ಚುನಾವಣ ಕಣದಲ್ಲಿ ಸದ್ದು ಮಾಡಿದ ಕಾಂಚಾಣ! ಆರೋಪ-ಪ್ರತ್ಯಾರೋಪಗಳ ಅಬ್ಬರ
Team Udayavani, May 13, 2023, 7:10 AM IST
ಮಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಕಾಂಚಾಣ ಭಾರೀ ಸದ್ದು ಮಾಡಿದೆ. ಕರಾವಳಿ ಭಾಗದಲ್ಲೂ ಚುನಾವಣಾ ಆಯೋಗದ ಹದ್ದಿನ ಕಣ್ಣು ತಪ್ಪಿಸಿ ಯಥೇತ್ಛ ಹಣ ವ್ಯಯಿಸಲಾಗಿದೆ ಎನ್ನಲಾಗುತ್ತಿದೆ. ಇದರ ಜತೆಗೆ ಮದ್ಯದ ಆಮಿಷವೂ ಕೆಲಸ ಮಾಡಿರುವ ಸಾಧ್ಯತೆ ಹೆಚ್ಚು. ನಡೆದಿರುವ ದಾಳಿ, ದಾಖಲಾಗಿರುವ ಪ್ರಕರಣಗಳು ಇದನ್ನು ಪುಷ್ಟೀಕರಿಸುವಂತಿವೆ.
ಮತದಾನದ ದಿನದವರೆಗೆ ದ.ಕ ಜಿಲ್ಲೆಯಲ್ಲಿ ಹಣ ವಿತರಣೆ ಬಗ್ಗೆ 3 ದೂರುಗಳು ದಾಖಲಾಗಿದ್ದರೆ ಮತದಾನದ ಹಿಂದಿನ ದಿನ ರಾತ್ರಿ 5 ದೂರುಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ 61,500 ರೂ. ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಹಣ ಹಂಚಲಾಗಿದೆ ಎಂಬ ಆರೋಪವೂ ಕೆಲವು ಕ್ಷೇತ್ರಗಳಲ್ಲಿದ್ದು, ಪ್ರಮುಖ ಪಕ್ಷಗಳು ಪರಸ್ಪರ ಆರೋಪಿಸಿವೆ. ಅನೇಕ ಕಡೆಗಳಲ್ಲಿ ಹಣ ಹಂಚಿಕೆ ವಿಷಯವೇ ಕಾರ್ಯಕರ್ತರ ನಡುವಿನ ಸಂಘರ್ಷಕ್ಕೆ ಮುಖ್ಯ ಕಾರಣವಾಗಿತ್ತು. ಪೊಲೀಸರಿಗೆ ದೊರೆತಿರುವ ಮಾಹಿತಿಯ ಪೈಕಿ ಕೆಲವು ಸುಳ್ಳು ಮಾಹಿತಿ ಆಗಿತ್ತು. ಇನ್ನು ಕೆಲವೆಡೆ ಸಾಕ್ಷ್ಯಲಭಿಸಿಲ್ಲ.
ಮತದಾನದ ಹಿಂದಿನ ದಿನ ತಡ ರಾತ್ರಿಯವರೆಗೂ ಕೆಲವು ಪಕ್ಷಗಳ ಕಾರ್ಯಕರ್ತರು ಹಣ ಹಂಚುವ ಕಾರ್ಯದಲ್ಲಿ ತೊಡಗಿದ್ದರು ಎಂದು ನಾಗರಿಕರು, ಕಾರ್ಯಕರ್ತರು ಆರೋ ಪಿಸಿದ್ದರು. ಆದರೆ ಈ ಬಗ್ಗೆ ದಾಖಲಾದ ದೂರುಗಳ ಸಂಖ್ಯೆ ಕಡಿಮೆ.
ಕೋ.ರೂ.ಅಕ್ರಮ- ಸಕ್ರಮ!
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಣ, ಉಡುಗೊರೆ ಯಂತಹ ವಸ್ತುಗಳ ಅಕ್ರಮ ಸಾಗಣೆ ತಡೆಗೆ ವ್ಯಾಪಕ ತಪಾಸಣೆ ನಡೆಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ.29 ರಿಂದ ಮೇ 10ರವರೆಗೆ ವಾಹನಗಳ ತಪಾಸಣೆ ವೇಳೆ ಸೂಕ್ತ ದಾಖಲೆಗಳು ಇಲ್ಲದ ಒಟ್ಟು 1.73 ಕೋ.ರೂ. ಪತ್ತೆ ಮಾಡಲಾಗಿತ್ತು. ಅನಂತರ ವಾರಸುದಾರರು ವಿಚಾರಣೆ ವೇಳೆ ಸೂಕ್ತ ದಾಖಲೆಗಳನ್ನು ತಂದಿರುವ ಹಿನ್ನೆಲೆಯಲ್ಲಿ ವಾಪಸ್ ನೀಡಲಾಗಿದೆ.
ಅಬಕಾರಿ ಇಲಾಖೆ: ಒಟ್ಟು 1,798 ದಾಳಿ
ಅಬಕಾರಿ ಇಲಾಖೆ ಮಾ.29ರಿಂದ ಮೇ 10ರವರೆಗೆ ಒಟ್ಟು 1,798 ದಾಳಿ ಗಳನ್ನು ನಡೆಸಿ 85 ಘೋರ ಮೊಕ ದ್ದಮೆಗಳನ್ನು ದಾಖಲಿಸಿದೆ. ಈ ವೇಳೆ 2,023.640 ಲೀ. ಐಎಂಎಲ್, 217.950 ಲೀ. ಗೋವಾ ಮದ್ಯ, 2,220 ಲೀ. ಶೇಂದಿ, 81.720 ಲೀ. ಕಳ್ಳಭಟ್ಟಿ, 1,225 ಲೀ ಗೇರುಹಣ್ಣಿನ ಕೊಳೆ, 175.750 ಲೀ. ಬಿಯರ್, 7.249 ಕೆಜಿ ನಿಷೇಧಿತ ಮಾದಕ ವಸ್ತು, 42 ವಾಹನಗಳನ್ನು ಸ್ವಾಧೀನಪಡಿಸಿ ಕೊಂಡಿದೆ.
ಓರ್ವ ಅಭ್ಯರ್ಥಿಗೆ ಗರಿಷ್ಠ ವೆಚ್ಚ 40 ಲ.ರೂ. ಎಂಬುದಾಗಿ ಚುನಾವಣ ಆಯೋಗ ನಿಗದಿಗೊಳಿಸಿತ್ತು.
ವೆಚ್ಚದ ಪರಿಶೀಲನೆ
ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ಸಂಗ್ರಹಿಸಿರುವ ಮಾಹಿತಿಯನ್ನು ಪರಿಶೀಲಿಸಿ ಇನ್ನಷ್ಟೇ ಕ್ರೋಢೀಕರಿಸಬೇಕಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1.73 ಕೋ.ರೂ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ವಾರಸುದಾರರು ಸೂಕ್ತ ದಾಖಲೆಗಳನ್ನು ನೀಡಿ ವಾಒಸು ಪಡೆದಿದ್ದಾರೆ.
-ಡಾ| ಕುಮಾರ್, ಅಧ್ಯಕ್ಷರು, ಸ್ವಾಧೀನಪಡಿಸಿಕೊಂಡ ನಗದು ಹಣ ಇತ್ಯರ್ಥ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್