ದೂರದೃಷ್ಟಿ-ಕ್ರಿಯಾಶಕ್ತಿಯ ಸಮ್ಮಿಶ್ರಣವೇ ಈ ಬಜೆಟ್
ರೈತರ ಆದಾಯ ದುಪ್ಪಟ್ಟುಗೊಳಿಸಲು ಆರ್ಥಿಕ ಸಶಕ್ತೀಕರಣ; ಪ್ರಧಾನಿ ನರೇಂದ್ರ ಮೋದಿ ಬಣ್ಣನೆ
Team Udayavani, Feb 2, 2020, 7:00 AM IST
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಆಯವ್ಯಯವು ಆರ್ಥಿಕತೆಗೆ ವರವಾಗಿ ಪರಿಣಮಿಸಲಿದ್ದು, ಅಲ್ಲಿ ಘೋಷಿಸಲಾದ ಸುಧಾರಣಾ ಯೋಜನೆಗಳು ದೂರದೃಷ್ಟಿ ಹಾಗೂ ಕ್ರಿಯಾಶಕ್ತಿ ಎರಡನ್ನೂ ಹೊಂದಿವೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಜತೆಗೆ, ಇದಕ್ಕಾಗಿ ಸಚಿವೆ ನಿರ್ಮಲಾ ಮತ್ತು ತಂಡವನ್ನು ಅಭಿನಂದಿಸಲು ಬಯಸುತ್ತೇನೆ ಎಂದಿದ್ದಾರೆ.
ಬಜೆಟ್ನಲ್ಲಿ ಘೋಷಿಸಲಾದ ಸುಧಾರಣಾ ಕ್ರಮಗಳು ದೇಶದಲ್ಲಿ ಉದ್ಯೋಗಾವ ಕಾಶಗಳನ್ನು ಸೃಷ್ಟಿಸಲಿದೆ ಮತ್ತು ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ನೆರವಾಗಲಿದೆ. ನಾಗರಿಕರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲಿದೆ ಎಂದೂ ಮೋದಿ ಹೇಳಿದ್ದಾರೆ.
ಕೃಷಿ, ಮೂಲಸೌಕರ್ಯ, ಜವಳಿ ಮತ್ತು ತಂತ್ರಜ್ಞಾನದಂಥ ನಾಲ್ಕು ಪ್ರಮುಖ ವಲಯಗಳ ಮೇಲೆ ಗಮನ ಕೇಂದ್ರೀಕರಿಸಿರುವ ಕಾರಣ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ. ಇನ್ನು ಕೃಷಿ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಮತ್ತು ಹೊಸ ವಿಧಾನಗಳೆರಡಕ್ಕೂ ಒತ್ತು ಕೊಟ್ಟಿರುವ ಕಾರಣ ಇಲ್ಲೂ ಉದ್ಯೋಗ ಸೃಷ್ಟಿಯಾಗುವುದಲ್ಲದೆ, ಯುವಜನತೆ ಮೀನು ಸಂಸ್ಕರಣೆ ಮತ್ತು ಮಾರ್ಕೆಟಿಂಗ್ನಂಥ ಕ್ಷೇತ್ರಗಳತ್ತ ಮುಖ ಮಾಡುವಂತೆ ಮಾಡಲಿದೆ ಎಂದೂ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಕನಿಷ್ಠ ಸರಕಾರ, ಗರಿಷ್ಠ ಆಡಳಿತಕ್ಕೆ ಸಂಬಂಧಿಸಿ ಸರಕಾರದ ಬದ್ಧತೆಯನ್ನು ಈ ಬಜೆಟ್ ಮತ್ತಷ್ಟು ಬಲಪಡಿಸಿದೆ ಎಂದೂ ಮೋದಿ ಶ್ಲಾಘಿಸಿದ್ದಾರೆ.
ಕ್ರಮೇಣ ಎಲ್ಲ ತೆರಿಗೆ ವಿನಾಯ್ತಿಗೂ ಕೊಕ್: ನಿರ್ಮಲಾ
ದೀರ್ಘಾವಧಿಯಲ್ಲಿ ಎಲ್ಲ ರೀತಿಯ ತೆರಿಗೆ ವಿನಾಯ್ತಿಗಳನ್ನೂ ತೆಗೆದುಹಾಕುವ ಉದ್ದೇಶ ಸರಕಾರಕ್ಕಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಜೆಟ್ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, “ನಾವು ತೆರಿಗೆ ದರ ಸರಳೀಕರಣ ಮತ್ತು ಇಳಿಕೆ ಎರಡರತ್ತಲೂ ಗಮನ ಹರಿಸಿದ್ದೇವೆ. ಕ್ರಮೇಣ ನಾವು ತೆರಿಗೆ ದರ ಕಡಿತ ಮಾಡುತ್ತೇವೆ. ಆಗ ವಿನಾಯ್ತಿಗಳಿದ್ದಷ್ಟೂ ಸಮಸ್ಯೆಗಳು ಹೆಚ್ಚು. ಹೀಗಾಗಿ, ದೀರ್ಘಾವಧಿಯಲ್ಲಿ ಎಲ್ಲ ತೆರಿಗೆ ವಿನಾಯ್ತಿಗಳನ್ನೂ ತೆಗೆದುಹಾಕುವ ಉದ್ದೇಶವಿದೆ’ ಎಂದು ಹೇಳಿದ್ದಾರೆ. ಅಭಿಲಾಷೆಯ ಭಾರತ, ಸರ್ವರಿಗೂ ಆರ್ಥಿಕ ಅಭಿವೃದ್ಧಿ ಮತ್ತು ಕಾಳಜಿಯ ಸಮಾಜ ಎಂಬ ಮೂರು ಥೀಮ್ಗಳನ್ನು ಇಟ್ಟುಕೊಂಡು ಬಜೆಟ್ ಸಿದ್ಧಪಡಿಸಲಾಗಿದೆ ಎಂದೂ ನಿರ್ಮಲಾ ತಿಳಿಸಿದ್ದಾರೆ. ಪ್ರಸ್ತುತ ಸುಧಾರಣಾ ಕ್ರಮಗಳ ಧ್ಯೇಯವೇನೆಂದರೆ, ತೆರಿಗೆದಾರರ ಕೈಯಲ್ಲಿ ಹಣ ಓಡಾಡುತ್ತಿರಬೇಕು ಮತ್ತು ಅದನ್ನು ತನಗಿಷ್ಟಬಂದಂತೆ ಬಳಸುವಂಥ ಸ್ವಾತಂತ್ರ್ಯ ಆತನಿಗಿರಬೇಕು. ಇದುವೇ ನಮ್ಮ ಗುರಿ’ ಎಂದೂ ನಿರ್ಮಲಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!
Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ
Budget 2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು
Expert’s Opinion: ಗ್ಯಾರಂಟಿ ಭಾರ ಇಲ್ಲದಿದ್ದರೆ ಇನ್ನೂ ಉತ್ತಮ ಆಗಿರುತ್ತಿತ್ತು
Start-up Sector; ನವ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್ ಅಪ್
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ