IPL‌ ತಾಣ; ಫ್ರಾಂಚೈಸಿಗಳಿಗೆ ಅಸಮಾಧಾನ : ಮುಂಬಯಿ, ಬೆಂಗಳೂರು ಸೇರಿದಂತೆ 6 ತಾಣಗಳಲ್ಲಿ ಪಂದ್ಯ?


Team Udayavani, Mar 2, 2021, 2:30 AM IST

IPL‌ ತಾಣ; ಫ್ರಾಂಚೈಸಿಗಳಿಗೆ ಅಸಮಾಧಾನ : ಮುಂಬಯಿ, ಬೆಂಗಳೂರು ಸೇರಿದಂತೆ 6 ತಾಣಗಳಲ್ಲಿ ಪಂದ್ಯ?

ಹೊಸದಿಲ್ಲಿ: ಕೊರೊನಾ ಸಂಕಟ ಇನ್ನೂ ಹತೋಟಿಗೆ ಬಾರದ ಕಾರಣ ಈ ಸಲದ ಐಪಿಎಲ್‌ ಪಂದ್ಯಾವಳಿಯನ್ನು ದೇಶದ ಕೆಲವೇ ತಾಣಗಳಲ್ಲಿ ನಡೆಸುವುದು ಬಿಸಿಸಿಐ ಯೋಜನೆಯಾಗಿದೆ. ಆದರೆ ಇದಕ್ಕೆ ಕೆಲವು ಫ್ರಾಂಚೈಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಹಿಂದಿನಂತೆ “ಹೋಮ್‌ ಆ್ಯಂಡ್‌ ಎವೇ’ ಮಾದರಿಯಲ್ಲಿ ಐಪಿಎಲ್‌ ನಡೆಸಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿವೆ.

ಇತ್ತೀಚಿನ ಬೆಳವಣಿಗೆ ಪ್ರಕಾರ ಬಿಸಿಸಿಐ ಸದ್ಯ 6 ತಾಣಗಳಲ್ಲಿ ಐಪಿಎಲ್‌ ಪಂದ್ಯಗಳನ್ನು ನಡೆಸುವ ಯೋಜನೆಯಲ್ಲಿದೆ. ಇವುಗಳೆಂದರೆ ಮುಂಬಯಿ, ಚೆನ್ನೈ, ಹೊಸದಿಲ್ಲಿ, ಬೆಂಗಳೂರು, ಅಹ್ಮದಾಬಾದ್‌ ಮತ್ತು ಕೋಲ್ಕತಾ. ಇದಕ್ಕೂ ಮೊದಲು ಕೇವಲ 2 ಅಥವಾ 3 ಕೇಂದ್ರಗಳಲ್ಲಿ ಐಪಿಎಲ್‌ ನಡೆಸುವ ಯೋಜನೆಯೂ ಇತ್ತು. ಇದಕ್ಕಾಗಿ ಮುಂಬಯಿ, ಪುಣೆ ಮತ್ತು ಅಹ್ಮದಾಬಾದ್‌ ಆಯ್ಕೆಯಾಗಿದ್ದವು.

ತಪ್ಪಲಿದೆ ತವರು ಪಂದ್ಯ
ಆದರೀಗ ಬಿಸಿಸಿಐ ಯೋಜನೆ ಬದಲಾಗಿದೆ. ತಾಣಗಳನ್ನು ಮೂರರಿಂದ ಆರಕ್ಕೆ ಏರಿಸಲು ಬಿಸಿಸಿಐ ನಿರ್ಧರಿಸಿದೆ. ಆಗ ಕೆಲವು ಫ್ರಾಂಚೈಸಿಗಳಿಗೆ ತವರಿನಲ್ಲಿ ಪಂದ್ಯಗಳನ್ನಾಡಲು ಸಾಧ್ಯವಾಗದು. ಸನ್‌ರೈಸರ್ ಹೈದರಾಬಾದ್‌, ರಾಜ ಸ್ಥಾನ್‌ ರಾಯಲ್ಸ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳಿಗೆ ತವರಿನ ಪಂದ್ಯ ತಪ್ಪಲಿದೆ.

“ಐಪಿಎಲ್‌ ಪಂದ್ಯಗಳನ್ನು ಒಂದೆ ರಡು ಕೇಂದ್ರಗಳಿಗೆ ಸೀಮಿತಗೊಳಿಸು ವುದಕ್ಕಿಂತ ಐದಾರು ತಾಣಗಳಲ್ಲಿ ಆಯೋಜಿಸುವ ನಿರ್ಧಾರ ಸ್ವಾಗ ತಾರ್ಹ. ಆದರೂ ಇದರಿಂದ ಹೋಮ್‌ ಆ್ಯಂಡ್‌ ಎವೇ ಮಾದರಿ ಸಾಧ್ಯ ವಾಗದು. ಹಾಗೆಯೇ ಅಹ್ಮದಾಬಾದ್‌ನಲ್ಲಿ ಪಂದ್ಯ ನಡೆಯುವುದರಿಂದ ಯಾವ ಫ್ರಾಂಚೈಸಿಗೂ ಲಾಭವಿಲ್ಲ. ಎಲ್ಲರಿಗೂ ಇದೊಂದು ತಟಸ್ಥ ಕೇಂದ್ರವಾಗಿರುತ್ತದೆ. ಇದರ ಬದಲು ಹೈದರಾಬಾದ್‌, ಪಂಜಾಬ್‌ ಮತ್ತು ರಾಜಸ್ಥಾನ್‌ ತಂಡಗಳಿಗೂ ತವರು ಪಂದ್ಯ ಸಿಗುವ ರೀತಿಯಲ್ಲಿ ಹಿಂದಿ ನಂತೆಯೇ ಕೂಟವನ್ನು ನಡೆಸುವುದು ಸೂಕ್ತ’ ಎಂಬುದಾಗಿ ಫ್ರಾಂಚೈಸಿಯ ಮುಖ್ಯಸ್ಥ ರೊಬ್ಬರು ಹೇಳಿದ್ದಾರೆ.

ತವರು ಮತ್ತು ಹೊರಗಿನ ಪಂದ್ಯ ವೆಂದರೆ ಪ್ರಯಾಣ ಸಮಸ್ಯೆ ಎದು ರಾಗುವ ಸಾಧ್ಯತೆ ಇದೆ. ಅಲ್ಲದೇ ಎಲ್ಲ ಪಂದ್ಯಗಳನ್ನೂ ಜೈವಿಕ ಸುರಕ್ಷಾ ತಾಣಗಳಲ್ಲೇ ನಡೆಸಬೇಕಾಗುತ್ತದೆ. ಇದಕ್ಕಾಗಿ ಕೆಲವೇ ಕೇಂದ್ರಗಳನ್ನು ಬಳಸಿಕೊಂಡು ಐಪಿಎಲ್‌ ನಡೆಸು ವುದು ಬಿಸಿಸಿಐ ಲೆಕ್ಕಾಚಾರ.

ಈ ನಡುವೆ ಐಪಿಎಲ್‌ ಯಾವಾಗ ಆರಂಭವಾಗುತ್ತದೆ, ಪ್ರೇಕ್ಷಕರಿಗೆ ಅವಕಾಶವಿದೆಯೇ ಎಂಬುದು ಪ್ರಶ್ನೆ ಗಳಾಗಿಯೇ ಉಳಿದಿವೆ.

ಹೈದರಾಬಾದ್‌ಗೂ ಆತಿಥ್ಯ ನೀಡಿ
ಇದೇ ವೇಳೆ ಹೈದರಾಬಾದ್‌ಗೂ ಎಂದಿನಂತೆ ಐಪಿಎಲ್‌ ಆತಿಥ್ಯ ನೀಡುವಂತೆ “ತೆಲಂಗಾಣ ರಾಷ್ಟ್ರ ಸಮಿತಿ’ (ಟಿಆರ್‌ಎಸ್‌) ಬಿಸಿಸಿಐಗೆ ಮನವಿ ಸಲ್ಲಿಸಿದೆ. ಹಾಗೆಯೇ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಮುಂಬಯಿಯಲ್ಲಿ ಪಂದ್ಯಗಳನ್ನು ಆಡಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ. ಆಗ ಹೈದರಾಬಾದ್‌ ಸೇರಿದಂತೆ ಉಳಿದ ಕೇಂದ್ರಗಳಿಗೆ ಆತಿಥ್ಯ ಲಭಿಸಬಹುದು ಎಂಬ ಲೆಕ್ಕಾಚಾರವೂ ಇದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.