ಅಸ್ಸಾಂ: ಪೊಲೀಸರ ಗುಂಡಿಗೆ ಗೋ ಕಳ್ಳ ಸಾಗಾಣಿಕೆದಾರ ಬಲಿ
ಹಿಮಂತ ಬಿಸ್ವಾ ಅಧಿಕಾರದಲ್ಲಿ 150 ಕ್ಕೂ ಹೆಚ್ಚು ಜನರ ಮೇಲೆ ಗುಂಡು !
Team Udayavani, Apr 10, 2022, 4:06 PM IST
ಧುಬ್ರಿ : ಇಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಶಂಕಿತ ಜಾನುವಾರು ಕಳ್ಳಸಾಗಾಣಿಕೆದಾರ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸುಳಿವಿನ ಮೇರೆಗೆ ಪೊಲೀಸರು ಶನಿವಾರ ರಾತ್ರಿ ಸಪಟಗ್ರಾಮ್ ಪ್ರದೇಶದಲ್ಲಿ ವಾಹನವನ್ನು ಅಡ್ಡಗಟ್ಟಲು ಪ್ರಯತ್ನಿಸಿದರು, ಆದರೆ ಅದು ವೇಗವಾಗಿ ಚಲಿಸಿತು. ನಮ್ಮ ತಂಡವು ಅದನ್ನು ಬೆನ್ನಟ್ಟಲು ಪ್ರಾರಂಭಿಸಿತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಕಾರಿನಲ್ಲಿದ್ದವರು ಪೊಲೀಸ್ ವಾಹನದತ್ತ ಗುಂಡು ಹಾರಿಸಿದ್ದು, ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಯಿತು ಎಂದು ಅವರು ಹೇಳಿದರು.
“ವಾಹನದಲ್ಲಿ ಮೂರು ಜನರಿದ್ದರು. ಅವರಲ್ಲಿ ಒಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದರು, ಇನ್ನೊಬ್ಬ ಈಗ ಚಿಕಿತ್ಸೆ ಪಡೆಯುತ್ತಿದ್ದಾನೆ, ಒಬ್ಬ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ” ಎಂದು ಅವರು ಹೇಳಿದರು.
ಇದನ್ನೂ ಓದಿ : ಸಿನಿಮೀಯ ರೀತಿಯಲ್ಲಿ 22 ಕಿ.ಮೀ ಬೆನ್ನಟ್ಟಿ ಗೋಕಳ್ಳರ ಬಂಧನ!
ಮತ್ತೊಂದು ಘಟನೆಯಲ್ಲಿ, ನಾಗಾಂವ್ ಜಿಲ್ಲೆಯ ಡೊಬೋಕಾದಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಶಂಕಿತ ಡಕಾಯಿತ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಂಕಿತನನ್ನು ಶನಿವಾರ ಬಂಧಿಸಲಾಯಿತು, ನಂತರ ರಾತ್ರಿಯಲ್ಲಿ ಗುಪ್ತ ಶಸ್ತ್ರಾಸ್ತ್ರಗಳನ್ನು ಮರುಪಡೆಯಲು ಕರೆದೊಯ್ಯಲಾಯಿತು. ಕಾನ್ಸ್ಟೆಬಲ್ರನ್ನು ದೂರ ತಳ್ಳಿ ಓಡಲು ಪ್ರಯತ್ನಿಸಿದನು. ಅವನು ತಪ್ಪಿಸಿಕೊಳ್ಳದಂತೆ ನಾವು ಗುಂಡು ಹಾರಿಸಬೇಕಾಯಿತು. ಅವನ ಬಲ ಕಾಲಿಗೆ ಗಾಯವಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮೇ 2021 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಒಟ್ಟು 43 ಜನರು ಪೊಲೀಸ್ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 107 ಮಂದಿ ಗಾಯಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ
UNICEF ಇಂಡಿಯಾಗೆ ಕರೀನಾ ಕಪೂರ್ ರಾಯಭಾರಿ
Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ