ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ
Team Udayavani, May 3, 2022, 11:50 PM IST
ಉಡುಪಿ: ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಯೋರ್ವರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಖಾಸಗಿ ಕಂಪೆನಿ ಯಲ್ಲಿ ಕಲೆಕ್ಷನ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿ ಕೊಂಡಿರುವ ಶಾಲಿನಿ ಅವರಿಗೆ ಅದೇ ಕಂಪೆನಿಯಲ್ಲಿ ಕಲೆಕ್ಷನ್ ಎಕ್ಸಿಕ್ಯೂಟಿವ್ ಕೆಲಸದಲ್ಲಿದ್ದ ಕೋಲಾರ ಜಿಲ್ಲೆಯ ಮಾಲೂರಿನ ನಿವಾಸಿ ನಿತಿನ್ ಕುಮಾರ್ ಎಂಬಾತನ ಪರಿಚಯವಾಗಿತ್ತು. ಆತ ಶಾಲಿನಿಯವರನ್ನು ನಂಬಿಸಿ ದುಬಾೖ ಕಂಪೆನಿಯಲ್ಲಿ ಹಾಗೂ ಅನಂತರದ ದಿನದಲ್ಲಿ ಅಮೆರಿಕದ ಮನಿಮೇಕರ್ ಟೆಕ್ಸ್ಝೊನ್ ಪ್ರೈ.ಲಿ.ನಲ್ಲಿ ಫ್ಲೋರ್ ಮ್ಯಾನೇಜರ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ. ಬಳಿಕ ಶಾಲಿನಿಯವರ ಹೆಸರಿನಲ್ಲಿರುವ ಕುಂದಾಪುರ ಶಾಖೆಯ ಯೂನಿಯನ್ ಬ್ಯಾಂಕ್ ಖಾತೆಯಿಂದ 22,63,999 ರೂ., ಕೋರಮಂಗಲ ಶಾಖೆಯ ಎಚ್. ಡಿ.ಎಫ್.ಸಿ. ಬ್ಯಾಂಕ್ನ ಎಸ್.ಬಿ. ಖಾತೆಯಿಂದ 5,85,500 ರೂ. ಹಾಗೂ ಶಾಲಿನಿಯವರ ತಂದೆ ಕೆ. ನರಸಿಂಹ ಪೂಜಾರಿಯವರ ಕುಂದಾಪುರ ಶಾಖೆಯ ಎಸ್. ಬಿ.ಐ. ಬ್ಯಾಂಕ್ ಖಾತೆಯಿಂದ 5,16,302 ರೂ.ನಂತೆ ಒಟ್ಟು 33,65,801ರೂ. ನಗದು ಹಣವನ್ನು ಆರೋಪಿ ನಿತೀನ್ ಕುಮಾರ್ನ ಕೋರಮಂಗಲ ಶಾಖೆಯ ಎಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಗೆ ಮೊಬೈಲ್ ಫೋನ್ಪೇ ಆ್ಯಪ್ ಮತ್ತು ನೆಫ್ಟ್ ಮೂಲಕ ಹಾಕಿಸಿಕೊಂಡಿದ್ದಾನೆ.
ಶಾಲಿನಿಯವರಿಗೆ ಕೆಲಸ ಕೊಡಿಸದೆ, ಹಣವನ್ನೂವಾಪಸು ನೀಡದೆ ಆರೋಪಿ ನಿತೀನ್ ಕುಮಾರ್ ನಂಬಿಕೆ ದ್ರೋಹ, ವಂಚನೆ ಹಾಗೂ ಮೋಸ ಎಸಗಿದ್ದಾನೆಂದು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ