ಮಿಶ್ರಾ ಸ್ಪಿನ್‌ ದಾಳಿಗೆ ಮಗುಚಿದ ಮುಂಬೈ : ಡೆಲ್ಲಿಗೆ 6 ವಿಕೆಟ್‌ಗಳ ಗೆಲುವು


Team Udayavani, Apr 20, 2021, 11:50 PM IST

ಮಿಶ್ರಾ ಸ್ಪಿನ್‌ ದಾಳಿಗೆ ಮಗುಚಿದ ಮುಂಬೈ : ಡೆಲ್ಲಿಗೆ 6 ವಿಕೆಟ್‌ಗಳ ಗೆಲುವು

ಚೆನ್ನೈ: ಮೊದಲ ಸಲ ಚೆನ್ನೈಯಲ್ಲಿ ಆಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಹರಿತವಾದ ಬೌಲಿಂಗ್‌ ದಾಳಿಗೆ ಪರದಾಡಿದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮಂಗಳವಾರದ ಐಪಿಎಲ್‌ ಮುಖಾಮುಖೀಯಲ್ಲಿ 6 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ.

ಡೆಲ್ಲಿ ಈ ಕೂಟದಲ್ಲಿ 3 ಪಂದ್ಯಗಳನ್ನು ಗೆದ್ದ ಎರಡನೇ ತಂಡವಾಗಿದ್ದು, ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ನೆಗೆದಿದೆ.
ಮುಂಬೈ 9 ವಿಕೆಟಿಗೆ ಕೇವಲ 137 ರನ್‌ ಮಾಡಿದರೆ, ಡೆಲ್ಲಿ ನಿಧಾನ ಗತಿಯಲ್ಲೇ ಚೇಸ್‌ ಮಾಡಿ 19.1 ಓವರ್‌ಗಳಲ್ಲಿ 4 ವಿಕೆಟಿಗೆ 138 ರನ್‌ ಬಾರಿಸಿತು. ಪೊಲಾರ್ಡ್‌ ನೋ ಬಾಲ್‌ ಎಸೆದು ಡೆಲ್ಲಿ ಜಯವನ್ನು ಸಾರಿದರು! ಮುಂಬೈ 4 ಪಂದ್ಯಗಳಲ್ಲಿ ಎರಡನೇ ಸೋಲನುಭವಿಸಿತು.

ಚೇಸಿಂಗ್‌ ವೇಳೆ ಡೆಲ್ಲಿ ಆರಂಭಕಾರ ಶಿಖರ್‌ ಧವನ್‌ ಸರ್ವಾಧಿಕ 45, ಸ್ಟೀವನ್‌ ಸ್ಮಿತ್‌ 33, ಲಲಿತ್‌ ಯಾದವ್‌ ಔಟಾಗದೆ 22 ರನ್‌ ಹೊಡೆದರು. ಪಂದ್ಯದಲ್ಲಿ ಒಂದೂ ಅರ್ಧ ಶತಕ ದಾಖಲಾಗಲಿಲ್ಲ.

ಮಿಶ್ರಾ ಸ್ಪಿನ್‌ ಮೋಡಿ

ಮುಂಬೈ ಬ್ಯಾಟಿಂಗ್‌ ಸರದಿಗೆ ಎದ್ದೇಳಲಾಗದ ಹೊಡೆತವಿಕ್ಕಿದವರು ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ. ಇವರ ಸಾಧನೆ 24ಕ್ಕೆ 4 ವಿಕೆಟ್‌. ಇದು ಮುಂಬೈ ವಿರುದ್ಧ ಡೆಲ್ಲಿ ಬೌಲರ್‌ ಓರ್ವನ ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ. ಅವರು ರೋಹಿತ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ ಮತ್ತು ಪೊಲಾರ್ಡ್‌ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು.

ಮುಂಬೈ ತಂಡದ ಬಿಗ್‌ ಹಿಟ್ಟರ್‌ಗಳೆಲ್ಲರ ಬ್ಯಾಟ್‌ ಇಲ್ಲಿ ಮುಷ್ಕರ ಹೂಡಿದಂತಿತ್ತು. ಎಲ್ಲರೂ ಪಟಪಟನೆ ವಿಕೆಟ್‌ ಒಪ್ಪಿಸುತ್ತ ಹೋದರು. ಕ್ವಿಂಟನ್‌ ಡಿ ಕಾಕ್‌ (1), ಹಾರ್ದಿಕ್‌ ಪಾಂಡ್ಯ (0), ಕೃಣಾಲ್‌ ಪಾಂಡ್ಯ (1), ಕೈರನ್‌ ಪೊಲಾರ್ಡ್‌ (2) ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಇವರ್ಯಾರೂ ಎರಡಂಕೆಯ ಗಡಿ ಮುಟ್ಟಲಿಲ್ಲ. ಡೆಲ್ಲಿ ದಾಳಿಯನ್ನು ಎದುರಿಸಿ ನಿಂತ ಅಗ್ರ ಕ್ರಮಾಂಕದ ಆಟಗಾರರೆಂದರೆ ನಾಯಕ ರೋಹಿತ್‌ ಶರ್ಮ (44) ಮತ್ತು ಸೂರ್ಯಕುಮಾರ್‌ ಯಾದವ್‌ (24) ಮಾತ್ರ. ರೋಹಿತ್‌ 30 ಎಸೆತ ಎದುರಿಸಿ 3 ಸಿಕ್ಸರ್‌, 3 ಫೋರ್‌ ಬಾರಿಸಿದರು. ಉಳಿದೊಂದು ಸಿಕ್ಸರ್‌ ಇಶಾನ್‌ ಕಿಶನ್‌ ಬ್ಯಾಟಿನಿಂದ ಸಿಡಿಯಿತು. ಸೂರ್ಯಕುಮಾರ್‌ 24 ರನ್ನಿಗೆ 15 ಎಸೆತ ತೆಗೆದುಕೊಂಡರು (4 ಬೌಂಡರಿ).

6 ವಿಕೆಟ್‌ ಪತನದ ಬಳಿಕ ಕ್ರೀಸಿನಲ್ಲಿದ್ದ ಇಶಾನ್‌ ಕಿಶನ್‌ ಮುಂಬೈ ಪಾಲಿನ ಕೊನೆಯ ಆಶಾಕಿರಣವಾಗಿದ್ದರು. ಆದರೆ ಇವರ ಆಟ 26 ರನ್ನಿಗೆ ಕೊನೆಗೊಂಡಿತು. ಈ ವಿಕೆಟ್‌ ಕೂಡ ಮಿಶ್ರಾ ಹಾರಿಸಿದರು.

3ನೇ ಓವರ್‌ನಲ್ಲಿ ಡಿ ಕಾಕ್‌ ವಿಕೆಟ್‌ ಕಿತ್ತ ಸ್ಟೋಯಿನಿಸ್‌ ಡೆಲ್ಲಿಗೆ ಮೊದಲ ಯಶಸ್ಸು ತಂದಿತ್ತರು. ಆಗ ಮುಂಬೈ ಕೇವಲ 9 ರನ್‌ ಮಾಡಿತ್ತು. ಆದರೆ ದ್ವಿತೀಯ ವಿಕೆಟಿಗೆ ಜತೆಗೂಡಿದ ರೋಹಿತ್‌-ಸೂರ್ಯಕುಮಾರ್‌ ಉತ್ತಮ ಹೋರಾಟವೊಂದನ್ನು ಸಂಘಟಿಸಿದರು. ಮೊತ್ತವನ್ನು 67ಕ್ಕೆ ಏರಿಸಿದರು. ಆಗ ಆವೇಶ್‌ ಖಾನ್‌ ಡೆಲ್ಲಿಗೆ ದೊಡ್ಡದೊಂದು ಬ್ರೇಕ್‌ ಒದಗಿಸಿದರು.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಸ್ಮಿತ್‌ ಬಿ ಮಿಶ್ರಾ 44
ಕ್ವಿಂಟನ್‌ ಡಿ ಕಾಕ್‌ ಸಿ ಪಂತ್‌ ಬಿ ಸ್ಟೋಯಿನಿಸ್‌ 1
ಸೂರ್ಯಕುಮಾರ್‌ ಸಿ ಪಂತ್‌ ಬಿ ಅವೇಶ್‌ 24
ಇಶಾನ್‌ ಕಿಶನ್‌ ಬಿ ಮಿಶ್ರಾ 26
ಹಾರ್ದಿಕ್‌ ಪಾಂಡ್ಯ ಸಿ ಸ್ಮಿತ್‌ ಬಿ ಮಿಶ್ರಾ 0
ಕೃಣಾಲ್‌ ಪಾಂಡ್ಯ ಬಿ ಲಲಿತ್‌ 1
ಕೈರನ್‌ ಪೊಲಾರ್ಡ್‌ ಎಲ್‌ಬಿಡಬ್ಲ್ಯು ಬಿ ಮಿಶ್ರಾ 2
ಜಯಂತ್‌ ಸಿ ಮತ್ತು ಬಿ ರಬಾಡ 23
ರಾಹುಲ್‌ ಚಹರ್‌ ಸಿ ಪಂತ್‌ ಬಿ ಅವೇಶ್‌ 6
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 3
ಟ್ರೆಂಟ್‌ ಬೌಲ್ಟ್ ಔಟಾಗದೆ 1
ಇತರ 6
ಒಟ್ಟು (9 ವಿಕೆಟಿಗೆ) 137
ವಿಕೆಟ್‌ ಪತನ: 1-9, 2-67, 3-76, 4-77, 5-81, 6-84, 7-123, 8-129, 9-135.
ಬೌಲಿಂಗ್‌; ಮಾರ್ಕಸ್‌ ಸ್ಟೋಯಿನಿಸ್‌ 3-0-20-1
ಆರ್‌. ಅಶ್ವಿ‌ನ್‌ 4-0-30-0
ಕಾಗಿಸೊ ರಬಾಡ 3-0-25-1
ಅಮಿತ್‌ ಮಿಶ್ರಾ 4-0-24-4
ಅವೇಶ್‌ ಖಾನ್‌ 2-0-15-2
ಲಲಿತ್‌ ಯಾದವ್‌ 4-0-17-1

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಮತ್ತು ಬಿ ಜಯಂತ್‌ 7
ಶಿಖರ್‌ ಧವನ್‌ ಸಿ ಕೃಣಾಲ್‌ ಬಿ ಚಹರ್‌ 45
ಸ್ಟಿವನ್‌ ಸ್ಮಿತ್‌ ಎಲ್‌ಬಿಡಬ್ಲ್ಯು ಬಿ ಪೊಲಾರ್ಡ್‌ 33
ಲಲಿತ್‌ ಯಾದವ್‌ ಔಟಾಗದೆ 22
ರಿಷಭ್‌ ಪಂತ್‌ ಸಿ ಕೃಣಾಲ್‌ ಬಿ ಬುಮ್ರಾ 7
ಶಿಮ್ರನ್‌ ಹೆಟ್‌ಮೈರ್‌ ಔಟಾಗದೆ 14
ಇತರ 10
ಒಟ್ಟು (19.1 ಓವರ್‌ಗಳಲ್ಲಿ 4 ವಿಕೆಟಿಗೆ) 138
ವಿಕೆಟ್‌ ಪತನ:1-11, 2-64, 3-100, 4-115.
ಬೌಲಿಂಗ್‌;
ಟ್ರೆಂಟ್‌ ಬೌಲ್ಟ್ 4-0-23-0
ಜಯಂತ್‌ ಯಾದವ್‌ 4-0-25-1
ಜಸ್‌ಪ್ರೀತ್‌ ಬುಮ್ರಾ 4-0-32-1
ಕೃಣಾಲ್‌ ಪಾಂಡ್ಯ 2-0-17-0
ರಾಹುಲ್‌ ಚಹರ್‌ 4-0-29-1
ಕೈರನ್‌ ಪೊಲಾರ್ಡ್‌ 1.1-0-9-1

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.