ಅತ್ತ ದರಿ, ಇತ್ತ ಪುಲಿ.. ಹೀಗಿದೆ ಉಕ್ರೇನ್ ಪರಿಸ್ಥಿತಿ
ಗಡಿ ಪ್ರಾಂತ್ಯಗಳಲ್ಲಿ ಹೊರ ರಾಷ್ಟ್ರಗಳ ದಾಳಿ; ದೇಶದೊಳಗೆ ನಿಲ್ಲದ ಕೋವಿಡ್ ಹಾವಳಿ
Team Udayavani, Feb 27, 2022, 7:55 AM IST
ಕೀವ್: ಒಂದು ಕಡೆ, ದೇಶದ ಗಡಿ ಪ್ರಾಂತ್ಯಗಳಲ್ಲಿನ ನಗರಗಳ ಮೇಲೆ ರಷ್ಯಾ ಪಡೆಗಳಿಂದ ದಾಳಿ… ಮತ್ತೊಂದು ಕಡೆ, ದೇಶದಲ್ಲಿ ಕೊರೊನಾ ಸೋಂಕು ಹಾಗೂ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸವಾಲುಗಳು. ಹೀಗೆ, ಉಕ್ರೇನ್ ರಾಷ್ಟ್ರದ ಪರಿಸ್ಥಿತಿ, ಅತ್ತ ದರಿ, ಇತ್ತ ಪುಲಿ ಎಂಬಂತಾಗಿದೆ.
ಯುದ್ಧ ಶುರುವಾದಾಗ ಕೊರೊನಾ ಇನ್ನೂ ನಿಯಂತ್ರಣಕ್ಕೆ ಬಂದಿರಲಿಲ್ಲ. ಅದನ್ನು ನಿಭಾಯಿಸುವುದೇ ಕಷ್ಟಕರ ಎಂಬಂತಾಗಿತ್ತು. ಈಗ ದಿಢೀರನೆ ಯುದ್ಧ ಪ್ರತ್ಯಕ್ಷವಾಗಿದೆ. ಫೆ. 24ರಂದು ರಷ್ಯಾ ದಾಳಿ ಆರಂಭಿಸಿತು. ಏಳು ದಿನಗಳ ಮುಂದೆ, ಉಕ್ರೇನ್ನಲ್ಲಿ ಕೊರೊನಾ ಸಾವಿನ ಸಂಖ್ಯೆ 26,740ರಷ್ಟಿತ್ತು. ಕೇವಲ 4.4 ಕೋಟಿ ಜನಸಂಖ್ಯೆಯಿರುವ ಉಕ್ರೇನ್ ರಾಷ್ಟಕ್ಕೆ ಇದು ದೊಡ್ಡ ಸಂಖ್ಯೆ.
ಇನ್ನು, ಲಸಿಕೆ ವಿಚಾರಕ್ಕೆ ಬರುವುದಾದರೆ, ದೇಶದ ಶೇ. 35.6ರಷ್ಟು ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಎರಡನೇ ಡೋಸ್ ಪಡೆದವರ ಪ್ರಮಾಣ ಶೇ. 34.3ರಷ್ಟಿದೆ. ಬೂಸ್ಟರ್ ಡೋಸ್ ಪಡೆದವರ ಪ್ರಮಾಣ ಶೇ. 1.6ರಷ್ಟಿದೆ.
ಇನ್ನು, ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚಾಗಿರುವ ದೇಶಗಳಲ್ಲಿ ಉಕ್ರೇನ್ ಕೂಡ ಒಂದು. ಉಕ್ರೇನ್ ವಿರೋಧಿ ಬಂಡುಕೋರರ ಹಿಡಿತದಲ್ಲಿದ್ದ ಡೊನೆಟ್ಸ್ ಹಾಗೂ ಲುಹಾನ್ಸ್ಕ್ ಗಳಲ್ಲಿಯೂ ಸಾವಿನ ಸಂಖ್ಯೆ ಅಧಿಕವಾಗಿತ್ತು.
ಹೀಗಾಗಿ, ಕೊರೊನಾ ನಿಯಂತ್ರಿಸು ಹೈರಾಣಾಗಿದ್ದ ಉಕ್ರೇನ್ನ ತನ್ನ ಬಜೆಟ್ನಲ್ಲಿ ಗಣನೀಯ ಮೊತ್ತವನ್ನು ಆರೋಗ್ಯ ಇಲಾಖೆಗೆ ನೀಡುತ್ತಿತ್ತು. ಆದರೆ, ಅದರ ಜೊತೆಯಲ್ಲೇ ಈವರೆಗೆ 137 ಉಕ್ರೇನಿಯನ್ನರು ಜೀವ ತೆತ್ತಿದ್ದಾರೆ. ಯುದ್ಧ ಮುಂದುವರಿದಂತೆಲ್ಲಾ ಸಾವಿನ ಸಂಖ್ಯೆಯೂ ಹೆಚ್ಚಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?