ದೇಗುಲದ ಅನ್ನದಾನ ನಿಧಿಗೆ ಲಕ್ಷ ರೂ. ದೇಣಿಗೆ ನೀಡಿದ ಅಶ್ವತ್ಥಮ್ಮ
ಸಾಲಿಗ್ರಾಮದ ಸಮಾಜಸೇವಕಿ ಭಿಕ್ಷುಕಿ
Team Udayavani, Feb 5, 2021, 6:50 AM IST
ಕೋಟ: ಎಂಬತ್ತು ವರ್ಷದ ವೃದ್ಧೆ ಅಶ್ವತ್ಥಮ್ಮ ಭಿಕ್ಷೆಯಾಗಿ ಸಿಕ್ಕಿದ ಹಣದಲ್ಲಿ ಉಳಿಸಿದ 1 ಲಕ್ಷ ರೂ.ಗಳನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅನ್ನದಾನ ನಿಧಿಗೆ ದೇಣಿಗೆ ನೀಡಿದ್ದಾರೆ.
ಅಶ್ವತ್ಥಮ್ಮನಿಗೆ 3 ದಶಕಗಳಿಂದ ಭಿಕ್ಷಾಟನೆಯೇ ಜೀವನೋಪಾಯ. ಭಿಕ್ಷೆಯಲ್ಲಿ ದೈನಿಕ ಅಗತ್ಯಗಳನ್ನು ಪೂರೈಸಿ ಉಳಿದುದನ್ನು ಕೂಡಿಡುತ್ತಾರೆ. ಈ ಉಳಿತಾಯವನ್ನು ಸಮಾಜ ಸೇವೆ, ದೇವತಾ ಕಾರ್ಯಗಳಿಗೆ ಬಳಸುವುದು ಹಲವು ವರ್ಷಗಳಿಂದ ನಡೆದುಬಂದಿದೆ. ಈ ಬಾರಿ ಫೆ. 4ರಂದು ಅವರ ಸೇವೆ ಸಾಲಿಗ್ರಾಮ ದೇಗುಲಕ್ಕೆ ಸಂದಿದೆ. ಇದುವರೆಗೆ ಲಕ್ಷಾಂತರ ರೂ. ಹಣವನ್ನು ತಾನು ಬೇರೆ ಬೇರೆ ಕ್ಷೇತ್ರಗಳಿಗೆ ದೇಣಿಗೆ ನೀಡಿದ್ದೇನೆ ಎನ್ನುತ್ತಾರೆ ಅಶ್ವತ್ಥಮ್ಮ.
ನಾಟಕ ಕಲಾವಿದೆ
ಅಶ್ವತ್ಥಮ್ಮನ ತಂದೆ ಆಂಧ್ರದವರು, ತಾಯಿ ಮೈಸೂರಿನವರು. ನಾಟಕ ಕಂಪೆನಿ ಮುಖ್ಯಸ್ಥರನ್ನು ಮದುವೆಯಾಗಿದ್ದರು. ನಾಟಕಗಳಲ್ಲಿ ನಟಿಸುತ್ತಿದ್ದರು. 30 ವರ್ಷಗಳ ಹಿಂದೆ ಪತಿ ತೀರಿದ ಬಳಿಕ ಕುಂದಾಪುರದಲ್ಲಿ ನೆಲೆಸಿದರು. ವಯಸ್ಸಾದ ಕಾರಣ ಭಿಕ್ಷಾಟನೆಗಿಳಿದರು. ಇವರ ಮನೆ ಗಂಗೊಳ್ಳಿ ಸಮೀಪದ ಕಂಚುಗೋಡಿನಲ್ಲಿದೆ. 10 ವರ್ಷಗಳಿಂದ ಸಾಲಿಗ್ರಾಮ ದೇಗುಲ, ಅಕ್ಕಪಕ್ಕದ ಮನೆ ಜಗುಲಿಯಲ್ಲಿ ರಾತ್ರಿ ಕಳೆಯುತ್ತಾರೆ. ಹಲವು ವರ್ಷಗಳಿಂದ ಶಬರಿಮಲೆ ಯಾತ್ರೆ ಹೋಗುತ್ತಿದ್ದು, ಯಾತ್ರೆಯ ಅನ್ನದಾನಕ್ಕೂ ದೇಣಿಗೆ ನೀಡುತ್ತಿದ್ದಾರೆ.
ಮೂಗಿನ ಮೇಲೆ ಬೆರಳು
ಅಜ್ಜಿ ಭಿಕ್ಷೆ ಬೇಡುವಾಗ ಮೂಗು ಮುರಿದವರು ಹಲವರು. ಈಗ 1 ಲಕ್ಷ ರೂ ನೀಡಿದ ವಿಚಾರ ವೈರಲ್ ಆಗಿದೆ, ಮೂಗು ಮುರಿದವರ ಬೆರಳು ಮೂಗಿನ ಮೇಲೇರಿದೆ.
ಈ ಬಾರಿ ಕೊರೊನಾ ದೂರವಾಗಲಿ, ದೇಶಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಸಾಲಿಗ್ರಾಮ ದೇವಸ್ಥಾನದ ಅನ್ನಧಾನ ನಿಧಿಗೆ ಒಂದು ಲಕ್ಷ ರೂ ನೀಡಿದ್ದೇನೆ.
– ಅಶ್ವಥಮ್ಮ, ಭಿಕ್ಷುಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ