ನಾಯಕ ಕೊಹ್ಲಿಯನ್ನು ಕಾಡಿದ ಎರಡು ಅಚ್ಚರಿ!
Team Udayavani, Mar 30, 2021, 7:10 AM IST
ಪುಣೆ: ಏಕದಿನ ಸರಣಿ ವಶಪಡಿಸಿಕೊಂಡ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡು ಅಚ್ಚರಿಗಳನ್ನು ಹೊರ ಗೆಡಹಿದ್ದಾರೆ.
“ಶಾರ್ದೂಲ್ ಠಾಕೂರ್ ಪಂದ್ಯ ಶ್ರೇಷ್ಠರಾಗದಿದ್ದುದು, ಹಾಗೆಯೇ ಭುವನೇಶ್ವರ್ ಕುಮಾರ್ ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾಗದಿದ್ದುದು ನನಗೆ ಆಶ್ಚರ್ಯ ತಂದಿದೆ. ಬ್ಯಾಟಿಂಗ್ ಟ್ರ್ಯಾಕ್ ಮೇಲೂ ಇವರಿಬ್ಬರ ಬೌಲಿಂಗ್ ಅತ್ಯಂತ ಪರಿಣಾಮ ಕಾರಿಯಾಗಿತ್ತು. ಎರಡು ಅಗ್ರ ಹಾಗೂ ಬಲಿಷ್ಠ ತಂಡಗಳು ಮುಖಾಮುಖೀಯಾದಾಗ ಇಂಥ ರೋಮಾಂಚನ ಸಹಜ’ ಎಂದರು.
“ಯಾರೂ ಸುಲಭದಲ್ಲಿ ಗೆಲ್ಲು ವುದಿಲ್ಲ ಅಥವಾ ಸುಲಭದಲ್ಲಿ ಸೋಲುವುದಿಲ್ಲ. ಸ್ಯಾಮ್ ಕರನ್ ಶ್ರೇಷ್ಠ ಇನ್ನಿಂಗ್ಸ್ ಒಂದನ್ನು ಪ್ರದರ್ಶಿಸಿ ಪಂದ್ಯದ ಕುತೂ ಹಲವನ್ನು ಕೊನೆಯ ತನಕವೂ ಕಾಯ್ದಿರಿಸಿದರು. ಆದರೆ ನಾವು ಸುಲಭದ ಕ್ಯಾಚ್ಗಳನ್ನು ಕೈಚೆಲ್ಲಿದ್ದು ಮಾತ್ರ ಬೇಸರ ಮೂಡಿಸಿದೆ. ಹಾಗೆಯೇ ಆರಂಭದ ಬ್ಯಾಟಿಂಗ್ ಲಯಕ್ಕೆ ತಕ್ಕ ಮೊತ್ತವನ್ನು ಪೇರಿಸಲು ನಾವು ವಿಫಲವಾದೆವು. ಇಲ್ಲಿ 370-380ರಷ್ಟು ರನ್ ಬರಬೇಕಿತ್ತು’ ಎಂಬುದಾಗಿ ಕೊಹ್ಲಿ ಹೇಳಿದರು.
“ವಿಶ್ವ ಚಾಂಪಿಯನ್ ತಂಡ ದೆದುರು ನಾವು ಪರಿಪೂರ್ಣ ಸರಣಿ ಮುಕ್ತಾಯ ಕಂಡಿರುವುದು ಖುಷಿಯ ಸಂಗತಿ. ಮುಂದಿನ ಗಮನವೆಲ್ಲ ಐಪಿಎಲ್ನತ್ತ…’ ಎಂದರು ವಿರಾಟ್ ಕೊಹ್ಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
Gukesh: ಚಾಂಪಿಯನ್ ಗುಕೇಶ್ಗೆ ಭವ್ಯ ಸ್ವಾಗತ