ತ್ಯಾಜ್ಯ ನಿರ್ವಹಣೆ: ದ.ಕ. ಮತ್ತೂಂದು ಮಹತ್ವದ ಹೆಜ್ಜೆ
ತೆಂಕ ಎಡಪದವಿನಲ್ಲಿ ರಾಜ್ಯದ 2ನೇ ಎಂಆರ್ಎಫ್ ಘಟಕ
Team Udayavani, Jan 7, 2022, 5:10 AM IST
ಮಹಾನಗರ: ತ್ಯಾಜ್ಯ ನಿರ್ವಹಣೆ ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತೂಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು ರಾಜ್ಯದ 2ನೇ ಎಂಆರ್ಎಫ್ (ಮೆಟೀರಿಯಲ್ ರಿಕವರಿ ಫೆಸಿಲಿಟಿ- ಸಮಗ್ರ ಘನತ್ಯಾಜ್ಯ ನಿರ್ವಹಣೆ)ಘಟಕ ಶೀಘ್ರ ಮಂಗಳೂರು ತಾಲೂಕಿನ ತೆಂಕ ಎಡಪದವಿನಲ್ಲಿ ಕಾರ್ಯಾರಂಭಗೊಳ್ಳಲಿದೆ.
ಯೋಜನೆ ಮಂಜೂರಾಗಿದ್ದರೂ ಸ್ಥಳದ ಅಲಭ್ಯತೆಯಿಂದಾಗಿ ಘಟಕ ನಿರ್ಮಾಣಕ್ಕೆ ಹಿನ್ನಡೆಯಾಗಿತ್ತು. ಇದೀಗ ತೆಂಕ ಎಡಪದವು ಗ್ರಾಮದಲ್ಲಿ ನಿರ್ಮಾಣ ಆರಂಭಿಸಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆಯಲ್ಲಿ ರಾಜ್ಯದ ಮೊದಲ ಎಂಆರ್ಎಫ್ ಘಟಕ ಆರಂಭಗೊಂಡ ಬಳಿಕ ದ.ಕ.ದಲ್ಲಿ ನಿರ್ಮಾಣಗೊಳ್ಳುತ್ತಿದೆ. ಒಣ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಮರು ಉತ್ಪಾದನೆಗೆ ಯೋಗ್ಯವಾಗಿಸುವ ಕೇಂದ್ರ ಇದಾಗಿದೆ. ಗ್ರಾಮೀಣ ಭಾಗದ ಒಣಕಸ ನಿರ್ವಹಣೆ ಇದರಿಂದಾಗಿ ಸುಲಭ, ವ್ಯವಸ್ಥಿತವಾಗಲಿದೆ.
10 ಮೆಟ್ರಿಕ್ ಟನ್ ಸಾಮರ್ಥ್ಯ
ಎಲ್ಲ ರೀತಿಯ ಒಣಕಸಗಳನ್ನು ಸಂಗ್ರ ಹಿಸಿ ವೈಜ್ಞಾನಿಕವಾಗಿ ವರ್ಗೀಕರಿಸಿ ಬೈಲಿಂಗ್ ಮೆಷಿನ್, ಶ್ರೆಡ್ಡರ್ ಮೆಷಿನ್ ಮೊದಲಾದವು ಗಳ ಮೂಲಕ ಸಂಸ್ಕರಿಸಿ ಮರು ಉತ್ಪಾದನೆಗೆ ಸಿದ್ಧಗೊಳಿಸಿ ಮಾರಾಟ ಮಾಡಲಾಗುತ್ತದೆ.
ನಿರ್ಮಾಣ ಆರಂಭ
ಸ್ವತ್ಛ ಭಾರತ್ ಮಿಷನ್ನಡಿ (ಗ್ರಾಮೀಣ) ತೆಂಕ ಎಡಪದವು ಗ್ರಾಮದಲ್ಲಿ ಎಂಆರ್ಎಫ್ ಘಟಕ ನಿರ್ಮಾಣ ಆರಂಭಿಸಲಾಗಿದೆ. ಇದರಲ್ಲಿ ಒಣತ್ಯಾಜ್ಯ ನಿರ್ವಹಣೆ ಹೆಚ್ಚು ವೈಜ್ಞಾನಿಕವಾಗಿ ನಡೆಯಲಿದೆ. 2.50 ಕೋ.ರೂ. ಮಂಜೂರಾಗಿದ್ದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅನುಷ್ಠಾನಗೊಳಿಸುತ್ತಿದೆ.
-ಡಾ| ಕುಮಾರ್, ಸಿಇಒ, ದ.ಕ. ಜಿ.ಪಂ.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ