ತಿರುಪತಿ, ಚಾರ್ಧಾಮ್ಗೆ ಹೋಗಿ
8ರಿಂದ ತೆರೆಯಲಿವೆ ಕ್ಷೇತ್ರಗಳು; ಸರಕಾರಗಳ ಅನುಮತಿ
Team Udayavani, Jun 3, 2020, 6:40 AM IST
ತಿರುಪತಿ/ಡೆಹ್ರಾಡೂನ್: ದೇಶಾದ್ಯಂತ ಜೂ.8ರಿಂದ ಲಾಕ್ಡೌನ್ ನಿಯಮಗಳು ಸರಳೀಕೃತ ಗೊಂಡು ಹೊಸ ನಿಯಮ ಗಳು ಜಾರಿಯಾಗಲಿವೆ. ಅದಕ್ಕೆ ಪೂರಕವಾಗಿಯೇ ಮುಂದಿನ ಸೋಮವಾರ ತಿರುಪತಿ ದೇಗುಲ ಮತ್ತೆ ಭಕ್ತರಿಗಾಗಿ ತೆರೆಯಲಿದೆ ಮತ್ತು ಚಾರ್ಧಾಮ್ ಯಾತ್ರೆ ಕೂಡ ಸೀಮಿತ ರೀತಿಯಲ್ಲಿ ಆರಂಭವಾಗಲಿದೆ..
ಕೇಂದ್ರ ಸರಕಾರದ ನಿಯಮ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಜೂ.8ರಿಂದ ತಿರುಪತಿಯ ವೆಂಕಟೇಶ್ವರನ ದೇವಾಲಯದ ಬಾಗಿಲು ತೆರೆದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಟಿಟಿಡಿಗೆ ಆಂಧ್ರಪ್ರದೇಶ ಸರಕಾರ ಅನುಮತಿ ನೀಡಿದೆ.
ದರ್ಶನದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಭಕ್ತರ ಸಾಲಿನ ವ್ಯವಸ್ಥೆಯಲ್ಲಿ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಜತೆಗೆ, ಒಂದು ದಿನದಲ್ಲಿ ದರ್ಶನ ಪಡೆಯುವ ಭಕ್ತರ ಸಂಖ್ಯೆಯನ್ನು ಮಿತಿಗೊಳಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೂ.5ರಿಂದ ಪ್ರಯೋಗಾತ್ಮಕವಾಗಿ ಸ್ಥಳೀಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ವೇಳೆ, ಭಕ್ತರು ಮತ್ತು ಟಿಟಿಡಿ ಅಧಿಕಾರಿಗಳಿಗೆ ಕೋವಿಡ್-19 ಮಾರ್ಗಸೂಚಿ ಅನುಸರಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುವುದು.
ಸೀಮಿತ ಅವಕಾಶ: ಚಾರ್ಧಾಮ್ ಯಾತ್ರೆ ಕೂಡ ಜೂ.8ರಿಂದ ಆರಂಭಗೊಳ್ಳಲಿದ್ದು, ಸೀಮಿತ ಭಕ್ತಾದಿಗಳಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಉತ್ತರಾಖಂಡ ಸರಕಾರ ತಿಳಿಸಿದೆ.
“ಸೀಮಿತ ಭಕ್ತರಿಗೆ ಅವಕಾಶ ಕಲ್ಪಿಸುವ ಕುರಿತು ಆಯಾ ರಾಜ್ಯಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಅದರ ಅನಂತರವಷ್ಟೇ ಅಲ್ಲಿನ ಭಕ್ತರಿಗೆ ಅವಕಾಶ ನೀಡುತ್ತೇವೆ. ಆಯಾ ರಾಜ್ಯಗಳು ಭಕ್ತಾದಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದರಷ್ಟೇ ಉತ್ತರಖಂಡಕ್ಕೆ ಪ್ರವೇಶ ಸಿಗುತ್ತದೆ’ ಎಂದು ಸಚಿವ ಮದನ್ ಕೌಶಿಕ್ ಸ್ಪಷ್ಟಪಡಿಸಿದ್ದಾರೆ.
ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ದೇಗುಲಗಳನ್ನು ಒಂದೂವರೆ ತಿಂಗಳ ಹಿಂದೆಯೇ ತೆರೆಯ ಲಾಗಿದೆ. ಆದರೆ, ಕೋವಿಡ್-19 ಹಬ್ಬುವ ಭೀತಿಯಿಂದಾಗಿ ಭಕ್ತಾದಿಗಳ ಯಾತ್ರೆಗೆ ಅವಕಾಶ ಲಭ್ಯವಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?