ಹಳೇ ವಿಶ್ವವಿದ್ಯಾನಿಲಯಗಳ ಸ್ಥಿತಿ ಮೊದಲು ಸುಧಾರಿಸಿ; ಹೊಸ ವಿ.ವಿ.ಗಳ ಸ್ಥಾಪನೆ ಮಸೂದೆಗೆ ವಿರೋಧ
Team Udayavani, Sep 22, 2022, 7:10 AM IST
ಬೆಂಗಳೂರು: ರಾಜ್ಯದಲ್ಲಿ ಹೊಸ ಎಂಟು ವಿ.ವಿ.ಗಳ ಸ್ಥಾಪನೆ ಸಂಬಂಧ ಮಂಡಿಸ ಲಾಗಿದ್ದ ಕರ್ನಾಟಕ ರಾಜ್ಯ ವಿಶ್ವವಿದ್ಯಾ ನಿಲಯಗಳ ತಿದ್ದುಪಡಿ ಮಸೂದೆಗೆ ವಿಧಾನ ಸಭೆ ಯಲ್ಲಿ ಪಕ್ಷಾ ತೀತವಾಗಿ ವಿರೋಧ ವಾಗಿದ್ದು, ಹಾಲಿ ವಿ.ವಿ.ಗಳ ಗುಣಮಟ್ಟ ಸುಧಾರಿಸುವಂತೆ ಆಗ್ರಹವೂ ವ್ಯಕ್ತವಾಗಿದೆ.
ಬೀದರ್, ಹಾವೇರಿ, ಕೊಡಗು, ಚಾಮರಾಜ ನಗರ, ಹಾಸನ, ಕೊಪ್ಪಳ, ಮಂಡ್ಯ, ಬಾಗಲ ಕೋಟೆಯಲ್ಲಿ ವಿಶ್ವವಿದ್ಯಾ ನಿಲಯ ಸ್ಥಾಪಿಸಲು ಈ ಮಸೂದೆ ಮಂಡಿಸ ಲಾಗಿದೆ. ಈ ಕುರಿತ ಚರ್ಚೆ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಹಿತ ಎಲ್ಲ ಸದಸ್ಯರು, ಹೊಸದಾಗಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಮುಂಚೆ ಈಗಿರುವ ವಿ.ವಿ.ಗಳಲ್ಲಿನ ಕೊರತೆ ನೀಗಿಸಲು, ಸಿಬಂದಿ ನೇಮಕ ಹಾಗೂ ಅವ್ಯವಹಾರ ನಿಯಂತ್ರಿಸುವಂತೆ ಒಕ್ಕೊರಲ ಒತ್ತಾಯ ಮಾಡಿದರು.
ವಿಶ್ವವಿದ್ಯಾನಿಲಯಗಳಲ್ಲಿ ಸಿಬಂದಿ ನೇಮಕ ಹಾಗೂ ನಿರ್ಮಾಣ ಕಾಮಗಾರಿ ಸಿಂಡಿಕೇಟ್ ವ್ಯಾಪ್ತಿಯಿಂದ ಹೊರಗೆ ಇಡಬೇಕು ಎಂಬ ಆಗ್ರಹವೂ ವ್ಯಕ್ತವಾಯಿತು.
ಅಂತಿಮವಾಗಿ ವಿಶ್ವವಿದ್ಯಾನಿಲಯಗಳ ಗುಣ ಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಅವರು ಮಸೂದೆಗೆ ಅನು ಮೋದನೆ ಪಡೆದು ಕೊಳ್ಳುವಲ್ಲಿ ಯಶಸ್ವಿಯಾದರು.
ಸದಸ್ಯರ ಸಲಹೆ ಮೇರೆಗೆ ವಿ.ವಿ. ಗಳಲ್ಲಿ ಸುಧಾ ರಣೆ ತರಲು ಪ್ರತ್ಯೇಕ ಮಸೂದೆ ತರ ಲಾಗು ವುದು ಎಂದು ಸಚಿವರು ತಿಳಿಸಿದರು. ಎರಡು ಕೋಟಿ ರೂ. ಮೊತ್ತದಲ್ಲಿ ಹಾಲಿ ಇರುವ ವ್ಯವಸ್ಥೆಯಲ್ಲಿ ಆರ್ಥಿಕ ಹೊರೆ ಇಲ್ಲದೆ ವಿಶ್ವ ವಿದ್ಯಾಲಯ ಸ್ಥಾಪಿಸಲಾಗುವುದು. ವಿ.ವಿ.ಗಳಲ್ಲಿ ಅಕ್ರಮ ನಡೆದರೆ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಅವಕಾಶ ಇದೆ ಎಂದು ತಿಳಿಸಿದರು.
ಚರ್ಚೆ ವೇಳೆ ಕೇಳಿಸಿದ್ದು
ವಿ.ವಿ.ಗಳ ಸ್ಥಿತಿ ಸುಧಾರಿಸಲು, ಗುಣ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು
– ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಕುಲಪತಿ ಹುದ್ದೆಗೆ 5-20 ಕೋ.ರೂ. ಡೀಲ್, ಅಯೋಗ್ಯರ ನೇಮಕವಾಗುತ್ತಿದೆ
– ಈಶ್ವರ್ ಖಂಡ್ರೆ, ಕಾಂಗ್ರೆಸ್
ವಿ.ವಿ.ಗಳಿಗೆ ನೇಮಕ ಹಾಗೂ ನಿರ್ಮಾಣದ ಹೊಣೆ ಸಿಂಡಿಕೇಟ್ಗೆ ಕೊಡ ಬಾರದು
– ಅರವಿಂದ ಬೆಲ್ಲದ, ಬಿಜೆಪಿ
ಮೊದಲು ವಿ.ವಿ.ಗಳ ಸ್ಥಿತಿ ಬದಲಾ ಯಿಸಿ, ಅನಂತರ ಹೊಸ ವಿ.ವಿ. ಬಗ್ಗೆ ಆಲೋಚಿಸಿ
– ಕೃಷ್ಣ ಬೈರೇಗೌಡ, ಕಾಂಗ್ರೆಸ್
ತಾಲೂಕಿಗೊಂದು ವಿ.ವಿ. ಮಾಡಿಬಿಡಿ
– ಎ.ಟಿ. ರಾಮಸ್ವಾಮಿ, ಜೆಡಿಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ