ಕರುಣರತ್ನೆ ಶತಕವೂ ಲಂಕನ್ನರನ್ನು ಕಾಪಾಡಲಿಲ್ಲ: ಸರಣಿ ವೈಟ್ ವಾಶ್ ಮಾಡಿದ ಭಾರತ
238 ರನ್ ಗಳ ಭರ್ಜರಿ ಗೆಲುವು ದಾಖಲಿಸಿದ ರೋಹಿತ್ ಪಡೆ
Team Udayavani, Mar 14, 2022, 6:08 PM IST
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಮತ್ತು ಅಂತಿಮ ಪಿಂಕ್ ಬಾಲ್ ಟೆಸ್ಟ್ನಲ್ಲಿ ಸೋಮವಾರ ಭಾರತ 238 ರನ್ಗಳಿಂದ ಪ್ರವಾಸಿ ಶ್ರೀಲಂಕಾವನ್ನು ಸೋಲಿಸಿ ಸರಣಿಯನ್ನು 2-0 ಅಂತರದಿಂದ ಗೆದ್ದು ಸಂಭ್ರಮಿಸಿದೆ.
ಒಂದು ವಿಕೆಟ್ ನಷ್ಟಕ್ಕೆ 28 ರನ್ಗಳಿಂದ ಮೂರನೇ ದಿನವನ್ನು ಪುನರಾರಂಭಿಸಿದ ಶ್ರೀಲಂಕಾ, ನಾಯಕ ದಿಮುತ್ ಕರುಣಾರತ್ನೆ 107 ರನ್ ಗಳಿಸಿದ ನಂತರ 208 ರನ್ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿತು.
ಭಾರತದ ಪರ ವೇಗಿ ಜಸ್ಪ್ರೀತ್ ಬುಮ್ರಾ (3/23) ಮತ್ತು ಸ್ಪಿನ್ನರ್ ಆರ್ ಅಶ್ವಿನ್ (4/55) ಏಳು ವಿಕೆಟ್ಗಳನ್ನು ಹಂಚಿಕೊಂಡರು. 447 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಚಹಾ ವಿರಾಮದ ವೇಳೆಗೆ 4 ವಿಕೆಟ್ಗೆ 151 ರನ್ ಗಳಿಸಿತ್ತು. ಕರುಣರತ್ನೆ ಮತ್ತು ಕುಸಾಲ್ ಮೆಂಡಿಸ್ (54) ಎರಡನೇ ವಿಕೆಟ್ಗೆ 97 ರನ್ಗಳ ಜೊತೆಯಾಟ ನೀಡಿದರು.
ಸಂಕ್ಷಿಪ್ತ ಸ್ಕೋರ್ಗಳು:
ಭಾರತ: 252 ಮತ್ತು 9 ವಿಕೆಟ್ಗೆ 303 ಡಿಕ್ಲೇರ್ಡ್.
ಶ್ರೀಲಂಕಾ: 59.3 ಓವರ್ಗಳಲ್ಲಿ 109 ಮತ್ತು 208 (ದಿಮುತ್ ಕರುಣರತ್ನೆ 107, ಕುಸಲ್ ಮೆಂಡಿಸ್ 54; ಆರ್ ಅಶ್ವಿನ್ 4/55, ಜಸ್ಪ್ರೀತ್ ಬುಮ್ರಾ 3/23)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ