ಹೈದರಾಬಾದ್‌ಗೆ ಕಾದಿದೆ ಲಕ್ನೋ ಟೆಸ್ಟ್‌


Team Udayavani, May 13, 2023, 7:09 AM IST

SRH LSG

ಹೈದರಾಬಾದ್‌: ಅಂಕ ಪಟ್ಟಿಯಲ್ಲಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿರುವ ಸನ್‌ರೈಸರ್ ಹೈದರಾಬಾದ್‌ ಮತ್ತು ನಿಧಾನವಾಗಿ ಕೆಳಕ್ಕೆ ಇಳಿಯುತ್ತ 5ನೇ ಸ್ಥಾನಕ್ಕೆ ಬಂದು ನೀತಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳಿಗೆ ಶನಿವಾರ ಮಹತ್ವದ ಪಂದ್ಯವೊಂದು ಎದುರಾಗಿದೆ.

10 ಪಂದ್ಯಗಳಿಂದ ಕೇವಲ 8 ಅಂಕ ಹೊಂದಿರುವ ಹೈದರಾಬಾದ್‌ಗೆ ಪ್ಲೇ ಆಫ್ ಬಾಗಿಲು ಬಹುತೇಕ ಮುಚ್ಚಿದೆಯಾದರೂ ಲಕ್ನೋಗೆ ಮೇಲೇರಲು ಇಲ್ಲಿನ ಫ‌ಲಿತಾಂಶ ಅತ್ಯಂತ ಮಹತ್ವದ್ದಾಗಿದೆ. ಆದರೆ ಪಂದ್ಯ ನಡೆಯುವುದು ಹೈದರಾಬಾದ್‌ನಲ್ಲಿ ಎಂಬುದು ಐಡನ್‌ ಮಾರ್ಕ್‌ರಮ್‌ ಪಡೆಗೆ ಪ್ಲಸ್‌ ಪಾಯಿಂಟ್‌.

ಸತತ ಎರಡು ಗೆಲುವು
ಈವರೆಗೆ ಹೈದರಾಬಾದ್‌ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಲಕ್ನೋ ಜಯಿಸಿದೆ. ಇದರಲ್ಲಿ ಪ್ರಸಕ್ತ ಋತುವಿನ ಮೊದಲ ಸುತ್ತಿನ ಮುಖಾಮುಖೀಯೂ ಸೇರಿದೆ. ಲಕ್ನೋದಲ್ಲಿ ನಡೆದ ಸಣ್ಣ ಮೊತ್ತದ ಈ ಪಂದ್ಯದಲ್ಲಿ ರಾಹುಲ್‌ ಪಡೆ 5 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ಹೈದರಾಬಾದ್‌ 8 ವಿಕೆಟಿಗೆ ಕೇವಲ 121 ರನ್‌ ಗಳಿಸಿದರೆ, ಲಕ್ನೋ 16 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ ಗುರಿ ಮುಟ್ಟಿತ್ತು. ಕೃಣಾಲ್‌ ಪಾಂಡ್ಯ ಅವರ ಆಲ್‌ರೌಂಡ್‌ ಶೋ ಈ ಪಂದ್ಯದ ಆಕರ್ಷಣೆಯಾಗಿತ್ತು. 18ಕ್ಕೆ 3 ವಿಕೆಟ್‌ ಕಿತ್ತ ಪಾಂಡ್ಯ, ರನ್‌ ಚೇಸಿಂಗ್‌ ವೇಳೆ 34 ರನ್‌ ಕೊಡುಗೆ ಸಲ್ಲಿಸಿದ್ದರು. ಆದರೆ ಈ ಪಂದ್ಯದ ಬಳಿಕ ಕೃಣಾಲ್‌ ಅಷ್ಟೇನೂ ಕ್ಲಿಕ್‌ ಆಗಿಲ್ಲ ಎಂಬದನ್ನು ಗಮನಿಸಬೇಕು.

ಈಗ ಹ್ಯಾಟ್ರಿಕ್‌ ಸೋಲು
ನಾಯಕ ಕೆ.ಎಲ್‌. ರಾಹುಲ್‌ ಹೊರಬಿದ್ದ ಬಳಿಕ ಲಕ್ನೋಗೆ ಅದೃಷ್ಟ ಕೈಕೊಡಲಾರಂಭಿಸಿದೆ. ಅದು ಕೊನೆಯ ಸತತ 3 ಪಂದ್ಯಗಳಲ್ಲಿ ಎಡವಿದೆ. ಆದರೆ “ಪ್ಲೇ ಆಫ್ ಮಿಕ್ಸ್‌’ನಲ್ಲಿದೆ. ಗೆಲುವು ಅನಿವಾರ್ಯ ಎಂಬ ಸ್ಥಿತಿ ಕೃಣಾಲ್‌ ಪಾಂಡ್ಯ ಪಡೆಯದ್ದು. ರನ್‌ರೇಟ್‌ ಪ್ಲಸ್‌ನಲ್ಲಿರುವುದು ಲಕ್ನೋಗೊಂದು ಲಾಭ.

ಹೈದರಾಬಾದ್‌ ಟ್ರ್ಯಾಕ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವುದು ವಾಡಿಕೆ. ಆಗ ಲಕ್ನೋದ ತ್ರಿವಳಿ ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ, ಅಮಿತ್‌ ಮಿಶ್ರಾ ಮತ್ತು ಕೃಣಾಲ್‌ ಪಾಂಡ್ಯ ಮ್ಯಾಜಿಕ್‌ ಮಾಡಬಲ್ಲರೆಂಬ ನಿರೀಕ್ಷೆ ಇರಿಸಿಕೊಳ್ಳಬಹುದು. ಬಿಷ್ಣೋಯಿ ಲಕ್ನೋದ ಯಶಸ್ವಿ ಸ್ಪಿನ್ನರ್‌ ಆಗಿದ್ದು, 12 ವಿಕೆಟ್‌ ಕೆಡವಿದ್ದಾರೆ.

ಲಕ್ನೋ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠವಾಗಿಯೇ ಇದೆ. ಕೈಲ್‌ ಮೇಯರ್, ವಿಳಂಬವಾಗಿ ತಂಡವನ್ನು ಸೇರಿಕೊಂಡ ಕ್ವಿಂಟನ್‌ ಡಿ ಕಾಕ್‌, ಮಾರ್ಕಸ್‌ ಸ್ಟೋಯಿನಿಸ್‌, ನಿಕೋಲಸ್‌ ಪೂರಣ್‌, ಆಯುಷ್‌ ಬದೋನಿ ಮೊದಲಾದ ಬಿಗ್‌ ಹಿಟ್ಟರ್ ಸಾಲಾಗಿ ನಿಂತಿದ್ದಾರೆ.

“ಆರೇಂಜ್‌ ಆರ್ಮಿ” ಹೈದರಾಬಾದ್‌ ಕಾಗದದಲ್ಲಿ ಬಲಿಷ್ಠ ತಂಡ. ವಿದೇಶಿ ಬ್ಯಾಟರ್‌ಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ನಾಯಕ ಐಡನ್‌ ಮಾರ್ಕ್‌ರಮ್‌, ಹೆನ್ರಿಚ್‌ ಕ್ಲಾಸೆನ್‌ ಮತ್ತು ನ್ಯೂ ಎಂಟ್ರಿ ಆಗಿರುವ ಗ್ಲೆನ್‌ ಫಿಲಿಪ್ಸ್‌ ಇಲ್ಲಿನ ಪ್ರಮುಖರು. ಶತಕ ಬಾರಿಸಿದ ಬಳಿಕ ಚಾರ್ಮ್ ಕಳೆದುಕೊಂಡ ಹ್ಯಾರಿ ಬ್ರೂಕ್‌ ಸ್ಥಾನವೀಗ ಫಿಲಿಪ್ಸ್‌ ಪಾಲಾಗಿದೆ.

ಭಾರತದ ಆಟಗಾರರಲ್ಲಿ ಅಭಿಷೇಕ್‌ ಶರ್ಮ ಪರ್ವಾಗಿಲ್ಲ. ಆದರೆ ಮಾಯಾಂಕ್‌ ಅಗರ್ವಾಲ್‌ (9 ಪಂದ್ಯ, 187 ರನ್‌), ರಾಹುಲ್‌ ತ್ರಿಪಾಠಿ 10 ಪಂದ್ಯ, 237 ರನ್‌) ಮಂಕಾಗಿದ್ದಾರೆ. ಸ್ಪಿನ್‌ ವಿಷಯಕ್ಕೆ ಬಂದಾಗ ಮಾಯಾಂಕ್‌ ಮಾರ್ಕಂಡೆ ಮಾತ್ರ ಗೋಚರಿಸುತ್ತಾರೆ. ವೇಗದ ವಿಭಾಗದಲ್ಲಿ ಭುವನೇಶ್ವರ್‌ ಕುಮಾರ್‌, ಟಿ. ನಟರಾಜನ್‌ ಉತ್ತಮ ಲಯದಲ್ಲಿದ್ದಾರೆ.

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.