ಆರೋಗ್ಯವಾಗಿರಲಿ ಮಣ್ಣು

ವಿವಿಧ ಪ್ರದೇಶದಲ್ಲಿ 8-10 ಉಪಮಾದರಿ ತೆಗೆಯಲು ಜಾಗ ಗುರುತಿಸುವುದು.

Team Udayavani, Jun 25, 2021, 5:20 PM IST

ಆರೋಗ್ಯವಾಗಿರಲಿ ಮಣ್ಣು

ಮಣ್ಣಿನ ಫಲವತ್ತತೆ ಉಳಿಸಿ, ಬೆಳೆಸಿ, ಅಭಿವೃದ್ಧಿ ಮಾಡಿ ಮಣ್ಣಿನ ಉತ್ಪಾದಕತೆ ಹೆಚ್ಚಿಸುವುದು ಮತ್ತು ಸುಸ್ಥಿರಗೊಳಿಸುವುದು ಅತ್ಯಗತ್ಯ. ಯಾವುದೇ ಮಣ್ಣಿನ ವೈಜ್ಞಾನಿಕ ಪರೀಕ್ಷೆ ಮಾಡಿಸುವುದು ಪ್ರತಿಯೊಬ್ಬ ಕೃಷಿಕನ ಕರ್ತವ್ಯ. ಹಾಗಾಗಿ ಈ ಬಗ್ಗೆ ಮಾಹಿತಿ ಹೊಂದಿ, ಮುನ್ನಡೆದರೆ ಕೃಷಿ ಕಾರ್ಯಕ್ಕೆ ಅನುಕೂಲಕರ.

ಮಣ್ಣಿನ ಪರೀಕ್ಷೆ ಏಕೆ?
ಮಣ್ಣಿನ ರಸಸಾರ, ಲವಣಾಂಶ ತಿಳಿಯಲು, ಪೋಷಕಾಂಶಗಳ ಪ್ರಮಾಣ ಅರಿಯಲು, ಬೆಳೆಗಳಿಗೆ ಪೋಷಕಾಂಶ ಶಿಫಾರಸು ಮಾಡಲು, ನೀರಾವರಿಗೆ ಭೂಮಿ ಪೂರಕವೇ ಎಂದು ತಿಳಿಯಲು, ಲಾಭದಾಯಕ ವ್ಯವಸಾಯಕ್ಕೆ, ಖರ್ಚು, ಹಾನಿ ತಪ್ಪಿಸಲು, ಮಣ್ಣಿನ ಸುಧಾರಣೆಗಾಗಿ ಸುಧಾರಕಗಳ ಪ್ರಮಾಣ ನಿರ್ಧರಿಸಲು ಮಣ್ಣಿನ ಪರೀಕ್ಷೆ ಅತಿ ಅಗತ್ಯವೆನಿಸಿದೆ.

ಮಣ್ಣಿನ ಜಮೀನುಗಳನ್ನು ಪರೀಕ್ಷೆಗಾಗಿ ಮೇಲ್ಮೈ ಲಕ್ಷಣಗಳಿಗೆ ಅನುಗುಣವಾಗಿ ವಿಂಗಡಿಸಿಕೊಳ್ಳಬೇಕು. ಒಮ್ಮೆ ಬೆಳೆ ಬೆಳೆದ ಅನಂತ, ಬಿತ್ತನೆಯ ಮೊದಲು, ಮಳೆಗಾಲಕ್ಕೆ ಮುಂಚಿತವಾಗಿ ಗೊಬ್ಬರ ಸೇರಿಸುವ ಮೊದಲು ಹಾಗೂ ಪ್ರತಿ ವರ್ಷಕ್ಕೆ 2 ರಿಂದ 3 ಬಾರಿ ಮಣ್ಣಿನ ಪರೀಕ್ಷೆ ಮಾಡಬೇಕು.

ಉಪಕರಣ
ಮಣ್ಣಿನ ಮಾದರಿ ಪಡೆಯಲು ಸಲಿಕೆ, ಪಿಕಾಸಿ, ಪ್ಲಾಸ್ಟಿಕ್‌ ಬಕೆಟ್‌, ಪಾಲಿಥೀನ್‌ ಹಾಳೆ, ದಾರ, ಮಾರ್ಕರ್‌ ಪೆನ್‌, ಮಣ್ಣು ಸಂಗ್ರಹಣ ಬಟ್ಟೆ ಚೀಲ, ಮಾಹಿತಿ ಚೀಟಿ ಅಗತ್ಯವಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಅಂದರೆ ಪರೀಕ್ಷೆಗೆ ಬಳಸುವ ಮಣ್ಣನ್ನು ಮಳೆ ಬಂದ ಅನಂತರ ನೀರಾವರಿ ಮಾಡಿದ ಪ್ರದೇಶದಲ್ಲಿ ಮರದ ಬೇರು, ತ್ಯಾಜ್ಯ ಸುಟ್ಟ ಜಾಗ, ಗೊಬ್ಬರ ಹಾಕಿದ ಜಾಗ, ಕಾಲುವೆ, ದಿಣ್ಣೆ, ಜೌಗು ಪ್ರದೇಶದಲ್ಲಿ ತೆಗೆಯಬಾರದು. ಸಂಗ್ರಹಣೆಗೆ ಗೊಬ್ಬರದ ಚೀಲ ಉಪಯೋಗಿಸಬಾರದು. ಬಿಸಿಲಿನಲ್ಲಿ ಒಣಗಿಸಬಾರದು.

ಮಣ್ಣು ಆರೋಗ್ಯ ಅಭಿಯಾನ ಅಡಿಯಲ್ಲಿ ಕೇಂದ್ರ ಸರಕಾರ ನಿಗದಿಪಡಿಸಿರುವ ಮಾರ್ಗಸೂಚಿ ಪ್ರಕಾರ ಖುಷ್ಕಿ ಪ್ರದೇಶದಲ್ಲಿ 10 ಹೆ.ಗ್ರಿಡ್‌ ಪ್ರದೇಶದಲ್ಲಿ ಒಂದು ಮಣ್ಣು ಮಾದರಿ, ನೀರಾವರಿ ಪ್ರದೇಶದಲ್ಲಿ 2.5 ಹೆ. ಗ್ರಿಡ್‌ ಪ್ರದೇಶದಲ್ಲಿ ಒಂದು ಮಣ್ಣು ಮಾದರಿ ಸಂಗ್ರಹಿಸುವುದು. ವಾರ್ಷಿಕ ಬೆಳೆಗಳಿಗೆ 0- 30 ಸೆಂ. ಮೀ. ಆಳಕ್ಕೆ ಒಂದು ಮಾದರಿ, ಬಹು ವಾರ್ಷಿಕ ಬೆಳೆಗಳಿಗೆ 0- 30 ಸೆಂ.ಮೀ. ಮತ್ತು 30 ಸೆಂ.ಮೀ.ನಿಂದ 60 ಸೆಂ.ಮೀ. ಆಳಕ್ಕೆ ಎರಡು ಮಾದರಿ ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದಾಗಿದೆ.

ಮಣ್ಣು ಮಾದರಿ ಸಂಗ್ರಹಿಸುವ ವಿಧಾನ
 ಕ್ಯಾಡಸ್ಟ್ರಲ್‌ ನಕ್ಷೆಗಳನ್ನು ಪಡೆದು ಗ್ರಿಡ್‌ ನಕಾಶೆ ತಯಾರಿಸುವುದು. ಜಿಪಿಎಸ್‌ ಉಪಕರಣದ ಬಳಕೆ.
 ಭೂಮಿಯ ವಿಂಗಡಣೆ, ಮಣ್ಣಿನ ಬಣ್ಣ, ಇಳಿಜಾರು, ಬೆಳೆ ಪದ್ಧತಿ, ಮೇಲ್ಮೈ ಲಕ್ಷಣ ಹಾಗೂ ಇತರ ಲಕ್ಷಣದ ಆಧಾರದ ಮೇಲೆ.
 ಮರದ ಹತ್ತಿರ, ಗೊಬ್ಬರ ಗುಡ್ಡೆ, ಕಾಲುವೆ, ಹೊಂಡ, ಬೇಲಿ, ಬದು ಹತ್ತಿರ ತೆಗೆಯಬಾರದು.
 ವಿವಿಧ ಪ್ರದೇಶದಲ್ಲಿ 8-10 ಉಪಮಾದರಿ ತೆಗೆಯಲು ಜಾಗ ಗುರುತಿಸುವುದು.
 ವಿ ಆಕಾರದ 9-10 ಅಂಗುಲದ ಗುಂಡಿ ತೆಗೆದು, ಮೇಲಿನಿಂದ ಕೆಳಗಿನ ತನಕದ ಮಣ್ಣು ಸಂಗ್ರಹಿಸುವುದು.
 8-10 ಉಪ ಮಾದರಿಗಳ ಮಣ್ಣನ್ನು ಚೆನ್ನಾಗಿ ಮಿಶ್ರ ಮಾಡಿ ಕಸ ಕಡ್ಡಿ ತೆಗೆದು ಅರ್ಧ ಕೆ.ಜಿ.ಯಷ್ಟು ಚತುರ್ದಾಂಶ ಪದ್ಧತಿಯಂತೆ ಸಂಗ್ರಹಿಸಬೇಕು. ಮಣ್ಣನ್ನು ನೆರಳಲ್ಲಿ ಒಣಗಿಸಿ ಶೇಖರಿಸಬೇಕು.
 ಚೀಲಗಳಲ್ಲಿ ತುಂಬಿ ಜಮೀನಿನ ಮತ್ತು ರೈತರ ಮಾಹಿತಿಯ ಚೀಟಿಯನ್ನು ಅನುಬಂಧದ ಪ್ರಕಾರ ಭರ್ತಿ ಮಾಡಿ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಬೇಕು.

ಟಾಪ್ ನ್ಯೂಸ್

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.