ವೀಕೆಂಡ್ ಕರ್ಫ್ಯೂ ಮಧ್ಯೆಯೇ ಅನುಭವ ಮಂಟಪದಲ್ಲಿ ಅಂತರ್ಜಾತಿ ಆದರ್ಶ ವಿವಾಹ
Team Udayavani, Jan 8, 2022, 1:52 PM IST
ಗದಗ: ಕೋವಿಡ್ 3 ನೇ ಅಲೆ ಹಾಗೂ ಒಮಿಕ್ರಾನ್ ಆತಂಕದಿಂದಾಗಿ ವೀಕೆಂಡ್ ಕರ್ಫ್ಯೂ ಮಧ್ಯೆಯೇ ನಗರದ ಜ.ತೋಂಟದಾರ್ಯ ಮಠದ ಅನುಭವ ಮಂಟಪ ಅಂತರ್ಜಾತಿ ಹಾಗೂ ಆದರ್ಶ ವಿವಾಹವೊಂದಕ್ಕೆ ಸಾಕ್ಷಿಯಾಯಿತು.
ನಗರದ ಈರಣ್ಣ ವಿರೂಪಾಕ್ಷಪ್ಪ ಬಡಿಗಣ್ಣವರ ಹಾಗೂ ಶಿಲ್ಪಾ ಭರಮಪ್ಪ ಅಂಕಲಿ ಎಂಬುವರರು ಕಳೆದ ಏಳೆಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಯುವಕ, ಯುವತಿ ಅನ್ಯಜ್ಯಾತಿಗೆ ಸೇರಿದ್ದರಿಂದ ಅವರ ಪ್ರೇಮ ವಿವಾಹಕ್ಕೆ ಜಾತಿಯೇ ಅಡ್ಡಿಯಾಗಿತ್ತು. ಈರಣ್ಣ ಬಡಿಗಣ್ಣವರ ಅವರ ಕೋರಿಕೆ ಮೇರೆಗೆ ಲಿಂಗಾಯತ ಪ್ರಗತಿಶೀಲ ಸಂಘದ ಹಿರಿಯರು ಉಭಯ ಕುಟುಂಬಸ್ಥರನ್ನು ಒಪ್ಪಿಸಿ, ವಿವಾಹಕ್ಕೆ ಮುನ್ನುಡಿ ಬರೆದರು. ಅದರಂತೆ ಶನಿವಾರ ಜ|ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಸವ ಪರಂಪರೆಯ ವಚನ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಯಾವುದೇ ಮಂಗಳವಾದ್ಯ, ಮಂತ್ರ ಘೋಷಗಳ ಸದ್ದುಗದ್ದಲವಿಲ್ಲದೇ, ಕೇವಲ ಬಸವಾದಿ ಶರಣರ ವಚನಗಳ ಪಠಣದೊಂದಿಗೆ ನವ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಬಳಿಕ ಆಶೀರ್ವಚನ ನೀಡಿದ ಜ.ತೋಂಟದ ಸಿದ್ಧರಾಮ ಸ್ವಾಮೀಜಿ, ಸತಿ- ಪತಿಗಳು ಜೀವನದಲ್ಲಿ ಯಾವುದೇ ರೀತಿಯ ಸಂದೇಹಗಳಿಗೆ ಅವಕಾಶ ನೀಡದೇ, ಪರಸ್ಪರ ವಿಶ್ವಾಸ, ಪ್ರೀತಿಯಿಂದ ಸಾಗಬೇಕು. ಬಸವಾದಿ ಶಿವಶರಣರ ಆದರ್ಶದಂತೆ ಜೀವನ ಕಟ್ಟಿಕೊಳ್ಳಬೇಕು. ವಿವಾಹದ ದುಂದು ವೆಚ್ಚಗಳಿಗೆ ಕಾರಣವಾಗುವ ವೈದಿಕ ಆಚರಣೆಗಳನ್ನು ಬದಿಗೊತ್ತಿ, ಶರಣ ಸಂಸ್ಕೃತಿಯಂತೆ ಸರಳ ವಿವಾಹಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ದಂಪತಿಗಳ ಪಾಲಕರು, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳದ ಪ್ರಮುಖರು ಆದರ್ಶ ವಿವಾಹದಲ್ಲಿ ಪಾಲ್ಗೊಂಡು, ನೂತನ ವಧು-ವರರಿಗೆ ಶುಭಕೋರಿ, ಆರ್ಶೀವದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ