ಶಿರಸಿ : ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Team Udayavani, Apr 3, 2022, 3:54 PM IST
ಶಿರಸಿ : ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಔಡಲ ಗ್ರಾಮದ ಮೊಗಡ್ಡೆಯ ಪಟ್ಟಣದ ಹೊಳೆಯಲ್ಲಿ ಯುಗಾದಿಯಂದು ಜಾರಿ ಬಿದ್ದು ನಾಪತ್ತೆಯಾದವ ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಚಂದ್ರಶೇಖರ್ ಪೂಜಾರಿ ಮೃತ ಪಟ್ಟ ದುರ್ದೈವಿ.
ಶನಿವಾರ ಯುಗಾದಿಯ ದಿನವಾಗಿದ್ದರಿಂದ ಹೊಳೆ ಬದಿಗೆ ಚಂದ್ರಶೇಖರ್ ಹೋಗಿದ್ದಾರೆ ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದರು.
ಬಳಿಕ ಇಲ್ಲಿನ ಸ್ಥಳೀಯರು ಸೇರಿ ಹೊಳೆಯಲ್ಲಿ ಹುಡುಕಿದರೂ ದೇಹ ಪತ್ತೆಯಾಗಲಿಲ್ಲ ಇಂದು (ಭಾನುವಾರ) ಈಜುಗಾರರಾದ ಸಾರ್ವಜನಿಕ ಲೈಫ್ ಗಾರ್ಡ್ ತಂಡದ ಗೋಪಾಲ ಗೌಡ ನೇತೃತ್ವದಲ್ಲಿ, ಹೊಳೆಯಿಂದ ಶವವನ್ನು ಹೊರಗೆ ತೆಗೆಯಲಾಯಿತು.
ಇದನ್ನೂ ಓದಿ : ಮನೆಯೇ ಮಂತ್ರಾಲಯ ಮನೆಯೇ ವಸ್ತುಸಂಗ್ರಹಾಲಯ