ಮತ್ತು ಆ ಕಾಲಕ್ಕೇ ಈ ಪ್ರದೇಶದಲ್ಲಿ ಪ್ರಭಾವಯುತವಾಗಿ ಮುಸ್ಲಿಂ ಆಡಳಿತ ಜಾರಿಗೊಳಿಸಲು ಪ್ರಯತ್ನಿಸಿದ್ದ’ ಎಂದು ಬರೆದುಕೊಂಡಿದ್ದಾನೆ.
ಇದನ್ನೂ ಓದಿ:Breaking News : ಬೆಳಗಾವಿಯಲ್ಲಿ ದುರಂತ : ಮನೆ ಕುಸಿದು 7 ಜನ ದುರ್ಮರಣ
1 ಸಾವಿರನೇ ಇಸವಿಯಿಂದ 1025ನೇ ಇಸವಿಯ ಅವಧಿಯಲ್ಲಿ ಘಜ್ನಿ 17 ಬಾರಿ ದೇಶಕ್ಕೆ ದಂಡೆತ್ತಿ ಬಂದಿದ್ದ. ಆತನ ಅವಧಿಯಲ್ಲಿ 50 ಸಾವಿರ ಹಿಂದೂಗಳು ಅಸುನೀಗಿದ್ದರು. 6.5 ಟನ್ ಚಿನ್ನವನ್ನು ಆತ ಲೂಟಿ ಮಾಡಿ ಇತಿಹಾಸ ಕಾಲದ ಅಫ್ಘಾನಿಸ್ತಾನದ ಘಜ್ನಿವಿಗೆ ಸಾಗಿಸಿದ್ದಾನೆ ಮತ್ತು ಸೋಮನಾಥ ದೇಗುಲ ನಾಶ ಮಾಡಿದ್ದ. 1947ರಲ್ಲಿ ದೇಶದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭ ಭಾಯ್ ಪಟೇಲ್ ಮುತುವರ್ಜಿಯಿಂದ ಸೋಮನಾಥ ದೇಗುಲವನ್ನು ಮತ್ತೆ ನಿರ್ಮಾಣ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್