ಲಕ್ನೋ ವಿರುದ್ಧದ ಸೋಲಿಗೆ ರನ್ ಕೊರತೆ ಕಾಡಿತು: ರಿಷಭ್ ಪಂತ್
Team Udayavani, Apr 9, 2022, 4:45 AM IST
ಮುಂಬಯಿ: ಲಕ್ನೋ ವಿರುದ್ಧದ ಸೋಲಿಗೆ ರನ್ ಕೊರತೆಯೇ ಕಾರಣ ಎಂಬುದಾಗಿ ಡೆಲ್ಲಿ ನಾಯಕ ರಿಷಭ್ ಪಂತ್ ಹೇಳಿದ್ದಾರೆ.
“ನಮ್ಮ ಪವರ್ ಪ್ಲೇ ಬ್ಯಾಟಿಂಗ್ ಅಮೋಘವಾಗಿಯೇ ಇತ್ತು. ಆದರೆ ಮಿಡ್ಲ್ ಓವರ್ಗಳಲ್ಲಿ ಪಂದ್ಯ ತಿರುವು ಪಡೆಯಿತು. ಅವರ ಸ್ಪಿನ್ನರ್ ಉತ್ತಮ ನಿಯಂತ್ರಣ ಸಾಧಿಸಿದರು. ನಾವು 10ರಿಂದ 15ರಷ್ಟು ರನ್ ಕೊರತೆ ಅನುಭವಿಸಿದೆವು. ದಟ್ಟ ಮಂಜು ಕೂಡ ಪಂದ್ಯದ ಗತಿಯನ್ನು ಬದಲಿಸಿತು’ ಎಂಬುದಾಗಿ ಪಂತ್ ಹೇಳಿದರು.
ಇದನ್ನೂ ಓದಿ:ಐಪಿಎಲ್: ಶುಭಮನ್ ಗಿಲ್ ಶತಕ ವಂಚಿತ; ಕೊನೆಯ ಎಸೆತದಲ್ಲಿ ಗೆದ್ದ ಗುಜರಾತ್ ಟೈಟಾನ್ಸ್
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಡೆಲ್ಲಿಗೆ ಪೃಥ್ವಿ ಶಾ ಅಬ್ಬರದ ಆರಂಭವನ್ನೇ ಒದಗಿಸಿದ್ದರು. ಆದರೆ 10ನೇ ವರ್ ಬಳಿಕ ಜತೆಗೂಡಿದ ರಿಷಭ್ ಪಂತ್ ಮತ್ತು ಸರ್ಫರಾಜ್ ಖಾನ್ ಬಿರುಸಿನ ಬ್ಯಾಟಿಂಗ್ ನಡೆಸುವಲ್ಲಿ ಸಂಪೂರ್ಣ ವಿಫಲರಾದರು. ಅಂತಿಮವಾಗಿ ಡೆಲ್ಲಿ ಗಳಿಸಿದ್ದು 3ಕ್ಕೆ 149 ರನ್ ಮಾತ್ರ.