ಟೋಕಿಯೊ ಒಲಿಂಪಿಕ್ಸ್ ಗೆ ಸ್ಥಳೀಯರಿಂದಲೇ ವಿರೋಧ!
2021ರಲ್ಲೂ ಒಲಿಂಪಿಕ್ಸ್ ಬೇಡ: ಸಮೀಕ್ಷೆ ವರದಿ ; ಕೋವಿಡ್-19 ಹೆದರಿದ ಜಪಾನಿ ಜನರು
Team Udayavani, Jul 2, 2020, 5:45 AM IST
ಟೋಕಿಯೊ: ಈ ವರ್ಷ ಜಪಾನಿನ ಟೋಕಿಯೊ ದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕೂಟವನ್ನು ಕೋವಿಡ್-19 ಹಿನ್ನೆಲೆಯಲ್ಲಿ 2021ಕ್ಕೆ ಮುಂದೂಡಲ್ಪಟ್ಟಿದೆ.
ಇದೀಗ ಮುಂದಿನ ವರ್ಷವೂ ಅಲ್ಲಿ ಕೂಟ ನಡೆಸುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇಂಥ ಅಭಿಪ್ರಾಯ ವ್ಯಕ್ತಪಡಿಸಿರುವುದು ಬೇರೆ ಯರೂ ಅಲ್ಲ, ಟೋಕಿಯೊ ನಗರದ ಸ್ಥಳೀಯರು ಎನ್ನುವುದು ವಿಶೇಷ.
ಸಮೀಕ್ಷೆಯಲ್ಲಿ ಬಯಲು
ಜಪಾನಿನ 2 ಖ್ಯಾತ ಸುದ್ದಿ ಸಂಸ್ಥೆಗಳು ವಾರಾಂತ್ಯದಲ್ಲಿ ಜನರ ಬಳಿ ತೆರಳಿ ಸಮೀಕ್ಷೆ ನಡೆಸಿವೆ. ಮುಂಬರುವ ವರ್ಷ ಒಲಿಂಪಿಕ್ಸ್ ಕೂಟವನ್ನು ನಡೆಸಬೇಕೇ ಅಥವಾ ಬೇಡವೇ ಎನ್ನುವ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಸಮೀಕ್ಷೆಯಲ್ಲಿ ಶೇ. 51.7ರಷ್ಟು ಜನ ಕೂಟವನ್ನು ಮುಂದೂಡಿಕೆ ಮಾಡಿ ಇಲ್ಲವೇ ರದ್ದುಗೊಳಿಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಉಳಿದ ಶೇ. 46.3 ರಷ್ಟು ಜನ ಕೂಟದ ದಿನಾಂಕವನ್ನು ಮರು ನಿಗದಿಪಡಿಸುವುದನ್ನು ಎದುರು ನೋಡುತ್ತಿದ್ದಾರೆ.
ಶೇ. 27.7ರಷ್ಟು ಜನ 2021ರ ಕೂಟವನ್ನು ಸಂಪೂರ್ಣವಾಗಿ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಶೇ. 24ರಷ್ಟು ಜನ ಮುಂದೂಡಿಕೆಗೆ ಆದ್ಯತೆ ನೀಡಿದ್ದಾರೆ.
ಮುಂದಿನ ವರ್ಷ ಕ್ರೀಡಾಕೂಟವನ್ನು ನೋಡಲು ಬಯಸುತ್ತೇವೆ ಎಂದು ಹೇಳಿದವರಲ್ಲಿ ಶೇ. 31.1ರಷ್ಟು ಜನ ಪ್ರೇಕ್ಷಕರ ನಿಷೇಧದ ಬಗ್ಗೆ ಒಲವು ತೋರಿದ್ದಾರೆ. ಶೇ. 15.2ರಷ್ಟು ಮಂದಿ ವೀಕ್ಷಕರು ಬೇಕು ಎಂದು ಹೇಳಿದ್ದಾರೆ.
ಜನರಿಗೆ ಆತಂಕವೇ ಹೆಚ್ಚು
ಸದ್ಯ ವಿಶ್ವದೆಲ್ಲೆಡೆ ಕೋವಿಡ್-19 ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ನಿಯಂತ್ರಣ ಅಸಾಧ್ಯವಾಗುತ್ತಿದೆ. ಹೀಗಾಗಿ ಮುಂದಿನ ವರ್ಷವೂ ಒಲಿಂಪಿಕ್ಸ್ ನಡೆಸುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ. ವಿಶ್ವದ ವಿವಿಧ ಭಾಗ ಗಳಿಂದ ಕ್ರೀಡಾಪಟುಗಳು, ಜನರು ಟೋಕಿಯೊಗೆ ಬರುತ್ತಾರೆ. ಹಾಗೆ ಬರುವವರು ಕೋವಿಡ್-19ವನ್ನೂ ಹೊತ್ತು ತರಬಹುದು ಎನ್ನುವ ಆತಂಕ ಸ್ಥಳೀಯರದ್ದು. ಇದರಿಂದಾಗಿ ಕೂಟವನ್ನು ಮುಂದೂಡಿ ಇಲ್ಲವೇ ರದ್ದು ಮಾಡಿ ಎಂದು ಒತ್ತಾಯಿಸುತ್ತಿರುವವರ ಸಂಖ್ಯೆಯೂ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!